ಪದ / ದೇವರನಾಮ

ದಾಸರ ಪದಗಳು

ಪಾಲಿಸೋ ನರಸಿಂಹ

( ರಾಗ - ಶಂಕರಾಭರಣ ( ಭೀಮ್ ಪಲಾಸ್) ಅಟತಾಳ ( ತೀನ್ ತಾಲ್) ) ಪಾಲಿಸೋ ನರಸಿಂಹ ಪಾಲಿಸೊ ||ಪ|| ಪಾಲಿಸೊ ಪರಮಪಾವನ ಕಮ- ಲಾಲಯ ನಂಬಿದೆ ನಿನ್ನ ಆಹಾ ಬಾಲೇಂದುಕೋಟಿಯ ಸೋಲಿಪ ನಖತೇಜ ಮೂರ್ಲೋಕದರಸನೆ ಪಾಲಿಸು ಬಿಡದಲೆ ||ಅ.ಪ|| ಹಿಂದೆ ಪ್ರಹ್ಲಾದನ ಮೊರೆಯ ಕೇಳಿ ಬಂದು ಕಾಯ್ದೆಯೊ ಭಕ್ತಪ್ರಿಯಸಖ ಸಂದೋಹ ಮೂರುತಿ ಆಯತಾಕ್ಷ ಎಂದೆಂದು ಬಿಡದಿರು ಕೈಯ ಆಹಾ ವೃಂದಾರಕೇಂದ್ರಗಳ ಬಂದ ದುರಿತಗಳ ಹಿಂದೆ ಮಾಡಿ ಕಾಯ್ದ ಇಂದಿರಾರಮಣನೆ ||೧|| ಹರಣದಲ್ಲಿ ನಿನ್ನ ರೂಪ ತೋರಿ ಪರಿಹರಿಸೊ ಎನ್ನ ತಾಪ, ದೂರ ಇರದಿರೊ ಹರಿ ಸಪ್ತದ್ವೀಪಾಧಿಪ ಸಿರಿಪತಿ ಭಕ್ತ ಸಲ್ಲಾಪ ಆಹಾ ಕರಣಶುದ್ಧನ ಮಾಡಿ ಕರೆಯೊ ನಿನ್ನ ಬಳಿಗೆ ನರಕಂಠೀರವ ನಿನ್ನ ಚರಣ ಆಶ್ರಯಿಸಿದೆ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಂಗನಾಯಕ ರಾಜೀವಲೋಚನ

ರಂಗನಾಯಕ ರಾಜೀವಲೋಚನ ರಮಣನೆ ಬೆಳಗಾಯಿತೇಳೆನುತ |ಪ| ಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳು ಶೃಂಗಾರದ ನಿದ್ರೆ ಸಾಕೆನುತ |ಅ ಪ| ಪಕ್ಷಿ ರಾಜನು ಬಂದು ಬಾಗಿಲಲ್ಲಿ ನಿಂದು ಅಕ್ಷಿತೆರೆದು ಬೇಗ ಈಕ್ಷಿಸೆಂದು ಪಕ್ಷಿ ಜಾತಿಗಳೆಲ್ಲ ಚಿಲಿಪಿಲಿಗುಟ್ಟುತ್ತಾ ಸೂಕ್ಷ್ಮದಲಿ ನಿನ್ನ ಸ್ಮರಿಸುವವೋ ಕೃಷ್ಣ|| ಸನಕ ಸನಂದನ ಸನತ್ಸುಜಾತರು ಬಂದು ವಿನಯದಿಂ ಕರಮುಗಿದು ಓಲೈಪರು ಘನ ಶುಕ ಶೌನಕ ವ್ಯಾಸ ವಾಲ್ಮೀಕರು ನೆನೆದು ನೆನೆದು ಕೊಂಡಾದುವರು ಹರಿಯೇ|| ಸುರರು ಕಿನ್ನರರು ಕಿಂಪುರುಷರು ಉರಗರು ಪರಿಪರಿಯಲಿ ನಿನ್ನ ಸ್ಮರಿಸುವರು ಅರುಣನು ಬಂದು ಉದಯಾಚಲದಿ ನಿಂದು ಕಿರಣದೋರುವನು ಭಾಸ್ಕರನು ಶ್ರೀ ಹರಿಯೆ|| ಪದುಮನಾಭನೆ ನಿನ್ನ ನಾಮಾಮೃತವನ್ನು ಪದುಮಾಕ್ಷಿಯರು ತಮ್ಮ ಗೃಹದೊಳಗೆ ಉದಯದೊಳೆದ್ದು ಸವಿದಾಡುತ್ತ ಪಾಡುತ್ತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಕ್ಕಿಯ ಹೆಗಲೇರಿ ಬಂದವಗೆ

ಹಕ್ಕಿಯ ಹೆಗಲೇರಿ ಬಂದವಗೆ ನೋಡಕ್ಕ ಮನಸೋತೆ ನಾನವಗೆ|| ಸತ್ರಾಜಿತನ ಮಗಳೆತ್ತಿದ ಉನ್ಮತ್ತ ನರಕನೊಳು ತಾ ಕಾದಿದ ಮತ್ತೆ ಕೆಡಹಿದ ಅವನಂಗವ ಸತಿಗಿತ್ತನು ತಾ ಆಲಿಂಗನವ|| ಹದಿನಾರು ಸಾವಿರ ನಾರಿಯರ ಸೆರೆ ಮುದದಿಂದ ಬಿಡಿಸಿ ಮನೋಹರ ಅದಿತಿಯ ಕುಂಡಲ ಕಳಿಸಿದ ಹರಿ ವಿಧಿಸುರನೃಪರನು ಸಲಹಿದ|| ಉತ್ತಮ ಪ್ರಾಗ್ಜೋತಿಷಪುರವ ಭಗದತ್ತಗೆ ಕೊಟ್ಟ ವರಾಭಯವ ಕರ್ತ ಕೃಷ್ಣಯ್ಯನ ನಂಬಿದೆ ಶ್ರೀಮೂರ್ತಿಯ ಪಾದವ ಹೊಂದಿದೆ|| ನರಕಚತುರ್ದಶಿ ಪರ್ವದ ದಿನ ಹರುಷದಿ ವ್ರಕಟಾದನು ದೇವ ಶರಣಾಗತಜನ ವತ್ಸಲಾ ರಂಗ ಪರಮ ಭಾಗವತರ ಪರಿಪಾಲ|| ಹೊಗಳಿ ಕೃಷ್ಣಯ್ಯನ ಮಹಿಮೆಯ ಮುಕ್ತಿ ನಗರದ ಅರಸನ ಕೀರ್ತಿಯಾ ಜಗದೀಶ ಪ್ರಸನ್ವೆಂಕಟೇಶನು ಭಕ್ತರಘಹಾರಿ ರವಿ ಕೋಟಿಪ್ರಕಾಶನು||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನರಸಿಂಹ ಪಾಹೀ ಲಕ್ಷ್ಮೀನರಸಿಂಹ

( ಕೃತಿಕಾರರು - ಜಗನ್ನಾಥದಾಸರು) ರಾಗ ಶಂಕರಾಭರಣ (ದುರ್ಗಾ) ಅಟತಾಳ ) ನರಸಿಂಹ ಪಾಹೀ ಲಕ್ಷ್ಮೀನರಸಿಂಹ ||ಪ|| ನರಸಿಂಹ ನಮಿಪೆ ನಾ ನಿನ್ನ , ಚಾರು- ಚರಣ ಕಮಲಕೆ ನೀನೆನ್ನ , ಆಹಾ ಕರವ ಪಿಡಿದು ನಿಜಶರಣನೆಂದೆನಿಸು ಭಾ- ಸುರ ಕರುಣಾಂಬುಧೆ ಗರುಡವಾಹನ ಲಕ್ಷ್ಮೀ- ||ಅ.ಪ.|| ತರಳ ಪ್ರಹ್ಲಾದನ ನುಡಿಯ ಕೇಳಿ ತ್ವರಿತದಿ ಬಂದೆ ಎನ್ನೊಡೆಯ, ಏನು ಕರುಣಾಳೊ , ಭಕ್ತರ ಭಿಡೆಯ ಮೀರ- ಲರಿಯೆನೆಂದೆಂದು ಕೆಂಗಿಡಿಯ ಆಹಾ ಭರದಿಂದುಗುಳುತ ಬೊಬ್ಬಿರಿದು ಬೆಂಬೊತ್ತಿ ಕ- ರ್ಬುರ ಕಶಿಪುವಿನ ಮುಂಗುರುಳು ಪಿಡಿದೆ ಲಕ್ಷ್ಮೀ- ||೧|| ಪ್ರಳಯಾಂಬುನಿಧಿ ಘನ ಘೋಷದಂತೆ ಘುಳಿಘುಳಿಸುತಲಿ ಪ್ರದೋಷಕಾಲ ತಿಳಿದು ದೈತ್ಯನ ಅತಿರೋಷದಿಂದ- ಪ್ಪಳಿಸಿ ಮೇದಿನಿಗೆ ನಿರ್ದೋಷ ಆಹಾ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದನೆ ಪಾಲಿಸು

ರಾಗ - ಕಾಂಬೋಧಿ - ಕೀರ್ವಾಣಿ (ಮಾಲಕಂಸ್) ಝಂಪೆತಾಳ ಕೃತಿಕಾರರು- ಜಗನ್ನಾಥದಾಸರು ಇದನೆ ಪಾಲಿಸು ಜನ್ಮಜನ್ಮಗಳಲಿ ಮಧುಸೂದನನನೆ ನಿನ್ನ ಸ್ಮರಣೆ ದಾಸರ ಸಂಗ ||ಪ|| ಪುಣ್ಯ-ಪಾಪ ಜಯಾಜಯ ಕೀರ್ತಿ ಅಪಕೀರ್ತಿ ಮನ್ಯು ಮೋಹಾಸಕ್ತಿ ಕಾಮಲೋಭಾ ನಿನ್ನಧೀನವು ಎನ್ನದಲ್ಲವೆಂದಿಗು ಪ್ರಕೃತಿ- ಜನ್ಯಗುಣ ಕಾರ್ಯವೆಂಬ ಜ್ಞಾನವೇ ಸತತ ||೧|| ಗುಣಕರ್ಮಕಾಲಗಳ ಮನೆಮಾಡಿ ಜೀವರಿಗೆ ಉಣಿಸುತಿಹೆ ಸುಖದುಃಖ ಘನಮಹಿಮನೆ ಗುಣಗಳಭಿಮಾನಿ ಶ್ರೀವನಿತಾರಮಣ ಪ್ರಯೋ- ಜನವಿಲ್ಲದಲೆ ಮಾಡಿ ಜನರ ಮೋಹಿಸೆಯೆಂಬ ||೨|| ಈಶ ನೀನಾದ ಕಾರಣದಿಂದ ಸುಖದುಃಖ ಲೇಶವಿಲ್ಲವು ಸರ್ವಕಾಲಗಳಲಿ ಕೇಶವಜಗನ್ನಾಥವಿಥಲನೆ ಭಕ್ತರ ಪ್ರ- ಯಾಸವಿಲ್ಲದೆ ಕಾದಿಯೆಂಬಾ ಸ್ಮರಣೆಯ ನಿರುತ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಮಾಮನೋಹರನೆ

ರಾಗ - ಬಿಲಹರಿ(ಭೈರವಿ) ರೂಪಕತಾಳ (ದಾದರಾ) ಕೃತಿಕಾರರು-ಜಗನ್ನಾಥದಾಸರು ರಮಾಮನೋಹರನೆ ದೀನ- ಪತಿತಪಾವನಾ ||ಪ|| ಚೆಂದದಿಂದ ವೇದ ತಂದ ಮಂದರೋದ್ಧರಾ ಅರ- ವಿಂದನಯನ ಬಂದು ರಕ್ಷಿಸೋ ಇಂದು ಭೂಧರಾ ||೧|| ಕರುಳಮಾಲೆ ಧರಿಸಿದ ಶ್ರೀ- ವರದ ವಾಮನಾಧೃತ ಕರದ ಪರಶುರಾಮ ರಾಘವ ಯದುಕುಲೋತ್ತಮಾ ||೨|| ಲೋಕಮೋಹಕ ಬುದ್ಧನಾಗಿ ತೇಜಿಯನೇರಿದಾ ಜಗ- ದೇಕ ಜಗನ್ನಾಥವಿಠಲ ಭೀಕರಾಂತಕಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕ್ಷೀರವಾರಿಧಿ ಕನ್ನಿಕೆ

ಕ್ಷೀರವಾರಿಧಿ ಕನ್ನಿಕೆ ಮಾರ ಜನಕೆ ಈರೇಳು ಲೋಕ ನಾಯಿಕೆ ವಾರವಾರಕೆ ಆರಾಧಿಪುದಕೆ ಚಾರು ಮನಸು ಕೊಡು ದೂರ ನೋಡದಲೆ ಶ್ರೀಧರ ದುರ್ಗ ಆಂಬ್ರಣಿ ನಿತ್ಯ ಕಲ್ಯಾಣಿ ವೇದವತಿಯೆ ರುಕ್ಮಿಣಿ ವೇದ ವೇದಾಂತಭಿಮಾನಿ ವಾರಿಜಪಾಣಿ ಆದಿಮಧ್ಯಾಂತ ಗುಣ ಶ್ರೇಣಿ ಸಾಧು ಜನರ ಹೃದಯಾಬ್ಜವಿರಾಜಿತೇ ಖೇದಗೊಳಿಪ ಕಾಮ ಕ್ರೋಧಗಳೋಡಿಸಿ ನೀದಯದಲಿ ಮೇಲಾದಗತಿಗೆ ಪಂಚಬೇಧಮತಿಯ ಕೊಡು ಮಾಧವ ಪ್ರಿಯಳೇ ಶ್ರೀ ಮಾಯಾ ಜಯಾ ಕೃತಿ ಶಾಂತಿ ದೇವಿ ಜಯಂತಿ ನಾಮದಲಿಪ್ಪ ಜಯವಂತಿ ಕೋಮಲವಾದ ವೈಜಯಂತಿ ಧರಿಸಿದ ಶಾಂತಿ-ಸೋಮಾರ್ಕ ಕೋಟಿಮಿಗೆ ಕಾಂತಿ ತಾಮರಸಾಂಬಿಕೆ ರಾಮ ಲಕುಮಿ ಸತ್ಯಭಾಮೆ ಭವಾರಣ್ಯ ಧೂಮಕೇತಳೇ ಯಾಮಯಾಮಕೆ ಹರಿನಾಮವ ನುಡಿಸುತ್ತಮರೊಡನೆ ಪರಿಣಾಮವ ನೀವುದು ನಾನಾ ಭರಣ ಭೂಷಿತೆ ಧಾರುಣಿಜಾತೆ ಜ್ಞಾನಿಗಳ ಮನೋಪ್ರೀತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧನ ನಿಲ್ಲದಯ್ಯ

ಧನ ನಿಲ್ಲದಯ್ಯ ಸಾಧನ ನಿಲ್ಲುವುದಯ್ಯ ತನು ನಿಲ್ಲದಯ್ಯ ದಾತನು ಎಣಿಸಯ್ಯ| ಹಣ ಪುಟ್ಟುವುದು ಸುಗುಣ ಪುಟ್ಟದಯ್ಯ ಗುಣನಿಧಿ ಹರಿಯ ನೀನೆಣಿಸಿ ಬಾಳಯ್ಯಾ|| ಜನರು ಬರುವರು ಸಜ್ಜನ ಬಾರರಯ್ಯ ಅನುಸರಿಸುತ ಜೀವನ ಪೊರೆಯಯ್ಯ|| ಭಾಗ್ಯನಿಧಿ ವಿಠಲನ ಆಜ್ಞೆ ಇದಯ್ಯ ಸುಜನರ ಸೇವಿಸಿ ಯೋಗ್ಯನೆಂದಿನಿಸಯ್ಯಾ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀಲಲೋಹಿತ ಪಾಲಯಮಾಂ

ರಾಗ ಕಾಂಬೋಧಿ(ಬಿಲಾವಲ್ ) ಝಂಪೆತಾಳ (ಕಹರವಾ) ನೀಲಲೋಹಿತ ಪಾಲಯಮಾಂ , ನೀಲಲೋಹಿತ ||ಪ|| ಫಾಲನಯನ ಶುಂಡಾಲಚರ್ಮ ಸುದು- ಕೂಲ ಮೃಡ ಪಾಲಿಸು ಕರುಣದಿ ||ಅ.ಪ|| ನಂದಿವಾಹನ ನಮಿಪೆ ಖಳ , ವೃಂದ ಮೋಹನ ಅಂಧಕರಿಪು ಶಿಖಿಸ್ಯಂದನ , ಸನಕ ಸ-ನಂದನಾದಿ ಮುನಿವಂದಿತ ಪದಯುಗ ||೧|| ಸೋಮಶೇಖರ-ಗಿರಿಜಾ ಸು-ತಾಮ್ರಲೇಖರಾ- ಸ್ತೋಮವಿನುತ ಭವಭೀಮ ಭಯಂಕರ, ಕಾಮಾಹಿತ ಗುಣಧಾಮ ದಯಾನಿಧೇ ||೨|| ನಾಗಭೂಷಣ ವಿಮಲ ಸ-ದ್ರಾಗ ಪೋಷಣ ಭೋಗಿಶಯನ ಜಗನ್ನಾಥವಿಟ್ಠಲನ , ಯೋಗದಿ ಭಜಿಸುವ ಭಾಗತರೊಳಿಡು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶಂಭೋ ಸುರಗಂಗಾಧರನೆ

ಕೃತಿಕಾರರು-ಜಗನ್ನಾಥದಾಸರು ರಾಗ - ಮೋಹನ (ಜೀವನಪುರಿ) ಅಟತಾಳ(ದೀಪಚಂದ) ಶಂಭೋ ಸುರಗಂಗಾಧರನೆ ಪಾಲಿ- ಸಂಬಾರಮಣ ಲಿಂಗ ||ಪ|| ನಂಬಿದವರಘ ಕಾದಂಬಿನಿಪವನ ಹೇ- ರಂಬಜನಕ ಕರುಣಾಂಬುಧಿ ಗುರುವರ ||ಅ.ಪ|| ಇಳಿದೇರ ಇಂದುಮುಖ ಈಪ್ಸಿತ ಫಲ ಸಲಿಸುವ ಘನತ್ರಿಶೂಲಿ ಸಲೆ ನಂಬಿದೆನೋ ಹಾಲಾಹಲ ಕಂಠ , ಎನ್ನ ನೀ ಸಲಹೋ ಸಂತತ ರೌಪ್ಯಾಚಲವಾಸ ವರ ಪಂಪಾ- ನಿಲಯ ನಿರ್ಜರ ಸೇವಿತಾನಲ ನಳಿನಸಖ ಸೋಮೇಕ್ಷಣನೆ ಬಾಂ- ದಳ ಪುರಾಂತಕ ನಿಜ ಶರಣ ವ- ತ್ಸಲ ವೃಷಾರೋಹಣ ವಿಬುಧವರ ||೧|| ಮಾರಾರಿ ಮಹದೇವ ನಿನ್ನಯ ಪಾದ ವಾರಿಜ ದಳಯುಗ್ಮವ ಸಾರಿದೆ ಸತತ ಸರೋರುಹೇಕ್ಷಣನ ಹೃ- ದ್ವಾರಿಜದಲಿ ತೋರೋ ಗಾರು ಮಾಡದಲೆನ್ನ ಆರುಮೊಗನಯ್ಯ ಅಮಿತಗುಣಗಣ ವಾರಿನಿಧಿ ವಿಘತಾಘ ವ್ಯಾಳಾ ಗಾರವಿತ್ತ ಪವಿತ್ರ ಸುಭಗ ಶ- ರೀರ ದುರಿತಾರಣ್ಯ ಪಾವಕ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು