ಪದ / ದೇವರನಾಮ

ದಾಸರ ಪದಗಳು

ಗಂಡಬಿಟ್ಟ ಗಯ್ಯಾಳಿ ಕಾಣಣ್ಣ




ಗಂಡಬಿಟ್ಟ ಗಯ್ಯಾಳಿ ಕಾಣಣ್ಣ- ಅವಳ
ಕಂಡರೆ ಕಡೆಗಾಗಿ  ತಿರುಗಿಪೋಗಣ್ಣ ||ಪ||

ಊರೊಳಗೆ ತಾನು ಪರದೇಶಿಯೆನ್ನುವಳು
ಸಾರುತ ತಿರುಗುವಳು ಮನೆಮನೆಯ
ಕೇರಿಕೇರಿಗುಂಟ ಕೆಲೆಯುತ ತಿರುಗುವಳು
ನಾರಿಯಲ್ಲವೋ ಮುಕ್ಕಮಾರಿ ಕಾಣಣ್ಣ ||೧||

ಅತ್ತೆ ಮಾವನ ಕೂಡ ಅತಿಮತ್ಸರವ ಮಾಡಿ
ನೆತ್ತಿಗೆ ಮದ್ದನೆ ಊಡುವಳು
ಸತ್ಯದ ದೇವರ ಸತ್ಯ ನಿಜವಾದರೆ
ಬತ್ತಲೆ ಅಚ್ಚಂಬಿಲೂಡೇನೆಂಬುವಳು ||೨||

ಹಲವು ಜನರೊಳು ಕಿವಿಮಾತನಾಡುವಳು
ಹಲವು ಜನರೊಳು ಕಡಿದಾಡುವಳು
ಹಲವು ಜನರೊಳು ಕೂಗಿ ಬೊಬ್ಬೆಯನಿಡುವಳು
ತಳವಾರ ಚಾವಡಿಯಲಿ ಒರಲಿಹಳಣ್ಣ ||೩||


ಪರಪುರುಷರ ಕೂಡಿ ಸರಸವಾಡುತ  ಹೋಗಿ

ದಾಸ ಸಾಹಿತ್ಯ ಪ್ರಕಾರ
ಬರೆದವರು

ಗಳಿಸಿದೆನು ಗಳಿಸಿದೆನು ಘಳಿಗಿಯೊಳಗೆ

ಗಳಿಸಿದೆನು ಗಳಿಸಿದೆನು ಘಳಿಗಿಯೊಳಗೆ
ಗಳಿಸಿದಾಗಳಿಗೆ ಅಂತಃಕರಣದೊಳಗೆ ||ಧ್ರುವ||

ಗಳಿಸಿದೆನು  ಗುರುಕರುಣ, ಗಳಿಸಿದೆನು  ಗುರುಚರಣ
ಗಳಿಸಿದೆನು  ಗುರುಸ್ಮರಣ ಚಿಂತನಿಯನು ||೧||

ಗಳಿಸಿದೆನು ಗುರುಜ್ಞಾನ, ಗಳಿಸಿದೆನು  ಗುರುಮೋನ
ಗಳಿಸಿದೆನು   ಗುರುಜ್ಞಾನ ಧಾರಣವನು ||೨||

ಗಳಿಸಿದೆನು  ಇಳೆಯೊಳು ಮಹಿಪತಿ ಇಹಪರದೊಳು
ಸಾಯುಜ್ಯ ಸದ್ಗತಿಯ ಮುಕ್ತಿಗಳು ||೩||

--ಮಹಿಪತಿದಾಸರು






 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೋಪಿ ಕೇಳ್ ನಿನ್ನ ಮಗ ಜಾರ

ಕೀರ್ತನೆ: 'ಗೋಪಿ ಕೇಳ್ ನಿನ್ನ ಮಗ ಜಾರ'
ರಚನೆ: ಶ್ರೀದವಿಠಲದಾಸರು


ಗೋಪಿ ಕೇಳ್ ನಿನ್ನ ಮಗ ಜಾರ ಇವ ಚೋರ ಸುಕುಮಾರ   || ಪ ||
ಮುದದಿ ಮುಕುಂದ ಸದನಕಾ ಬಂದಾ
ದಧಿಯ ಮೀಸಲು ಬೆಣ್ಣೆ ತಿಂದ ನಿನ್ನಾ ಕಂದಾ ಆನಂದಾ

ಮಾರನ ಪಿತ ತಾ ಮನೆಯೊಳು ಪೊಕ್ಕ
ಹಿಡಿಯ ಹೋದರೆ ಕೈಗೆ ಸಿಕ್ಕ ನೋಡಿ ನಕ್ಕ ಭಾರಿ ಠಕ್ಕ   || 1 ||

ಹರೆಯದ ಪೋರಿ ಜಗದ ಕಣ್ಗೋರಿ(?)
ಭರದಿಂದ ಸೀರೆಯ ಸೆಳೆದಾ ಕರವ ಪಿಡಿದಾ ಮಾನ ಕಳೆದಾ   || 2 ||

ಬಹಳ ದಿನವಾಯ್ತು ಪೇಳುವುದ್ಹ್ಯಾಂಗೆ

ದಾಸ ಸಾಹಿತ್ಯ ಪ್ರಕಾರ

ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ ವಾಣಿ

'ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ ವಾಣಿ'
ರಚನೆ: ಶ್ರೀ ವಾದಿರಾಜ ಸ್ವಾಮಿಗಳು


ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ ವಾಣಿ   || ಪ ||
ಆರು ನಾನರಿಯೆ ನೀ ಸರಿರಾತ್ರಿಯಲಿ ಬಂದೀ   || ಅ ||

ನೀರೊಳು ಮುಳುಗಿ ನಿಗಮಚೋರನ ಕೊಂದ ನೀರಜಾಕ್ಷನೆ ಭಾಮೆ ನಾನು
ನಾರುವ ಮೈಯ್ಯ ಎನ್ನೊಳು ತೋರದೆ ಸಾರಿ ದೂರ ನೀ ಪೋಗೋ ರಂಗ   || 1 ||

ಮಂದರಗಿರಿಯನು ಬೆನ್ನೊಳಗಿಟ್ಟ೦ತ ಸುಂದರವದನನೇ ಭಾಮೆ ನಾನು
ಇಂದು ನಿನಗೆ ತಕ್ಕ ಭಾರಂಗಳಿಲ್ಲವಯ್ಯ ಸಿಂಧುವಿನೊಳಗೆ ಪೋಗೋ ರಂಗ   || 2 ||

ದಾಸ ಸಾಹಿತ್ಯ ಪ್ರಕಾರ

ಎಷ್ಟು ಸಾಹಸವಂತ ನೀನೇ ಬಲವಂತ

'ಎಷ್ಟು ಸಾಹಸವಂತ ನೀನೇ ಬಲವಂತ'
ರಚನೆ: ಶ್ರೀವಾದಿರಾಜ ಯತಿಗಳು


ಎಷ್ಟು ಸಾಹಸವಂತ ನೀನೇ ಬಲವಂತಾ ದಿಟ್ಟ ಮೂರುತಿ ಭಳಿ ಭಳಿರೇ ಹನುಮಂತಾ   || ಪ ||
ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ ಕುಟ್ಟಿ ಚಂಡಾಡಿದ ದಿಟ್ಟ ನೀನಹುದೋ

ರಾಮರಪ್ಪಣೆಯಿಂದ ಶರಧಿಯ ದಾಟಿ ಆ ಮಹಾ ಲಂಕೆಯ ಕಂಡೆ ಕಿರೀಟಿ
ಸ್ವಾಮಿ ಕಾರ್ಯವನು ಪ್ರೇಮದಿ ನಡೆಸಿದಿ ಈ ಮಹಿಯೊಳು ನಿನಗಾರೈ ಸಾಟಿ
ದೂರದಿಂದಸುರನ ಪುರವನ್ನು ನೋಡಿ ಭರದಿ ಶ್ರೀರಾಮರ ಸ್ಮರಣೆಯ ಮಾಡಿ
    [ ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೆ ರಘುನಾಥಾಯ ನಾಥಾಯ ಸೀತಾಯಪತಯೇ ನಮಃ ]

ದಾಸ ಸಾಹಿತ್ಯ ಪ್ರಕಾರ

ಕೃ ಷ್ಣಾ ಷ್ಟ ಕ

                                                    ಶ್ರೀ:
      
ಶ್ರೀ ವಾಸುದೇವ ಮಧುಸೂದನ ಕೈಟಭಾರೆ  ಲಕ್ಷ್ಮೀಶ ಪಕ್ಷಿವರವಾಹನ  ವಾಮನೇತಿ
ಶ್ರೀ ಕೃಷ್ಣ ಮನ್ಮರಣಕಾಲ ಮುಪಾಗತೆ ತು ತ್ವನ್ನಾಮ ಮದ್ವಚನ ಗೋಚರ ತಾ ಮುಪೈತು ||೧||
ಗೋವಿಂದ ಗೋಕುಲಪತೇ ನವನೀತ ಚೋರ ಶ್ರೀನಂದನಂದನ ಮುಕುಂದ ದಯಾಪರೇತಿ

ದಾಸ ಸಾಹಿತ್ಯ ಪ್ರಕಾರ

ಅಪ್ರಮೇಯ ಆದರಿಸೋ ಎನ್ನ


ಅಪ್ರಮೇಯ  ಆದರಿಸೋ ಎನ್ನ ||ಪ||
ಸ್ವಪ್ರಕಾಶಾನಂದರೂಪನೆ ||ಅ||

ಮುಪ್ಪುರಹರನುತ ಮುನಿಜನಸೇವಿತ
ತಪ್ಪುಗಳೆಣಿಸದೆ ದಾಸನೆಂತೆಂದು ||೧||

ನಿನ್ನದರುಶನದಿಂದಾ ಧನ್ಯರಾಗುವರು  ಜನರು
ಪುಣ್ಯವಂತರಾಗಿಹವರನ ಪಡೆವರು ||೨||

ಧಾರುಣಿಯೊಳಗೆ ಮಳೂರೊಳು ನೆಲಸಿದೆ
ಮಾರಜನಕ ಗುರುರಾಮವಿಠಲ ||೩||

--------ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು

 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂಜನಾ ಸುಕುಮಾರನೆ

ಅಂಜನಾ ಸುಕುಮಾರನೆ ಭವ- ||ಪ||
ದಂಜಿಕೆ ಬಿಡಿಸು ಬೇಗ ಸಂಜೀವರಾಯನೆ ||ಅ.ಪ||

ವಾಯುಪುತ್ರಾ ವಜ್ರಗಾತುರ
ನೋಯುವೆ ನಾ ಸಂಸಾರದೊಳ್
ಕೈಯ ಪಿಡಿದೆತ್ತುವರಾರೈ ||೧||

ಗುರುವರೇಣ್ಯ ತವ ಪಾದಪಂ
ಕರುಹಯುಗವಾಶ್ರಯಿಪರ
ನೆರಲಿನೊಳಗಿಟ್ಟುಯನ್ನನು ||೨||

ಕ್ಷೇಮದಾತನೇ ಶ್ರೀ ಗುರು
ರಾಮವಿಠಲ ಕಿಂಕರ
ಭೂಮಿಜಾಶೋಕನಾಶನ ||೩||


--------ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು


 

ದಾಸ ಸಾಹಿತ್ಯ ಪ್ರಕಾರ
ಬರೆದವರು