ವಿಜಯದಾಸ

ಅಬಲೆಯ ಮಾತಿಗೆ ಮನಸು ಕರಗಿತು

ಅಬಲೆಯ ಮಾತಿಗೆ ಮನಸು ಕರಗಿತು, ನಿನ್ನ
ಅಂಬುಜಪಾದಕೆ ಬಿಡದೆ ಬಿನ್ನೈಸಿದೆ
ಪ್ರಬಲ ನೀನಾದಕಾರಣದಿಂದ ಚನ್ನಾಗಿ
ವಿಭುದೇಶ ನಾನಾರೋಗವಿನಾಶನೇ
ಶುಭವೇ ಕೊಡು ಜೀಯ್ಯಾ ನಿನಗಲ್ಲದೆ ಅನ್ಯ
ವಿಭುಗಳಿಗೆ ಶರಣೆನ್ನೆ ಸರ್ವಕಾಲ
ಶಬದಮಾತುರವಲ್ಲ ಅಂತರಂಗದ ಸ್ತೋತ್ರ
ಕುಬುಜೆಯ ತಿದ್ದಿದ ವಿಜಯವಿಠ್ಠಲರೇಯ
ನಿಬಿಡಕರುಣಾಂಬುಧಿ  ಮಹದುರಿತಾರಿ

--ವಿಜಯದಾಸರು





ದಾಸ ಸಾಹಿತ್ಯ ಪ್ರಕಾರ
ಬರೆದವರು

ಅನ್ಯದೇವತೆಗಳು ಕರೆದೊಯ್ದು ಮನ್ನಿಸಿ

ಅನ್ಯದೇವತೆಗಳು ಕರೆದೊಯ್ದು ಮನ್ನಿಸಿ
ರನ್ನದಂದಣವೇರಿ ಮರೆಸಲು
ಗನ್ನಘಾತಕವು ಎಂದಿಗೆ ತಪ್ಪದು
ಸನ್ನೆಯನು ಕೇಳಿ ಸರ್ವೋತ್ತಮ ಹರಿ ಉದಾ-
ಸೀನವನು ಮಾಡಿ ಕೆರಹೊಡಿಸಿದ ಸುಖ-
ವೇನು ಬಾರದು ಕಾಣೊ ಪನ್ನಂಗಾರಿಗಾದರೂ
ಅನ್ಯಥಾ ಬಿಡದಿರು ವಿಜಯವಿಠ್ಠಲನ್ನ
ಅನ್ಯದೇವತೆಗಳು ಕರೆದೊಯ್ದು ಮನ್ನಿಸಿ

--- ವಿಜಯದಾಸರು


ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀ ವೇದವ್ಯಾಸರ ಸ್ತೋತ್ರ ಪದ

ವ್ಯಾಸ ಬದರಿನಿವಾಸ ಎನ್ನಯ ಕ್ಲೇಶ ನಾಶನಗೈಸು ಮೌನೀಷ |

ಸಾಸಿರ ಮಹಿಮನ ದೋಷರಹಿತ ಸುರ ಭೂಸುರ ಪರಿಪಾಲ ಶಾಶ್ವತ ವೇದ ||

 

ಸತ್ಯವತಿ ವರಸೂನು ಭವತಿದುರ ಭಾನು |ಭೃತ್ಯವರ್ಗದ ಸುರಧೇನು ||

ಸತ್ಯಮೂರುತಿಯು ನೀನು ಸ್ತುತಿಪೆ ನಾನು | ನಿತ್ಯ ನಿನ್ನಂಘ್ರಿಯರೇಣು ||

ಉತ್ತಮಾಂಗದಲಿ ಹೊತ್ತು ಹೊತ್ತಿಗೆ ಸೂಸುತ್ತಿರತಿಗದು ಅತ್ಯಂತ ಸುಖಕರ ||

ಸುತ್ತುವ ಸುಳಿಯಿಂದೆತ್ತಿ ಕಡೆಗೆಯಿಡು | ಎತ್ತ ನೋಡಲು ವ್ಯಾಪುತ ಸದಾಗಮ || ೧ ||

 

ಲೋಕ ವಿಲಕ್ಷಣ ಋಷಿ ಗುಣವಾರಿ | ರಾಸಿ ವೈಕುಂಠ ನಗರ ನಿವಾಸಿ ||

ನಾಕಾರಿಗಳ ಕುಲದ್ವೇಷಿ ಚಿತ್ರ ಸನ್ಯಾಸಿ | ಬೇಕೆಂದು ಭಜಿಪೆ ನಿಲಿಸಿ ||

ಶೋಕ ಮಾಡುವುದು ಅನೇಕ ಪರಿಯಿಂದ | ಆ ಕುರುವಂಶದ ನಿಕರ ತರಿಸಿದೆ ||

ದಾಸ ಸಾಹಿತ್ಯ ಪ್ರಕಾರ
ಬರೆದವರು