ಪದ / ದೇವರನಾಮ

ದಾಸರ ಪದಗಳು

ದಯಮಾಡೆ ದಯಮಾಡೆ ತಾಯೆ ವಾಗ್ದೇವಿ

(ಕೃತಿಕಾರರು-ಜಗನ್ನಾಥದಾಸರು ರಾಗ - ಮಧ್ಯಮಾವತಿ(ಯಮನ್ ಕಲ್ಯಾಣ) ಆದಿತಾಳ(ಝಪ್) ದಯಮಾಡೆ ದಯಮಾಡೆ ತಾಯೆ ವಾಗ್ದೇವಿ |ಪ|| ದಯದಿಂದ ನೀನೆನ್ನ ನೋಡೆ ವಾಗ್ದೇವಿ ||ಅ.ಪ|| ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆ ವ್ರತತಿಜನೇತ್ರೆ ಭಾರತಿ ನೀ ದಯಮಾಡೆ ||೧| ಸುಮುಖೀ ತ್ವಚ್ಚರಣಾಬ್ಜದ್ರುಮಛಾಯಶ್ರಿತರ ಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ||೨|| ಜಗನ್ನಾಥವಿಠಲನಂಘ್ರಿಗಳ ಸೇವೆಯೊಳು ಸು ಗುಣೆ ಸನ್ಮತಿಕೊಟ್ಟು ಬೇಗನೆ ಸಲಹೆ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಂದಿಪೆನಮ್ಮಾ ಮುದ್ದುಶಾರದೆ

( ರಾಗ ಮಧ್ಯಮಾವತಿ(ಕಾಫಿ) , ಅಟತಾಳ (ತೀನ್ ತಾಳ) ವಂದಿಪೆನಮ್ಮಾ ಮುದ್ದುಶಾರದೆ ಶರ- ಚ್ಚಂದಿರವದನೆ ಶಾರದೆ ||ಪ|| ಇಂದೀವರಾಕ್ಷಿ ಶತಾನಂದನಪ್ರಿಯೆ ದೇವಿ ಕುಂದು ನೋಡದೆ ಶ್ರುತಿವಂದ್ಯೆ ಜ್ಞಾನವ ನೀಡೆ ||ಅ.ಪ|| ಸಿತಾಬ್ಜಾಸನೆ ಸುಖದಾಯಕಿ, ಸುರ ನಾಥಾರಾಧಿತೆ ವಿಶ್ವನಾಯಕೀ ವೀತದುರಿತೆ ಶಿವಮಾತೆ ಸದ್ಗುಣಮಣಿ ವ್ರಾತೆ ವೇದೋಪನಿಷದ್ಗೀತೆ ವಾಗ್ದೇವಿ ಮಾತೆ ||೧|| ಕೋಕಿಲವಾಣಿ ಕವಿಸೇವಿತೆ ಎನ್ನ ವಾಕು ಲಾಲಿಸೆ ಮುನಿವಂದಿತೆ ತೋಕನೆಂದು ಸುವಿವೇಕ ಬುದ್ಧಿಯನಿತ್ತು ಸಾಕು ಸಜ್ಜನರನ್ನು ವಾಕು ಮನ್ನಿಸೆ ತಾಯೆ ||೨|| ಪಾತಕಿಗಳೊಡನಾಡಿ ನಾ ನಿನ್ನ ಪೂತಾಬ್ಜಪದ ಭಜಿಸದ್ಹೋದೆ ನಾ ಪಾತಕವೆಣಿಸದೆ ಸೀತಾರಮಣ ಜಗ- ನಾಥವಿಟ್ಠಲನಂಘ್ರಿಗೀತಾಮೃತವನುಣಿಸು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲಂಬೋದರ ರಕ್ತಾಂಬರಧರ

(ರಾಗ - ಯಮನ್ (ಮಧ್ಯಮಾವತಿ) ಅಟತಾಳ ) ಲಂಬೋದರ ರಕ್ತಾಂಬರಧರ ||ಪ|| ಅಂಬರಾಧೀಶ್ವರ ಗೌರಿಕುಮಾರ ||ಅ ಪ|| ಸಿಂಧುರ ವದನಾರವಿಂದ ಸುಂದರ ವಿಘ್ನಾಂಧಕಾರ ಶರಚ್ಚಂದಿರ ಧೀರ ||೧|| ವರ ಪಾಶಾಂಕುಶ ದಂತ ಧರ ಸುಮೋಹಕ ಶೂರ್ಪಕರಣ ತ್ವಚ್ಛರಣ ಪಂಕಜಕಾ ನಮಿಪೆ ||೨|| ಜಗನ್ನಾಥವಿಠಲನ ಮಗನಾಗಿ ದ್ವಾಪರ ಯುಗದಲಿ ಜನಿಸಿದ ಸುಗುಣ ನೀ ಸಲಹೋ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡು ಧನ್ಯನಾದೆ

ಕಂಡು ಧನ್ಯನಾದೆ ಶ್ರೀ ಉಡುಪಿ ಕೃಷ್ಣನ ಕಣ್ಣಾರೆ ನಾ |ಪ| ಕಂಡು ಧನ್ಯನಾದೆನೋ ಬ್ರಹ್ಮಾಂಡ ನಖದಿಯೊಡೆದ ಹರಿಯ ತಂಡ ತಂಡದಿ ಪೂಜೆಗೊಳುತ ಪಾಂಡವರನು ಸಲಹಿದವನ |ಅ ಪ| ಗೆಜ್ಜೆ ಕಾಲ ಕಡಗವಿಟ್ಟು, ಮಜ್ಜಿಗೆ ಕಡೆಗೋಲ ಪಿಡಿದು ಹಜ್ಜೆ ಪಂಕ್ತಿ ಊಟವುಂಡು ಗುಜ್ಜು ವೇಷ ಧರಿಸಿದವನ|| ಎಂಟು ಮಠದ ಯತಿಗಳು ತನ್ನ ಬಂಟರೆಂದು ಪೂಜೆಗೊಳುತ ಕಂಟಕ ಕಂಸಾದಿಗಳನೆ ದಂಟಿನಂದದಿ ಸೀಳಿದವನ|| ಏಸು ಜನ್ಮದ ಸುಕೃತವೊ ಕಮಲೇಶ ವಿಠಲರಾಯ ತನ್ನ ದಾಸರ ಅಭಿಲಾಷೆಯಿತ್ತು ಕೂಸಿನಂದದಿ ಪೋಷಿಸುವನ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಯೆ ನಿನ ಪದತೋಯಜಕೆರಗುವೆ

ಕಾಯೆ ನಿನ ಪದತೋಯಜಕೆರಗುವೆ |ಪ| ಮಾಯದೇವಿ ಹರಿಕಾಯನಿವಾಸೆ |ಅ ಪ| ಬುದ್ಧಿಯ ಪ್ರೇರಿಸೆ ಪ್ರದ್ಯುಮ್ನನ ಸತಿ ಕರ್ದಮಜಾಲಯೆ ಭದ್ರಶರೀರೆ|| ಇಂಗಡಲಾತ್ಮಜೆ ಅಂಗನಕುಲಮಣಿ ರಂಗನ ಪದಕಂಜಭೃಂಗೆ ಕರುಣದಿ|| ಪ್ರಾಣೇಶವಿಠಲನ ಮಾನಿನಿ ಎನ್ನಯ ಹೀನತೆಯೆಣಿಸದೆ ಪೋಣಿಸಿಮತಿಯ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡಿ ಮರುಳಾಗದಿರು ಪರಸತಿಯರ

ನೋಡಿ ಮರುಳಾಗದಿರು ಪರಸತಿಯರ || ಪಲ್ಲವಿ || ನಾಡೊಳಗೆ ಕೆಟ್ಟವರ ಪರಿಯ ನೀನರಿತು || ಅನುಪಲ್ಲವಿ || ಶತ ಮಖವನೆ ಮಾಡಿ ಸುರಸಭೆಗೈದ ನಹುಷ ತಾ ಆತುರದಿ ಶಚಿಗೆ ಮನಸೋತು ಭ್ರಮಿಸಿ ಅತಿ ಬೇಗ ಚಲಿಸಂದು ಬೆಸಸಲಾ ಮುನಿಯಿಂದ ಗತಿಗೆಟ್ಟು ಉರಗನಾಗಿದ್ದ ಪರಿಯ ನೀನರಿತು || ೧ || ಸುರಪತಿಯು ಗೌತಮನ ಸತಿಗಾಗಿ ಕಪಟದಿಂ ಧರೆಗೆ ಮಾಯವೇಷ ಧರಿಸಿ ಬಂದು ಪರಮ ಮುನಿಶಾಪದಿಂ ಅಂಗದೊಳು ಸಾ ವಿರ ಕಣ್ಣಾಗಿ ಇದ್ದ ಪರಿಯ ನೀನರಿತು || ೨ || ಸ್ಮರನ ಶರತಾಪವನು ಪರಿಹರಿಸಲರಿಯದಲೆ ದುರುಳ ಕೀಚಕನು ದ್ರೌಪದಿಯ ಕೆಣಕಿ ಮರುತಸುತ ಭೀಮನಿಂದಿರುಳೊಳಗೆ ಹತನಾದ ನರಕುರಿಯೆ ನಿನ್ನ ಪಾಡೇನು ಧರೆಯೊಳಗೆ || ೩ || ಹರನ ವರವನು ಪಡೆದು ಶರಧಿಮಧ್ಯದೊಳಿದ್ದು ದುರುಳ ದಶಶಿರನು ಜಾನಕಿಯನೊಯ್ಯೆ ಧುರದೊಳಗೆ ರಘುವರನ ಶರದಿಂದ ಈರೈದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ ನೀ ದೇಹದೊಳಗೊ ನಿನ್ನೊಳು ದೇಹವೊ ಬಯಲು ಆಲಯದೊಳಗೊ ಆಲಯವು ಬಯಲೊಳಗೊ ಬಯಲು ಆಲಯವೆರಡು ನಯನದೊಳಗೊ ನಯನ ಬುದ್ಧಿಯೊಳಗೊ ಬುದ್ಧಿ ನಯನದೊಳಗೊ ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ || 1 || ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೊ ಜಿಹ್ವೆ ಮನಸಿನೊಳಗೊ ಮನಸು ಜಿಹ್ವೆಯೊಳಗೊ ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ || 2 || ಕುಸುಮದೊಳು ಗಂಧವೊ ಗಂಧದೊಳು ಕುಸುಮವೊ ಕುಸುಮ ಗಂಧಗಳೆರಡು ಘ್ರಾಣದೊಳಗೊ ಅಸಮಭವ ಕಾಗಿನೆಲೆಯಾದಿಕೇಶವರಾಯ ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ || 3 ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತನು ನಿನ್ನದು ಜೀವನ ನಿನ್ನದು

ತನು ನಿನ್ನದು ಜೀವನ ನಿನ್ನದು ಸ್ವಾಮಿ ಅನುದಿನದಿ ಬಾಹೊ ಸುಖ ದುಃಖ ನಿನ್ನದಯ್ಯ || ೧ || ಸವಿನುಡಿ ವೇದ ಪುರಾಣ ಶಾಸ್ತ್ರಗಳೆಲ್ಲ ಕಿವಿಗೊಟ್ಟು ಕೇಳುವ ಸ್ಥಿತಿ ನಿನ್ನದು ನವಮೋಹನಾಂಗಿಯರ ರೂಪವ ಕಣ್ಣಿಂದ ಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ || ೧ || ಒಡಗೂಡಿ ಗಂಧ ಕಸ್ತೂರಿ ಪರಿಮಳವೆಲ್ಲ ಬಿಡದೆ ಲೇಪಿಸಿಕೊಂಬುವುದು ನಿನ್ನದು ಷಡುರಸದನ್ನಕ್ಕೆ ನಲಿದಾಡುವ ಜಿಹ್ವೆ ಕಡುರುಚಿಗೊಂಬುವ ಆ ಸವಿ ನಿನ್ನದಯ್ಯ || ೨ || ಮಾಯಪಾಶದ ಬಲೆಗೊಳು ಸಿಕ್ಕಿ ತೊಳಲುವ ಕಾಯ ಪಂಚೇದ್ರಿಯದ ಗತಿ ನಿನ್ನದು ಕಾಯಜಪಿತ ಕಾಗಿನೆಲೆಯಾದಿ ಕೇಶವ ರಾಯ ನೀನಲ್ಲದೆ ನರರು ಸ್ವತಂತ್ರರೇ || ೩ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನೆಂದು ಕೊಂಡಾಡಿ ಸ್ತುತಿಸಲೋ ದೇವ

ಏನೆಂದು ಕೊಂಡಾಡಿ ಸ್ತುತಿಸಲೋ ದೇವ || ಪಲ್ಲವಿ|| ನಾನೇನು ಬಲ್ಲೆ ನಿಮ್ಮ ಮಹಿಮೆಗಳ ಮಾಧವ || ಅನುಪಲ್ಲವಿ || ಹರಿ ಮುಕುಂದನು ನೀನು ನರಜನ್ಮ ಹುಳು ನಾನು ಪರಮಾತ್ಮನು ನೀನು ಪಾಮರನು ನಾನು ಗರುಡ ಗಮನನು ನೀನು ಮರುಳ ಪಾಪಿಯು ನಾನು ಪರಂಜ್ಯೋತಿಯು ನೀನು ತಿರುಕನು ನಾನು || ೧ || ವಾರಿಧಿಶಯನನಾದ ಕಾರುಣ್ಯಪತಿ ನೀನು ಘೋರದಿಂದಿಹ ಕಾಮಿ ಕ್ರೋಧಿಯು ನಾನು ಈರೇಳು ಭುವನದೊಳು ಇರುವ ಮೂರುತಿ ನೀನು ದೂರಿ ನಿಮ್ಮನು ಬೈವ ದುಷ್ಟನು ನಾನು || ೨ || ಅಣುರೇಣು ತೃಣಗಳಲಿ ಪರಿಪೂರ್ಣನು ನೀನು ಕ್ಷಣಕ್ಷಣಕೆ ಅನುಗುಣದ ಕರ್ಮಿ ನಾನು ವಾಣಿಯರಸನ ಪೆತ್ತ ವೈಕುಂಠಪತಿ ನೀನು ತನು ನಿತ್ಯವಲ್ಲದ ಬೊಂಬೆಯು ನಾನು || ೩ || ಕಂಬದಲಿ ಬಂದ ಆನಂದ ಮೂರುತಿ ನೀನು ನಂಬಿಕಿಲ್ಲದ ಪ್ರಪಂಚಿಗನು ನಾನು ಅಂಬರೀಷನಿಗೆ ಒಲಿದ ಅಕ್ರೂರ ಸಖ ನೀನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ದೇವ ಹನುಮ ಶೆಟ್ಟಿ

ದೇವ ಹನುಮ ಶೆಟ್ಟಿ ರಾಯ ಜಗಜಟ್ಟಿ ಕಾವೋದು ಭಾವಿ ಪರಮೇಷ್ಠಿ ಪಾವನ ಚರಿತ ಸಂಜೀವನ ಗಿರಿಧರ ಪಾವಮಾನಿ ಕರುಣಾವಲೋಕನದಿ ನೀ ವಲಿಯುತಲಿ ಸದಾವಕಾಲ ತವ ತಾವರೆ ಪದಯುಗ ಸೇವೆಯ ಕರುಣಿಸು ವಾನರ ಕುಲ ನಾಯಕ ಜಾನಕಿ ಶೋಕ ಕಾನನ ತೃಣ ಪಾವಕ ಹೀನ ಕೌರವ ನಾಶಕ
ದಾಸ ಸಾಹಿತ್ಯ ಪ್ರಕಾರ
ಬರೆದವರು