ಪದ / ದೇವರನಾಮ

ದಾಸರ ಪದಗಳು

ಶ್ರೀನಿಕೇತನ ಪಾಲಯ ಮಾಂ

( ರಾಗ - ಅರಭಿ(ದೇವಗಾಂಧಾರ) ಆದಿತಾಳ (ತೀನ್ ತಾಲ್) ) ಶ್ರೀನಿಕೇತನ ಪಾಲಯ ಮಾಂ , ಶ್ರೀನಿಕೇತನ ||ಪ|| ಜ್ಞಾನಗಮ್ಯ ಕರುಣಾನಿಧಿ ನಿನ್ನಡಿ- ಗಾನು ನಮಿಸುವೆ ಪೊರೆ ದೀನದಯಾಳೋ ||ಅ.ಪ|| ಜ್ಞಾನಮಾನದಾ ಶರಣರ ಸುರ- ಧೇನು ಸರ್ವದಾ ನೀನೆಂದರಿತು ಸದಾನುರಾಗದಲಿ ಧ್ಯಾನಿಪೆ ಮನದನುಮಾನವ ಕಳೆಯೋ ||೧|| ಶ್ರೀಕರಾರ್ಚಿತ ಪಾದಾಬ್ಜ ಪ- ರಾಕು ಅಚ್ಯುತ ಶೋಕನಾಶನ ವಿಶೋಕಜನಕ ಹೃ- ದ್ವ್ಯಾಕುಲ ಕಳೆಯೊ ಕೃಪಾಕರ ಒಲಿದು ||೨|| ಪನ್ನಗಾಚಲನಿವಾಸ ಪ್ರ- ಪನ್ನ ವತ್ಸಲ ಬಿನ್ನಪ ಕೇಳೊ ಜಗನ್ನಾಥವಿಠ್ಠಲ ಧನ್ಯನ ಮಾಡೊ ಶರಣ್ಯ ಶರಣನಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧನ್ಯ ನಾನಾದೆ ವಿಠಲನ ಕಂಡು

( ರಾಗ - ಧನ್ಯಾಸಿ(ಸೋಹನಿ) ಆದಿತಾಳ(ತೀನ್ ತಾಳ) ) ಧನ್ಯ ನಾನಾದೆ ವಿಠಲನ ಕಂಡು ಧನ್ಯ ನಾನಾದೆ ಧನ್ಯ ನಾನಾದೆ ಕಾಮನ ಪಿತ ಲಾವಣ್ಯಮೂರುತಿಯ ಕಣ್ಣಲಿ ನೋಡಿ ||ಪ|| ದೇವವರೇಣ್ಯ ಸದಾವಿನೋದಿ ವೃಂ- ದಾವನ ಸಂಚಾರ ಗೋಪನ ಕಂಡು ||೧|| ಮಂಗಳಾಂಗ ಕಾಳಿಂಗಮರ್ದನ ಮಾ- ತಂಗ ವರವಶದ ರಂಗನ ಕಂಡು ||೨|| ಹಾಟಕಾಂಬರ ಕಿರೀಟ ಸಾರಥಿ ತಾಟಕಾರಿ ವೈರಾಟನ ಕಂಡು ||೩|| ಚಿಂತಿತ ಫಲದ ಕೃತಾಂತನಾತ್ಮಜಾ- ದ್ಯಂತರಹಿತ ನಿಶ್ಚಿಂತನ ಕಂಡು ||೪|| ಮಾತುಳಾಂತಕ ವಿಧಾತಪಿತ ಜಗ- ನ್ನಾಥವಿಠಲ ವಿಖ್ಯಾತನ ಕಂಡು ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ

(ಪೀಲೂ ( ಜಂಜೂಟಿ) ರಾಗ , ಆದಿತಾಳ(ಕಹರವಾ) ) ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ ಸಂಗಸುಖವಿತ್ತು ಕಾಯೊ ಕರುಣಾಸಾಗರ ||ಪ|| ಅರಿಯರೊ ನೀನಲ್ಲದೆ ಮತ್ತನ್ಯ ದೈವರ ಮರೆಯರೊ ನೀ ಮಾಡಿದ ಅನಿಮಿತ್ತೋಪಕಾರ ತೊರೆಯರೊ ನಿನ್ನಂಘ್ರಿಸೇವೆ ಪ್ರತಿವಾಸರ ಅರಿಯರೊ ಪರತತ್ವವಲ್ಲದೆ ಇತರ ವಿಚಾರ ||೧|| ಮೂಕ ಬಧಿರರಂತಿಪ್ಪರೊ ನೋಳ್ಪ ಜನಕೆ ಕಾಕುಯುಕುತಿಗಳನವರು ತಾರರೊ ಮನಕೆ ಸ್ವೀಕರಿಸರನರ್ಪಿತವೊಂದು ಕಾಲಕೆ ಆ ಕೈವಲ್ಯ ಭೋಗ ಸುಖ ಅವರಿಗೆ ಬೇಕೆ ||೨|| ಜಯಾಜಯ ಲಾಭಾಲಾಭ ಮಾನಾಪಮಾನ ಭಯಾಭಯ ಸುಖ-ದುಃಖ ಲೋಷ್ಟಕಾಂಚನ ಪ್ರಿಯಾಪ್ರಿಯ ನಿಂದಾಸ್ತುತಿಗಳನುದಿನ ಶ್ರೀಯರಸ ಚಿಂತಿಸುವರೊ ನಿನ್ನ ಆಧೀನ ||೩|| ಈಶಿತವ್ಯರೆಂತಿಪ್ಪರೇಕಾಂತ ಭಕ್ತರು ದೇಶಕಾಲೋಚಿತ ಧರ್ಮಕರ್ಮಾಸಕ್ತರು ಆಶಾಕ್ರೋಧ ಲೋಭ ಮೋಹ ಪಾಶಮುಕ್ತರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಗಳ ಗುರು ರಾಘವೇಂದ್ರಗೆ ಜಯ

( ರಾಗ - ನಾದನಾಮಕ್ರಿಯೆ ( ಭೈರವಿ) ಅಟತಾಳ(ಕಹರವಾ) ) ಮಂಗಳ ಗುರು ರಾಘವೇಂದ್ರಗೆ ಜಯ ||ಪ|| ಮಂಗಳ ಸುಜನಾಂಬುಧಿಚಂದ್ರಗೆ ||ಅ.ಪ|| ಶ್ರೀಸುಧೀಂದ್ರಕುಮಾರಗೆ ಮಂಗಳ ಭೂಸುರನುತ ಮಹಿಮಗೆ ಮಂಗಳ ದೇಶಿಕ ಕುಲವನಜಾರ್ಕಗೆ ಮಂಗಳ ಭಾಸುರ ಕೀರ್ತಿಯ ಪಡೆದವಗೆ ||೧|| ವೃಂದಾವನಭುವಿಯೊಳಗೆ ಸುರದ್ರುಮ- ದಂದದಿ ರಾಜಿಸುವಗೆ ಮಂಗಳ ಅಂಧ ಪಂಗು ಮೂಕ ಬಧಿರರ ಈಪ್ಸಿತ ಸಂದೋಹ ಸಲಿಸುವ ಮುನಿವರಗೆ ||೨|| ಭೂತಪ್ರೇತಬೇತಾಳ ಭಯವಿಪಿನ ವೀತಿಹೋತ್ರನೆನಿಪಗೆ ಮಂಗಳ ವಾತಜನುತ ಜಗನ್ನಾಥವಿಠಲನ ದೂತರ ಸಲಹುವ ದಾತನಿಗೆ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅತಿ ಶೋಭಿಸುತಿದೆ ಶ್ರೀಪತಿಯ ವಾಹನ

(ರಾಗ - ಕಾಂಬೋಧಿ (ಭೂಪ್) ಝಂಪೆತಾಳ) ಅತಿ ಶೋಭಿಸುತಿದೆ ಶ್ರೀಪತಿಯ ವಾಹನ ||ಪ|| ಚತುರ್ದಶಲೋಕದಲಿ ಅಪ್ರತಿವಾಹನ ||ಅ.ಪ|| ವಿನತೆ ಕಶ್ಯಪಮುನಿಗೆ ತನಯನೆನಿಸಿದ ವಾಹನ ಅನುಜರನು ಕದ್ದೊಯ್ದ ಆಢ್ಯವಾಹನ ವನದಿ ಮಧ್ಯದಿ ನಾವಿಕರ ಭಕ್ಷಿಸಿದ ವಾಹನ ಜನಕನಾಜ್ಞದಿ ಕೂರ್ಮಗಜರ ನುಂಗಿದ ವಾಹನ ||೧|| ಕುಲಿಶ ಪಾಣಿಯ ಕೂಡೆ ಕಲಹ ಮಾಡಿದ ವಾಹನ ಒಳಹೊಕ್ಕು ಪೀಯೂಷ ತಂದ ವಾಹನ ಮಲತಾಯಿ ಮಕ್ಕಳನು ಮರುಳುಗೊಳಿಸಿದ ವಾಹನ ಬಲಿರಾಯ ಒಯ್ದ ಮಕುಟವ ತಂದ ವಾಹನ ||೨|| ಕಾಲನಾಮಕನಾಗೆ ಕಮಲಭವನಲಿ ಜನಿಸಿ ಕಾಲಾತ್ಮ ಹರಿಯ ಸೇವಿಪವಾಹನ ಕಾಳಗದಿ ಕಪಿವರರ ಕಟ್ಟು ಬಿಡಿಸಿದ ವಾಹನ ಸೌಪರ್ಣಿಪತಿಯೆಂಬ ಹೊಂಬಣ್ಣವಾಹನ ||೪|| ಪನ್ನಗಾಶನ ವಾಹನ ಪತಿತಪಾವನ ವಾಹನ ಸನ್ನುತಿಪ ಭಕ್ತರನು ಸಲಹುವ ವಾಹನ ಪನ್ನಗಾದ್ರಿನಿವಾಸ ಜಗನ್ನಾಥವಿಠಲಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಾರತೀ ಮಜ್ಜನನೀ

ರಾಗ-ಶಂಕರಾಭರಣ (ಭೈರವಿ) ಅಟತಾಳ (ದಾದರಾ) ಭಾರತೀ ಮಜ್ಜನನೀ ಭಾರತೀ- ||ಪ|| ಭಾರತೀ ಭರತನರ್ಧಾಂಗಿ ಕರು- ಣಾರಸಪೂರಿತ ಪಾಂಗಿ ಆಹಾ ತಾರ್ಕ್ಷ್ಯ ಪ್ರಮುಖ ವೈಕಾರಿಕ ದೇವ ಗ- ಣಾರಾಧಿತಾಂಘ್ರಿ ಸರೋರುಹೆ ಪಾಲಿಸು ||ಅ.ಪ|| ವಿದ್ಯುನ್ನಾಮಕೆ ವಿಧಿಜಾತೆ ಕೃತಿ ಪ್ರದ್ಯುಮ್ನ ಜಠರಸಂಭೂತೆ ಅನ- ವದ್ಯ ಸದ್ಗುಣ ಗಣವ್ರಾತೆ ಬ್ರಹ್ಮ- ವಿದ್ಯವ ಪಾಲಿಸು ಮಾತೆ ಆಹಾ ಬುದ್ಧ್ಯಾಭಿಮಾನಿಯೆ ಸದ್ಯೋಜಾತನ ಪೆತ್ತ ಶೃದ್ಧಾನಾಮಕೆ ಅನಿರುದ್ಧನ ತೋರಿಸೆ ||೧|| ಕಾಳಿ ದ್ರೌಪದಿ ಶಿವಕನ್ಯಾ ಮನ್ಮ- ನಾಲಯದಲ್ಲಿ ನಿಲ್ಲೆ ಘನ್ನ ಪ್ರಾಜ್ಞ ಮೌಳಿಮಣಿಯೆ ನಿತ್ಯ ಎನ್ನ ಪರಿ- ಪಾಲಿಸೆ ನಂಬಿದೆ ನಿನ್ನ ಆಹಾ ಶೈಲಜಾ ಶ್ಯಾಮಲ ಪೌಲೋಮಿ ಉಷೇರಿಂದ ವಾಲಗ ಕೈಕೊಂಬ ಕಾಲಾಭಿಮಾನಿಯೆ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾರುತಿ ಮಜ್ಜನಕ ಮಾರುತಿ

( ರಾಗ ಶಂಕರಾಭರಣ (ಭೈರವಿ) ಅಟತಾಳ) ಮಾರುತಿ ಮಜ್ಜನಕ ಮಾರುತಿ ||ಪ|| ಮಾರುತಿ ಕರುಣಿಸು ಜ್ಞಾನ ಎನ್ನ ಸೇರಿದ ಸತತ ಅಜ್ಞಾನ ಆಹ ದೂರ ಓಡಿಸಿ ಹರಿಆರಾಧನೆಯಿತ್ತು ತೋರಿಸು ಪಥ ಸರ್ವಾಧಾರ ಉದ್ಧಾರನೆ ||ಅ.ಪ|| ದ್ವಿತೀಯ ಯುಗದೊಳವತರಿಸಿ ಸೀತಾ- ಪತಿಯ ಪಾದಕೆ ನಮಸ್ಕರಿಸಿ ರವಿ- ಸುತಗೆ ಒಲಿದು ಉದ್ಧರಿಸಿ ಆಬ್ಧಿ ಅತಿವೇಗದಿಂದ ಉತ್ತರಿಸಿ ಆಹಾ ಕ್ಷಿತಿಜದೇವಿಯನು ತುತಿಸಿ ಮುದ್ರಿಕೆಯಿತ್ತು ದಿತಿಜರ ಸದೆದ ಭಾರತಿಯ ರಮಣನೆ ||೧|| ಕುರುಕುಲದೊಳಗೆ ಉದ್ಭವಿಸಿ ಬಲು ಗರಳ ಪದಾರ್ಥವ ಸಲಿಸಿ ಚೆಲ್ವ ತರುಣಿ ರೂಪವನೆ ಶೃಂಗರಿಸಿ ನಿಶಾ- ಚರ ಕೀಚಕನ ಸಂಹರಿಸಿ ಆಹಾ ಜರೆಯ ಸುತನ ಸೀಳಿ ಧರಣಿಪಾಲಕರನ್ನು ಸೆರೆಯ ಬಿಡಿಸಿ ಕಾಯ್ದ ಪರಮಸಮರ್ಥನೆ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆ

( ರಾಗ - ಭೈರವಿ( ಸಾರಂಗ) ಆದಿತಾಳ (ತ್ರಿತಾಳ) ) ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನೋ ಜಗದೊಳಗೆ , ಮುಖ್ಯ- ||ಪ|| ಪ್ರಾಣಾಪಾನವ್ಯಾನೋದಾನ ಸ- ಮಾನನೆನಿಪ ಮುಖ್ಯಪ್ರಾಣ ನೀನಲ್ಲದೆ ||ಅ.ಪ|| ವಾಸವ ಕುಲಿಶದಿ ಘಾಸಿಸೆ ಜೀವರ ಶ್ವಾಸ ನಿರೋಧಿಸಿದೆ ಆ ಸಮಯದಿ ಕಮಲಾಸನ ಪೇಳಲು ನೀ ಸಲಹಿದೆ ಜಗವ ಮುಖ್ಯ- ||೧|| ಅಂಗದ ಪ್ರಮುಖ ಪ್ಲವಂಗರು ರಾಮನ ಅಂಗನೆಯನು ಪುಡುಕೆ ತಿಂಗಳು ಮೀರಲು ಕಪಿವರ- ಪುಂಗವ ಪಾಲಿಸಿದೆ ಮುಖ್ಯ- ||೨|| ಪಾವನ ಪಾಶದಿ ರಾವಣ ನೀಲ ಸು- ಗ್ರೀವ ಮುಖ್ಯರ ಬಿಗಿಯೆ ಸಾವಿರದೈವತ್ತು ಗಾವುದದಲ್ಲಿಹ ಸಂ- ಜೀವನವನು ತಂದೆ ಮುಖ್ಯ- ||೩|| ಪರಿಸರ ನೀನಿರೆ ಹರಿತಾನಿರುವನು ಇರದಿರೆ ತಾನಿರನು ಕರಣ ನಿಯಾಮಕ ಸುರರ ಗುರುವೇ ನೀ- ಕರುಣಿಸೆ ಕರುಣಿಸುವ ಮುಖ್ಯ- ||೪|| ಭೂತೇಂದ್ರಿಯ ದಧಿನಾಥ ನಿಯಾಮಕ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡೆ ಪಂಢರಿರಾಯನ

(ರಾಗ - ನಾದನಾಮಕ್ರಿಯೆ (ಮಾಂಡ್ ) ಆದಿತಾಳ (ಕಹರವಾ)) ಕಂಡೆ ಪಂಢರಿರಾಯನ , ತನ್ನನು ಕೊಂಡಾಡುವರ ಪ್ರಿಯನ , ವಿಠಲನ ||ಪ|| ಸಮ ಚರಣ ಭುಜನ ನಿಗಮಾ- ಗಮತತಿಗೆ ಗೋಚರನ ಅಮಿತ ಪರಾಕ್ರಮನ ರುಕ್ಮಿಣಿ- ರಮಣ ಸುಲಕ್ಷಣನ ವಿಠ್ಠಲನ ||೧|| ಕಾಮಿತಾರ್ಥಪ್ರದನ ಸಿರಿತುಲಸಿ ದಾಮ ವಿಭೂಷಣನ ಸಾಮಜ ಪತಿಪಾಲನ ತ್ರೈಜಗ- ತ್ಸ್ವಾಮಿ ಚಿತ್ಸುಖಮಯನ ವಿಠ್ಠಲನ ||೨|| ಗೋಕುಲಪೋಷಕನ ಮುನಿಪುಂಡ- ರೀಕಗೊಲಿದು ಬಂದನ ಲೋಕವಿಲಕ್ಷಣನ ಶರಣರ ಶೋಕವಿನಾಶನನ ವಿಠ್ಠಲನ ||೩|| ಚಂದ್ರಭಾಗವಾಸನ ವಿಧಿ-ವಿಹ- ಗೇಂದ್ರ ಮುಖಾರ್ಚಿತನ ಇಂದ್ರೋತ್ಪಲನಿಭನ ಗುಣಗಣ ಸಾಂದ್ರ ಸುರೋತ್ತಮನ ವಿಠ್ಠಲನ ||೪|| ಶ್ವೇತವಾಹನ ಸಖನ ಸತಿಗೆ ಪಾರಿ- ಜಾತವ ತಂದಿತ್ತವನ ವೀತಶೋಕ ಭಯನ ಶ್ರೀ ಜಗ- ನ್ನಾಥವಿಠ್ಠಲರಾಯನ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಮನ ನೋಡಿರೈ

( ರಾಗ ಭೈರವಿ(ಬಿಲಾವಲ್ ) ಆದಿತಾಳ (ಕಹರವಾ)) ರಾಮನ ನೋಡಿರೈ , ನಿಮ್ಮಯ ಕಾಮಿತ ಬೇಡಿರೈ ತಾಮರಸಸಖ ಸುವಂಶಾಬ್ಧಿಶರತ್ಸೋಮ , ಕಮಲಾಧಾಮ ||ಪ|| ಧಾತನನುಜ್ಞದಿ ದೇವತ್ವಷ್ಟ್ರ ನಿರ್ಮಿಸಿದ , ಅಜ ಪೂಜಿಸಿದ ಜ್ಯೋತಿರ್ಮಯ ಜಾಬಾಲಿ ಮುನಿಯ ತಪವರಿದ , ಕಾಮಿತ ನೆರೆದ ಭೂತಾಧಿಪನ ಭವನದೊಳಗರ್ಚನೆಗೊಂಡ , ಧೃತಕೋದಂಡ ಮಾತಂಗಾರಿ ವಿರೋಧಿಯ ಜನಕನ ಮೇಧಾ ಕಾರಕೆ ಪೋದ ||೧|| ಸೌಭರಿ ಮುನಿಪಗೆ ಸೌಖ್ಯವ ಕರುಣಿಸಿಕೊಟ್ಟ , ಜಗಕತಿದಿಟ್ಟ ನಾಭಿಜನ್ಮನಿಹ ನಗರಾಸ್ಥಾನಕೆ ಬಂದ , ಶುಭಗುಣವೃಂದ ವೈಭವದಿಂದ ಅಯೋಧ್ಯಾನಗರದಿ ಮೆರೆದ , ಕಾಮಿತಗರೆದ ಸಾಭಿಮಾನದಲಿ ಸತಿಯಳಿಗಿತ್ತನು ವರವ , ದೇವರದೇವ ಗರುವ ||೨|| ಜಾಂಬವಂತನಿಗೆ ಜಾನಕಿರಮಣನು ಈತ -ನಿತ್ತನುಧ್ಯಾತಾ ಸಂಭ್ರಮದಲಿ ವೇದಗರ್ಭಮೊಡನಾಡ್ದ , ಮುಕ್ತಿಯ ನೀಡ್ದ
ದಾಸ ಸಾಹಿತ್ಯ ಪ್ರಕಾರ
ಬರೆದವರು