ಜಗನ್ನಾಥದಾಸ

ರಮಾಮನೋಹರನೆ

ರಾಗ - ಬಿಲಹರಿ(ಭೈರವಿ) ರೂಪಕತಾಳ (ದಾದರಾ) ಕೃತಿಕಾರರು-ಜಗನ್ನಾಥದಾಸರು ರಮಾಮನೋಹರನೆ ದೀನ- ಪತಿತಪಾವನಾ ||ಪ|| ಚೆಂದದಿಂದ ವೇದ ತಂದ ಮಂದರೋದ್ಧರಾ ಅರ- ವಿಂದನಯನ ಬಂದು ರಕ್ಷಿಸೋ ಇಂದು ಭೂಧರಾ ||೧|| ಕರುಳಮಾಲೆ ಧರಿಸಿದ ಶ್ರೀ- ವರದ ವಾಮನಾಧೃತ ಕರದ ಪರಶುರಾಮ ರಾಘವ ಯದುಕುಲೋತ್ತಮಾ ||೨|| ಲೋಕಮೋಹಕ ಬುದ್ಧನಾಗಿ ತೇಜಿಯನೇರಿದಾ ಜಗ- ದೇಕ ಜಗನ್ನಾಥವಿಠಲ ಭೀಕರಾಂತಕಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀಲಲೋಹಿತ ಪಾಲಯಮಾಂ

ರಾಗ ಕಾಂಬೋಧಿ(ಬಿಲಾವಲ್ ) ಝಂಪೆತಾಳ (ಕಹರವಾ) ನೀಲಲೋಹಿತ ಪಾಲಯಮಾಂ , ನೀಲಲೋಹಿತ ||ಪ|| ಫಾಲನಯನ ಶುಂಡಾಲಚರ್ಮ ಸುದು- ಕೂಲ ಮೃಡ ಪಾಲಿಸು ಕರುಣದಿ ||ಅ.ಪ|| ನಂದಿವಾಹನ ನಮಿಪೆ ಖಳ , ವೃಂದ ಮೋಹನ ಅಂಧಕರಿಪು ಶಿಖಿಸ್ಯಂದನ , ಸನಕ ಸ-ನಂದನಾದಿ ಮುನಿವಂದಿತ ಪದಯುಗ ||೧|| ಸೋಮಶೇಖರ-ಗಿರಿಜಾ ಸು-ತಾಮ್ರಲೇಖರಾ- ಸ್ತೋಮವಿನುತ ಭವಭೀಮ ಭಯಂಕರ, ಕಾಮಾಹಿತ ಗುಣಧಾಮ ದಯಾನಿಧೇ ||೨|| ನಾಗಭೂಷಣ ವಿಮಲ ಸ-ದ್ರಾಗ ಪೋಷಣ ಭೋಗಿಶಯನ ಜಗನ್ನಾಥವಿಟ್ಠಲನ , ಯೋಗದಿ ಭಜಿಸುವ ಭಾಗತರೊಳಿಡು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶಂಭೋ ಸುರಗಂಗಾಧರನೆ

ಕೃತಿಕಾರರು-ಜಗನ್ನಾಥದಾಸರು ರಾಗ - ಮೋಹನ (ಜೀವನಪುರಿ) ಅಟತಾಳ(ದೀಪಚಂದ) ಶಂಭೋ ಸುರಗಂಗಾಧರನೆ ಪಾಲಿ- ಸಂಬಾರಮಣ ಲಿಂಗ ||ಪ|| ನಂಬಿದವರಘ ಕಾದಂಬಿನಿಪವನ ಹೇ- ರಂಬಜನಕ ಕರುಣಾಂಬುಧಿ ಗುರುವರ ||ಅ.ಪ|| ಇಳಿದೇರ ಇಂದುಮುಖ ಈಪ್ಸಿತ ಫಲ ಸಲಿಸುವ ಘನತ್ರಿಶೂಲಿ ಸಲೆ ನಂಬಿದೆನೋ ಹಾಲಾಹಲ ಕಂಠ , ಎನ್ನ ನೀ ಸಲಹೋ ಸಂತತ ರೌಪ್ಯಾಚಲವಾಸ ವರ ಪಂಪಾ- ನಿಲಯ ನಿರ್ಜರ ಸೇವಿತಾನಲ ನಳಿನಸಖ ಸೋಮೇಕ್ಷಣನೆ ಬಾಂ- ದಳ ಪುರಾಂತಕ ನಿಜ ಶರಣ ವ- ತ್ಸಲ ವೃಷಾರೋಹಣ ವಿಬುಧವರ ||೧|| ಮಾರಾರಿ ಮಹದೇವ ನಿನ್ನಯ ಪಾದ ವಾರಿಜ ದಳಯುಗ್ಮವ ಸಾರಿದೆ ಸತತ ಸರೋರುಹೇಕ್ಷಣನ ಹೃ- ದ್ವಾರಿಜದಲಿ ತೋರೋ ಗಾರು ಮಾಡದಲೆನ್ನ ಆರುಮೊಗನಯ್ಯ ಅಮಿತಗುಣಗಣ ವಾರಿನಿಧಿ ವಿಘತಾಘ ವ್ಯಾಳಾ ಗಾರವಿತ್ತ ಪವಿತ್ರ ಸುಭಗ ಶ- ರೀರ ದುರಿತಾರಣ್ಯ ಪಾವಕ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಯಮಾಡೆ ದಯಮಾಡೆ ತಾಯೆ ವಾಗ್ದೇವಿ

(ಕೃತಿಕಾರರು-ಜಗನ್ನಾಥದಾಸರು ರಾಗ - ಮಧ್ಯಮಾವತಿ(ಯಮನ್ ಕಲ್ಯಾಣ) ಆದಿತಾಳ(ಝಪ್) ದಯಮಾಡೆ ದಯಮಾಡೆ ತಾಯೆ ವಾಗ್ದೇವಿ |ಪ|| ದಯದಿಂದ ನೀನೆನ್ನ ನೋಡೆ ವಾಗ್ದೇವಿ ||ಅ.ಪ|| ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆ ವ್ರತತಿಜನೇತ್ರೆ ಭಾರತಿ ನೀ ದಯಮಾಡೆ ||೧| ಸುಮುಖೀ ತ್ವಚ್ಚರಣಾಬ್ಜದ್ರುಮಛಾಯಶ್ರಿತರ ಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ||೨|| ಜಗನ್ನಾಥವಿಠಲನಂಘ್ರಿಗಳ ಸೇವೆಯೊಳು ಸು ಗುಣೆ ಸನ್ಮತಿಕೊಟ್ಟು ಬೇಗನೆ ಸಲಹೆ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಂದಿಪೆನಮ್ಮಾ ಮುದ್ದುಶಾರದೆ

( ರಾಗ ಮಧ್ಯಮಾವತಿ(ಕಾಫಿ) , ಅಟತಾಳ (ತೀನ್ ತಾಳ) ವಂದಿಪೆನಮ್ಮಾ ಮುದ್ದುಶಾರದೆ ಶರ- ಚ್ಚಂದಿರವದನೆ ಶಾರದೆ ||ಪ|| ಇಂದೀವರಾಕ್ಷಿ ಶತಾನಂದನಪ್ರಿಯೆ ದೇವಿ ಕುಂದು ನೋಡದೆ ಶ್ರುತಿವಂದ್ಯೆ ಜ್ಞಾನವ ನೀಡೆ ||ಅ.ಪ|| ಸಿತಾಬ್ಜಾಸನೆ ಸುಖದಾಯಕಿ, ಸುರ ನಾಥಾರಾಧಿತೆ ವಿಶ್ವನಾಯಕೀ ವೀತದುರಿತೆ ಶಿವಮಾತೆ ಸದ್ಗುಣಮಣಿ ವ್ರಾತೆ ವೇದೋಪನಿಷದ್ಗೀತೆ ವಾಗ್ದೇವಿ ಮಾತೆ ||೧|| ಕೋಕಿಲವಾಣಿ ಕವಿಸೇವಿತೆ ಎನ್ನ ವಾಕು ಲಾಲಿಸೆ ಮುನಿವಂದಿತೆ ತೋಕನೆಂದು ಸುವಿವೇಕ ಬುದ್ಧಿಯನಿತ್ತು ಸಾಕು ಸಜ್ಜನರನ್ನು ವಾಕು ಮನ್ನಿಸೆ ತಾಯೆ ||೨|| ಪಾತಕಿಗಳೊಡನಾಡಿ ನಾ ನಿನ್ನ ಪೂತಾಬ್ಜಪದ ಭಜಿಸದ್ಹೋದೆ ನಾ ಪಾತಕವೆಣಿಸದೆ ಸೀತಾರಮಣ ಜಗ- ನಾಥವಿಟ್ಠಲನಂಘ್ರಿಗೀತಾಮೃತವನುಣಿಸು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲಂಬೋದರ ರಕ್ತಾಂಬರಧರ

(ರಾಗ - ಯಮನ್ (ಮಧ್ಯಮಾವತಿ) ಅಟತಾಳ ) ಲಂಬೋದರ ರಕ್ತಾಂಬರಧರ ||ಪ|| ಅಂಬರಾಧೀಶ್ವರ ಗೌರಿಕುಮಾರ ||ಅ ಪ|| ಸಿಂಧುರ ವದನಾರವಿಂದ ಸುಂದರ ವಿಘ್ನಾಂಧಕಾರ ಶರಚ್ಚಂದಿರ ಧೀರ ||೧|| ವರ ಪಾಶಾಂಕುಶ ದಂತ ಧರ ಸುಮೋಹಕ ಶೂರ್ಪಕರಣ ತ್ವಚ್ಛರಣ ಪಂಕಜಕಾ ನಮಿಪೆ ||೨|| ಜಗನ್ನಾಥವಿಠಲನ ಮಗನಾಗಿ ದ್ವಾಪರ ಯುಗದಲಿ ಜನಿಸಿದ ಸುಗುಣ ನೀ ಸಲಹೋ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಖ್ಯಪ್ರಾಣದೇವ

ರಾಗ : ಮಧ್ಯಮಾವತಿ ಏಕತಾಳ ಮುಖ್ಯಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನು ಜಗದೊಳಗೇ ಪ್ರಾಣ ಪಾನಾ ವ್ಯಾನೋದಾನ ಸಮಾನನೇನೆನಿಪ....... ವಾಸವ ಕುಲಿಶದಿ ಘಾಸಿನೆ ಜೀವಕ ಶ್ವಾಸ ನಿರೋಧಿಸಿದೆ.. ಆ ಸಮಯದಿ ಕಮಲಾಸನ ಪೇಳಲು, ನೀ ಸಲಹಿದೆ ಜಗವಾ....
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಮಿಸಿ ಬೇಡುವೆ ವರಗಳ ನಿನ್ನ

ನಮಿಸಿ ಬೇಡುವೆ ವರಗಳ ನಿನ್ನ ಸ೦ಯಮಿ ಕುಲೋತ್ತಮ ರಾಘವೇ೦ದ್ರ ರನ್ನ || ಪ || ವಿಮಲ ಸುಮತಿ ಜನರತಿಪ್ರೀಯಾ - ಪಾದ ಕಮಲಗಳಿಗೆರಗುವೆನೊ ಜೀಯಾ ಶಮಲ ಮಾರ್ಗದಲಿ ನೀ ನೀಯದಿರೊ ಮತಿಯ ಅಮಿತ ಕರುಣದಿ ಪಿಡಿಯೋ ಕೈಯ್ಯ || ೧ || ಕ೦ಡಕ೦ಡವರನು ಬೇಡಿ ನೊ೦ದೆ ಕ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎದ್ದು ಬರುತಾರೆ ನೋಡೆ

ಎದ್ದು ಬರುತಾರೆ ನೋಡೆ ಗುರುಗಳು ತಾವೆದ್ದು ಬರುತಾರೆ ನೋಡೆ || ಪ || ಮುದ್ದು ಬೃಂದಾವನ ಮಧ್ಯದೊಳಗಿಂದ ತಿದ್ದಿ ಹಚ್ಚಿದ ನಾಮ ಮುದ್ರೆಗಳಿಂದೊಪ್ಪುತ || ಅ || ಕೊರಳೋಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಯು ಚೆಲುವ ಮುಖದೊಳು ಪೊಳೆವೊ ದಂತಗಳಿಂದ || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರೋ ರಾಘವೇ೦ದ್ರ - ಬಾರೋ

ಬಾರೋ ರಾಘವೇ೦ದ್ರ - ಬಾರೋ ಕಾರುಣ್ಯವಾರಿಧಿಯೆ ಬಾರೋ ಆರಾಧಿಪ ಭಕ್ತರಭೀಷ್ಟವ ಪೂರೈಸುವ ಪ್ರಭುವೆ ಬಾರೋ || ಪ || ರಾಜವ೦ಶೋದ್ಭವನ ಪಾದ ರಾಜೀವಭೃ೦ಗನೆ ಬಾರೋ ರಾಜಾಧಿರಾಜರೊಳು ವಿ ರಾಜಿಸುವ ಚೆಲುವ ಬಾರೋ || ೧ || ವ್ಯಾಸರಾಯನೆನಿಸಿ ನೃಪನಾ ಕ್ಲೇಶ ಕಳೆದವನೆ ಬಾರೋ
ದಾಸ ಸಾಹಿತ್ಯ ಪ್ರಕಾರ
ಬರೆದವರು