ಪದ / ದೇವರನಾಮ

ದಾಸರ ಪದಗಳು

ಆರು ಒಲಿದರೇನು ನಮಗಿನ್ನಾರು ಮುನಿದರೇನು

(ರಾಗ ಶಂಕರಾಭರಣ ಆದಿತಾಳ) ಆರು ಒಲಿದರೇನು ನಮಗಿನ್ನಾರು ಮುನಿದರೇನು ಕ್ಷೀರಸಾಗರಶಯನ ಹರಿಯ ಸೇರಿದ ಹರಿದಾಸರಿಗೆ ||ಪ|| ಪಡೆದ ತಾಯಿಯು ತಂದೆಯು ನಮ್ಮೊಳಗೆ ಅಹಿತರು ಆದರೇನು ಮಡದಿ ಮಕ್ಕಳು ಮನೆಗಳು ನೆಂಟರು ಮುನಿಸುಗುಟ್ಟಿದರೇನು ಒಡನೆ ತಿರುಗುವ ಆ ಗೆಳೆಯನು ಮನದೊಳು ವೈರವ ಬೆಳೆಸಿದರೇನು ಕಡಲಶಯನನ ಕರುಣಾರೂಪನ ಒಲುಮೆಯುಳ್ಳ ಹರಿದಾಸರಿಗೆ ||೧|| ಊರನು ಆಳುವ ದೊರೆಯು ನಮ್ಮನು ಹೊರಗೆ ಹಾಕಿದರೇನು ಘೋರಾರಣ್ಯದೊಳು ಆಡುವ ಮೃಗಗಳು ಅಡ್ಡಗಟ್ಟೀದರೇನು ಮಾರಿ ಹಿಂಡು ಮುಸುಕಿದ ದಂಡು ಮೈಗೆ ಮುತ್ತಿದರೇನು ವಾರಿಜನಾಭನ ವಸುದೇವಸುತನ ಒಲುಮೆಯುಳ್ಳ ಹರಿದಾಸರಿಗೆ ||೨|| ಕಾನನದೊಳು ಹರಿದಾಡುವ ಉರಗವು ಕಾಲಿಗೆ ಸುತ್ತಿದರೇನು ಜೇನಿನ ಅಂದದಿ ಕ್ರಿಮಿಕೀಟಂಗಳು ಚರ್ಮಕೆ ಮುತ್ತಿದರೇನು ಭಾನುಮಂಡಲ ಭಜಿಸುವ ಭಕ್ತರ ಬಲಗಳು ತಪ್ಪಿದರೇನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸ್ವಾಮಿ ರಕ್ಷಿಸೋ ಶ್ರೀನಿವಾಸ

(ರಾಗ : ಯರಕಲ ಕಾಂಬೋಧಿ ತ್ರಿವಿಡೆ ತಾಳ) ಸ್ವಾಮಿ ರಕ್ಷಿಸೋ ಶ್ರೀನಿವಾಸ ಕಾಮಿತಾರ್ಥವನೀವ ಕಾಕೋದರಾದ್ರೀಶ ||ಪ|| ನಾನಾ ಜನ್ಮದಿ ಬಂದು ನಾನಾವ್ಯಾಧಿಗಳಿಂದ ದೀನನಾದೆನೊ ದೊರೆಯೇ ನಿನ್ನ ನಂಬದಲೆ ಮುನ್ನ್ಯಾರು ಗತಿ ಎನಗೆ ಮನ್ನಿಸೈ ನೀ ಬೇಗ ಸನ್ನಾಹವೇಕಯ್ಯ ಸಣ್ಣವನ ಪೊರೆಯಲು ||೧|| ತಂದೆತಾಯಿಯು ನೀನೆ ಬಂಧುಬಳಗವು ನೀನೆ ಕಂದನು ಕಾಂತೆಯು ನೀನೆನಗೆ ಹರಿಯೇ ಅಂದಗಳು ಚಂದಗಳು ಮಂದಿರವು ಮಾಣಿಕವು ಸಂದೇಹವೇನಯ್ಯ ಸರ್ವವೂ ನೀ ಎನಗೆ ||೨|| ಅಂದು ದ್ರೌಪತಿಯು ಮತ್ತಂದು ದಂತಾವಳನು ಕಂದ ಪ್ರಹ್ಲಾದನು ಅಂದು ತಾ ಧ್ರುವನು ಚಂದದೊಳು ನಿನ್ನನ್ನು ಮಂದಮತಿಯನು ಬಿಟ್ಟು ಪೊಂದಿ ಆನಂದವ ಪಡೆಯಲಿಲ್ಲವೆ ದೇವಾ ||೩|| ಕೊಬ್ಬಿನಾ ಕಣ್ಣು ಕಾಣದೆ ನಿನ್ನ ಮರೆತೆನಯ್ಯ ಅಬ್ಬರಿಸುತಲಿರ್ಪ ಎನ್ನ ಪಾಪಗಳೀಗ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಗಳಾಂಗ ಮನ್ನಿಸಿ ತಪ್ಪನು

(ರಾಗ ನೀಲಾಂಬರಿ ಮಟ್ಟ ತಾಳ ) ಮಂಗಳಾಂಗ ಮನ್ನಿಸಿ ತಪ್ಪನು ರಂಗನಾಥ ರಕ್ಷಿಸೈ ತಂದೆ ಎನ್ನನು ||ಪ|| ಮಮತೆ ಇಲ್ಲದ ಮಡದಿ ಏತಕೆ, ರಂಗನಾಥ ಸುಮತಿ ಇಲ್ಲದ ಸುತನು ಏತಕೆ ಕುಮತಿಯುತರ ಸಂಗವೇಕೆ, ಸಮತೆಯಿಲ್ಲದ ಬಂಧುವೇಕೆ ಅಮಿತ ನಿನ್ನ ಚರಣಕಮಲ ರಮಿತನಾಗದ ಮನುಜನೇಕೆ ||೧|| ಕಣ್ಣು ಇಲ್ಲದ ರೂಪ ಏತಕೆ, ರಂಗನಾಥ ಹೊನ್ನು ಇಲ್ಲದ ಬಾಳು ಏತಕೆ ಮುನ್ನ ಮೂಗು ಇಲ್ಲದ ಮುಖವು ಮಣ್ಣು ತಿಂದು ಹೋದರೇನು ಅಣ್ಣ ನಿನ್ನ ಭಕುತಿ ಇಲ್ಲದ ಸಣ್ಣ ಮನುಜ ಸತ್ತರೇನು ||೨|| ದಾನವಿಲ್ಲದ ಧನವು ಏತಕೆ, ರಂಗನಾಥ ಜ್ಞಾನವಿಲ್ಲದ ವಿದ್ಯೆ ಏತಕೆ ಆಣೆ ಇಲ್ಲದ ಅರಸು ತಾನು ಅಡವಿಪಾಲು ಆದರೇನು ದೀನ ಬಂಧು ನಿನ್ನ ನಂಬದ ಮಾನಹೀನ ಮನುಜನೇತಕೆ ||೩|| ಮಕ್ಕಳಿಲ್ಲದ ಮನೆಯು ಏತಕೆ, ರಂಗನಾಥ ಅಕ್ಕರೆಯಿಲ್ಲದ ಊಟವೇತಕೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನೆಂದು ಕಾಣೆನು ಎನಗುಸುರು ಹರಿಯೆ

(ರಾಗ ಕಲ್ಯಾಣಿ ಝಂಪೆತಾಳ) ಏನೆಂದು ಕಾಣೆನು ಎನಗುಸುರು ಹರಿಯೆ ಈ ನಾರಿಗಳ ರೂಪು ಚೆಲುವೆಂದು ವರ್ಣಿಪರು ||ಪ|| ಹುಳುಕು ಮೋರೆಯ ಕಂಡು ಕುಮುದಬಾಂಧವನೆಂದು ಕೊಳಕುಮೂಗನು ಎಳ್ಳಿನರಳೆನ್ನುತ ಪಳಿತ ಕೇಶಗಳನು ಚೂರ್ಣ ಕುಂತಳವೆನುತ ನಳಿನನಾಭನೆ ಕವಿಗಳೆಂತು ವರ್ಣಿಪರೋ ||೧|| ಉಚ್ಚೆಯಾ ದ್ವಾರವನು ಮದನಮಂದಿರವೆಂದು ತುಚ್ಛವಾದಂಡ ಕರಿಕುಂಭವೆಂದು ಮಚ್ಚರದ ಹೃದಯವನು ಕುಸುಮಕೋಮಲವೆಂದು ಇಚ್ಛೆ ಬಂದಂತೆ ಕವಿಗಳು ಪೇಳ್ವರಯ್ಯ ||೨|| ಅಡಬಲದ ಗ್ರಂಥಿಯನು ಕಲಶಕುಚವೆಂಬರು ಕಡು ಒರಟು ಪಾಣಿಯನು ತಳಿರೆಂಬರು ತಡಬಡುವ ಡೊಂಕು ಕಾಲನು ಕಮಲವೆಂದೆನುತ ಕಡುಪಾಪಿ ಕಬ್ಬಿಗರು ಬಣ್ಣಿಸುವರಯ್ಯ ||೩|| ತೊಗಲು ಮಾಂಸಗಳಿಂದ ಕೂಡಿರುವ ಕಾಯವನು ಬೊಗಳುವರು ಬಂಗಾರಬಳ್ಳಿಯೆಂದು ಜಗವು ಎಲ್ಲವು ಇವರ ಕೆಟ್ಟ ಕವಿತೆಯ ಕೇಳಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಚರಣಾಮೃತ ರುಚಿಕರವಲ್ಲವು ಪರಮಭಕ್ತರಿಗಲ್ಲದೆ

(ರಾಗ ರೇಗುಪ್ತಿ ಮತ್ತು ಪೂರ್ವಿ , ಆದಿತಾಳ) ಹರಿಚರಣಾಮೃತ ರುಚಿಕರವಲ್ಲವು ಪರಮಭಕ್ತರಿಗಲ್ಲದೆ ಅರಿಯದ ಮೂಢಮನುಜನಿಗೆ ಪೇಳಲು ಹರುಷವಾಗಬಲ್ಲುದೆ ||ಪ|| ಅಂದುಗೆ ಅರಳೆಲೆ ಇಟ್ಟರೆ ಕೋಡಗ ಕಂದನಾಗಬಲ್ಲುದೆ ಹಂದಿಗೆ ಸಕ್ಕರೆ ತುಪ್ಪವ ತಿನಿಸಲು ದಂತಿಯಾಗಬಲ್ಲುದೆ ಚಂದಿರ ಕಿರಣವ ನೋಡಲು ಅಂಧಕ ಅಂದವರಿಯಬಲ್ಲನೇ ಇಂದಿರೆಯರಸನ ಮಹಿಮೆಯ ಮಂದ ಮನುಜ ಬಲ್ಲನೇ ||೧|| ಉರಗಗೆ ಕ್ಷೀರವನೆರೆಯಲು ವಿಷ ತಾ ಹರಿದುಹೋಗಬಲ್ಲುದೆ ಭರದಿಂದ ಶುನಕನ ಬಾಲವ ತಿದ್ದಲು ಸರಳವಾಗಬಲ್ಲುದೆ ಪರಿಪರಿ ಬಂಗಾರವ ಇಡೆ ದಾಸಿಯು ಅರಸಿಯಾಗಬಲ್ಲಳೆ ಭರದಿಂದ ನೀಲಿಯ ತೊಳೆಯಲು ಅದರಾ ಕರಿದು ಹೋಗಬಲ್ಲುದೆ ||೨|| ಮೋಡಕೆ ಮೋರವು ಕುಣಿಯಲು ಕುಕ್ಕುಟ ನೋಡಿ ಕುಣಿಯಲುಬಲ್ಲುದೆ ಗೋಡೆಯ ಮುಂದೆ ನಾಟ್ಯವನಾಡಲು ನೋಡಿ ಕೊಡಲು ಬಲ್ಲುದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೇಳೋ ಕೇಳೋ ಮನುಜನೆ ಕೇಳೋ ಕೇಳೋ

( ಭೈರವಿ ರಾಗ ತ್ರಿವಿಡೆ ತಾಳ) ಕೇಳೋ ಕೇಳೋ ಮನುಜನೆ ಕೇಳೊ ಕೇಳೊ ||ಪ|| ಕೇಳು ಲೋಕದ ಬಾಳಿನೊಗೆತನ ಕಾಳು ಮಾಡದೆ ಬಿಡುವುದೆ ನಾಳೆ ಯಮನಾಳುಗಳು ಬೇಗದಿ ಕಾಲ ಹಿಡಿದೆಳೆದೊಯ್ಯದಿರುವರೆ ||ಅ.ಪ|| ಕೋತಿ ಕಂಠಕೆ ರತ್ನಹಾರವ ಕೋತು ಹಾಕಲು ಬಲ್ಲುದೆ ಪ್ರೀತಿಯಿಂದಲಿ ಕತ್ತೆ ಹಾಲೋಗರವನಿಕಲು ರುಚಿಪುದೆ ಜಾತಿರತ್ನದ ತಕ್ಕ ಮೌಲ್ಯವ ಜಾಡನಾ ಮನ ಅರಿವುದೆ ರೀತಿಯಿಂದಲಿ ಪೇಳ್ದ ಧರ್ಮದ ರೀತಿ ಮೂರ್ಖಗೆ ತಿಳಿವುದೆ ||೧|| ಕುರುಡನಿಗೆ ಕರ್ಪೂರ ದೀಪವ ಕಾಣಿಸಿದರವ ಕಾಂಬನೆ ಬರಿದೆ ಕಿವುಡಗೆ ಗೀತವಾದ್ಯವ ಬಾರಿಸಲು ಅವ ಕೇಳ್ವನೆ ಇರದೆ ಮೋಟನ ಬರೆದು ತೋರೆನೆ ಬರೆದು ತೋರಿಸಬಲ್ಲನೆ ಕರುಣವಿಲ್ಲದವಂಗೆ ದುಃಖವ ಒರೆಯೆ ಕರುಣಿಸಲಾಪನೆ ||೨|| ನೀಚನಿಗೆ ಸಂಪತ್ತು ಬಂದರೆ ನೀಚತನವನು ಬಿಡುವನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಹುದಾದರಹುದೆನ್ನಿ, ಅಲ್ಲವಾದರಲ್ಲವೆನ್ನಿ.

(ರಾಗ ಮುಖಾರಿ ಝಂಪೆತಾಳ) ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ ಬಹುಜನರು ನೆಲೆ ತಿಳಿದು ಪೇಳಿ ಮತ್ತಿದನು. ದೇವರಿಲ್ಲದ ಗುಡಿಯು ಪಾಳು ಬಿದ್ದಂಗಡಿಯು ಭಾವವಿಲ್ಲದ ಭಕುತಿ ಅದು ಕುಹಕ ಯುಕುತಿ ಹೇವವಿಲ್ಲದ ಹೆಣ್ಣು ಗಜ್ಜುಗ ಬೆಳೆದಾ ಕಣ್ಣು ಸೇವೆಯರಿಯದ ಧಣಿಯು ಕಲ್ಲಿನಾ ಖಣಿಯು. ಧರ್ಮವಿಲ್ಲದ ಅರಸು ಮುರಿದ ಕಾಲಿನ ಗೊರಸು ನಿರ್ಮಲಿಲ್ಲದ ಮನಸು ಅದು ಕಜ್ಜಿ ತಿನಿಸು(/ಕೊಳಚೆ ಹೊಲಸು) ಕರ್ಮವಿಲ್ಲದ ಗಂಡು ಕರಿಯ ಒನಕೆಯ ತುಂಡು ಮರ್ಮವಿಲ್ಲದ ಮಾತು ಒಡಕು ಮಡಕೆಯ ತೂತು. ಮಕ್ಕಳಿಲ್ಲದ ಸಿರಿಯು ಕೊಳೆತ ತೆಂಗಿನ ಕಾಯಿ ಸೌಖ್ಯವಿಲ್ಲದ ಕೂ(/ಊ)ಟ ಅದು ಕಾಳಕೂಟ ಒಕ್ಕಲಿಲ್ಲದ ಊರು ಕೊಳೆತು ನಾರುವ ನೀರು ಸೊಕ್ಕಿ ನಡೆಯುವ ಭೃತ್ಯ ಅವ ಕ್ರೂರಕೃತ್ಯ ಕಂಡು ಕರೆಯದ ನೆಂಟ ಗಂಡುಗತ್ತೆಯ ಶಂಟ (/ಮೊನೆ ಕೆಟ್ಟಿಹ ಕಂಟ?)
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಮಾಡಲಯ್ಯ ಬಯಲಾಸೆ ಬಿಡದು

(ಮುಖಾರಿ ರಾಗ , ಝಂಪೆ ತಾಳ ) ಏನು ಮಾಡಲಯ್ಯ ಬಯಲಾಸೆ ಬಿಡದು ಮಾನವ ಮೃಗೇಂದ್ರ ರಾಮಚಂದ್ರ ರಕ್ಷಿಸಯ್ಯ ||ಪ|| ಜ್ಯೋತಿಮಯವಾದ ದೀಪದ ಬೆಳಕಿಗೆ ತಾನು ಕಾತುರದಿ ಬೀಳುವಾ ಪತಂಗದಂದದಲಿ ಧಾತುಗೆಟ್ಟು ಬೆಳ್ಳಿ ಬಂಗಾರದಲಿ ಮೆರೆವ ಧೂರ್ತೆಯರ ನೋಡುವೀ ಚಕ್ಷುವಿಂದ್ರಿಯಕೆ ||೧|| ಅಂದವಹ ಸಂಪಿಗೆಯ ಅರಳ ಪರಿಮಳ ಉಂಡು ಮುಂದುವರಿಯದೆ ಬೀಳ್ಪ ಮಧುಪನಂದದಲಿ ಸಿಂಧುರದ ಗಮನೆಯರ ಸಿರಿಮುಡಿಯೊಳಿಪ್ಪ ಹೂ- ಗಂಧ ವಾಸಿಸುವ ನಾಸಿಕದ ಇಂದ್ರಿಯಕೆ ||೨|| ಗಾಣದ ತುದಿಯೊಳಿರ್ಪ ಭೂನಾಗನಂ ಕಂಡು ಪ್ರಾಣಾಹುತಿ ಎಂದು ಸವಿವ ಮೀನಂತೆ ಏಣಾಕ್ಷಿಯರ ಚಂದುಟಿಯ ಸುಧೆಯ ಸವಿದು ತಾ ಜಾಣತನದಲಿ ನಲಿವ ಜಿಹ್ವೇಂದ್ರಿಯಕೆ ||೩|| ದಿಮ್ಮಿಡುವ ಗಣಗಣಾ ಎಂಬ ಘಂಟೆಯ ರವಕೆ ಬೆಮೆಗೊಳುತ್ತಿರುವ ಆ ಹರಿಣನಂದದಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾತಕೆ ಮರುಳಾದೆಯೋ ಮನವೆ

(ರಾಗ ಶಂಕರಾಭರಣ ಝಂಪೆತಾಳ) ಯಾತಕೆ ಮರುಳಾದೆಯೋ ಮನವೆ ಏತಕೆ ಮರುಳಾದೆಯೋ ಯಾತಕೆ ಮರುಳಾದೆ ಕಾಕುದೈವವ ನಂಬಿ ಕಾತರಪಟ್ಟು ನೀ ನೀತಿಮಾರ್ಗವ ಬಿಟ್ಟು ||ಪ|| ಮಾರಿಯು ಮಸಣಿಯು ಕಾಯ್ವುದೆ ನಿನ್ನ ಕೋರಿಕೆಯನು ಕೊಡಬಲ್ಲುದೆ ಧೀರನು ನೀನಾಗಿ ಹರಿಪಾದವ ನಂಬಲು ಆರಿಗು ತೀರದ ಮುಕುತಿಯ ಕೊಡುವನು ||೧|| ಆ ಜಾತಿ ಈ ಜಾತಿ ಎನ್ನದೆ ನೀನು ಸೋಜಿಗವ ಪಟ್ಟು ಸಾಯದೆ ಮೂಜಗದೀಶನ್ನ ದಾಸರ ನಂಬಲು ಮಾಜದೆ ಜಾನದ ದಾರಿಯ ತೋರ್ಪರು ||೨|| ಏನಾಯ್ತು ಈ ಕರ್ಮಮಾರ್ಗದಿ ನೀನು ನಾನಾ ದುಃಖವ ಪೊಂದಿದೆ ಇನ್ನಾದರು ಶ್ರೀ ಅಚ್ಯುತನ ನೆನೆದರೆ ಜಾನದ ತತ್ವವು ತಾನೆ ತಿಳಿವುದಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸರಿಯು ಮಿಗಿಲುಂಟೆ ಲೋಕದಲ್ಲಿ

(ರಾಗ ಮುಖಾರಿ ಝಂಪೆತಾಳ) ಸರಿಯು ಮಿಗಿಲುಂಟೆ ಲೋಕದಲ್ಲಿ ಹರಿಭಕ್ತಿಯೆಂಬ ಮಾತೆಯ ಮಕ್ಕಳೆಲ್ಲರ್ಗೆ ||ಪ|| ಒಂದು ದೇಹವು ಎಂಬ ಮನೆಯೊಳಗೆ ಸರ್ವರೂ ಬಂದು ಸಾಲಾಗಿ ಕುಳಿತಿರ್ದ ಬಳಿಕ ಚಂದವಾದೈದಿಂದ್ರಿಯಂಗಳೆಂಬಂಗುಲಿಗ- ಳಿಂದ ವಿಷಯಂಗಳನು ಉಂಡು ತೊಳೆದರ್ಗೆ ||೧|| ಮಡದಿ ಮಕ್ಕಳು ಎಂಬ ಹಾಳು ಗುಡಿಯನು ಸೇರಿ ತಡೆಯದೇ ಚೆಂಡು ಬುಗುರಿಯನು ಆಡಿ ಓಡಿ ಆಡುತ ಚಿಣ್ಣ ಕೋಲುಗಳನಾಡುತ್ತ ದೂಡಿ ಸರ್ವಾಟದಿಂ ತೊಲಗಿದವರಿಂಗೆ ||೨|| ಆರುವೈರಿಗಳನ್ನು ಅರ್ತಿಯಿಂದಲಿ ಗೆದ್ದು ಒರ್ವರೊರ್ವರು ಕೂಡಿ ಕುಣಿದಾಡುತ ಸೇರಿ ಒಂದೇ ಮಾರ್ಗವನು ಬಿಡದೈತಪ್ಪ ಧೀರ ವೈಕುಂಠಪತಿ ದಾಸರೆಲ್ಲರ್ಗೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು