ಅಪ್ಪಪ್ಪಾ ನೀ ನೋಡಪ್ಪ

೧. ಅಪ್ಪಪ್ಪಾ ನೀ ನೋಡಪ್ಪ ಮೈಯಲ್ಲವು ಕೆಸರಪ್ಪ ಕಪ್ಪು ಬಡಿವುದೇನಪ್ಪ ತೊಳೆವೆನೊ ನೀ ಬಾರಪ್ಪ ೨: ಬಾರಪ್ಪ ನೀ ಬಾರಪ್ಪ ಭಾರ ಹೊರುವುದೇನಪ್ಪ ಭಾರವೆಲ್ಲ ನಿನದಪ್ಪಾ ಸುರರ ಕಾವ ಎನ್ನಪ್ಪ ೩: ಎನ್ನಪ್ಪ ಎನ್ನಪ್ಪ ಮೋರೆ ಸೊಟ್ಟು ಯಾಕಪ್ಪ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಮ್ಮ ನಿಮ್ಮ ಮನೆಗಳಲ್ಲಿ

ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನಮ್ಮ ||ಪಲ್ಲವಿ|| ಬ್ರಹ್ಮ ಮೂರುತಿ ನಮ್ಮ ಕೃಷ್ಣನು ನಿಮ್ಮ ಕೇರಿಯೊಳಿಲ್ಲವೆ ||ಅನುಪಲ್ಲವಿ || ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀ ಗಂಧ ಮೈಯೊಳಗಮ್ಮ ಲೇಸಾಗಿ ತುಲಸಿಯ ಮಾಲೆಯ ಧರಿಸಿದ ವಾಸುದೇವನು ಬಂದ ಕಾಣಿರೇನೆ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಲ್ಲಿ ನೋಡಲು ರಾಮ

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲಿಲ್ಲಿ ನೋಡಿದರೂ ಅಲ್ಲಿ ಶ್ರೀರಾಮ||ಪಲ್ಲವಿ|| ರಾವಣನ ಮೂಲಬಲ ಕಂಡು ಕಪಿಸೇನೆ ಆವಾಗಲೇ ಬೆದರಿ ಓಡಿದವು ಈ ವೇಳೆ ನರನಾಗಿ ಇರಬಾರದೆಂದೆಣಿಸಿ ದೇವ ರಾಮಚಂದ್ರ ಜಗವೆಲ್ಲಾ ತಾನಾದ||1|| ಅವನಿಗೆ ಇವ ರಾಮ ಇವನಿಗೆ ಅವ ರಾಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆಚಾರವಿಲ್ಲದ ನಾಲಿಗೆ

ಪಲ್ಲವಿ: ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಅನುಪಲ್ಲವಿ: ವಿಚಾರವಿಲ್ಲದೆ ಪರರ ದೂಷಿಪುದಕ್ಕೆ ಚಾಚಿಕೊಂಡಿರುವಂಥ ನಾಲಿಗೆ ಚರಣ: ಪ್ರಾತಃಕಾಲದೊಳೆದ್ದು ನಾಲಿಗೆ ಸಿರಿಪತಿಯೆನ್ನ ಬಾರದೆ ನಾಲಿಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತೀರ್ಥವನು ಪಿಡಿದವರೆಲ್ಲ

ಬರೆದದ್ದು : ಕನಕದಾಸರು ರಾಗ : ಶಂಕರಾಭರಣ ತಾಳ : ಆದಿ ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೆ ಜನ್ಮ || ಪ || ಸಾರ್ಥಕವಿಲ್ಲದವರೆಲ್ಲ ಭಾಗವತರೆ || ಅ || ಮೂಗುಪಿಡಿದು ನೀರೊಳಗೆ ಮುಳುಗಿ ಜಪತಪ ಮಾಡಿ ಭಾಗವತ ಶಾಸ್ತ್ರಗಳನೆಲ್ಲ ಓದಿ ಬಾಗಿ ಪರಸತಿಯರನು ಬಯಸಿ ಕಣ್ಣಿಡುವಂಥ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲ್ಲಿರುವನೋ ರಂಗ

ಎಲ್ಲಿರುವನೋ ರಂಗ ರಾಗ : ಮುಖಾರಿ ತಾಳ: ಝಂಪೆ ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ || ಪ || ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು|| ಅ || ತರಳ ಪ್ರಹ್ಲಾದ ಹರಿ ವಿಶ್ವಮಯನೆಂದು ಭರದೊದೆಯಲವನಪಿತ ಕೋಪದಿಂದ ಸ್ಥಿರವಾದೊಡೀ ಕಂಭದಲಿ ತೋರು ತೋರೆನಲು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಮಾಜಸುಧಾರಣೆಯಲ್ಲಿ ದಾಸಕೂಟದ ಪಾತ್ರ ( ವಿದುಷಿ ವಸಂತಮಾಧವಿ ಅವರ ಆಹ್ವಾನಿತ ಬರಹ)

(ಶ್ರೀಮತಿ ಟಿ. ಎಸ್. ವಸಂತಮಾಧವಿ ಅವರು ಸಂಗೀತವಿದುಷಿ ಮಾತ್ರವಷ್ಟೇ ಅಲ್ಲ; ಉತ್ತಮ ಬರಹಗಾರ್ತಿ ಕೂಡಾ. ಅವರು ದಾಸ ಸಾಹಿತ್ಯ ಹಾಗೂ ನಮ್ಮ ಸಮಾಜದ ಮೇಲೆ ಅದರ ಪ್ರಭಾವದ ಬಗ್ಗೆ ಬರೆದ ಲೇಖನವೊಂದು ಹರಿದಾಸ ಸಂಪದದ ಓದುಗರಿಗಾಗಿ ಇಲ್ಲಿದೆ. ಈ ಮೊದಲು ಈ ಬರಹವು ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಸ್ವರ್ಣಸೇತು ಸಂಚಿಕೆಯಲ್ಲಿ ಪ್ರಕಟವಾಗಿತ್ತು. - ಹಂಸಾನಂದಿ) ಸಂಗೀತವು ನಮ್ಮ ದೇಶದ, ಧರ್ಮದ, ಸಂಸ್ಕೃತಿಯ ಹಾಗೂ ಸಾಮಾಜಿಕ ಜೀವನದ ಅವಿಭಾಜ್ಯ ಅಂಗ. ವೇದಗಳ ಕಾಲದಿಂದಲೂ, ಸಂಗೀತಕ್ಕೆ ಎಲ್ಲ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ರಿಯೆಗಳಲ್ಲಿಯೂ ಪಾತ್ರವಿರುವುದು ಕಂಡುಬಂದಿದೆ. ಯಜ್ಙ ಯಾಗಾದಿಗಳು ನಡೆಯುವಾಗಲೂ, ನಿಶ್ಚಿತ ಸಮಯಗಳಲ್ಲಿ, ಇಂತಿಂತಹ ವೇದಮಂತ್ರಗಳನ್ನು ಸಾಮಕರು ಗಾಯನಮಾಡಬೇಕೆನ್ನುವ ವಿಧಿ ಇತ್ತು. ವೇದಗಳು ಕೇವಲ ಧಾರ್ಮಿಕ ಅಂಶಗಳನ್ನು ಮಾತ್ರ ತಿಳಿಸುವುದಿಲ್ಲ. ಸಾಮಾಜಿಕ ವ್ಯವಸ್ಥೆ ನೇರವಾಗಿರಲು ಬೇಕಾದ ಅನೇಕಾನೇಕ ಸೂತ್ರಗಳನ್ನು ವಿಧಿ - ನಿಷೇಧಗಳ ಮೂಲಕ ಖಚಿತವಾಗಿ ಬೋಧಿಸುತ್ತವೆ. ಇವೆಲ್ಲವೂ ವಿದ್ಯಾವಂತರಾದವರಿಗೆ, ಪಂಡಿತರಿಗೆ ಅರ್ಥವಾಗುವ ಸಂಸ್ಕೃತ ಭಾಷೆಯಲ್ಲಿವೆ. ಮುಂದೆ ಸುಮಾರು ಎಂಟನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು, ದೇವ-ದೇವತೆಗಳ ಪರವಾಗಿ ಸ್ತೋತ್ರಗಳನ್ನು ರಚಿಸುವುದರೊಡನೆ, ಸಂಸಾರದಲ್ಲಿನ ಲೋಪದೋಷಗಳನ್ನೂ ಎತ್ತಿ ಹೇಳುತ್ತ, ಈ ದೋಷಯುಕ್ತ ಜೀವನದಿಂದ ಮುಕ್ತರಾಗಲು ಭಗವಂತನೆಡೆಗೆ ಮನಸ್ಸು ತಿರಿಗಿಸುವುದನ್ನು ಪರಿಹಾರವೆಂದು ಸೂಚಿಸಿದ್ದಾರೆ. ಇದೆಲ್ಲವೂ ಸಹ ಸಂಸ್ಕೃತ ಭಾಷೆಯಲ್ಲಿಯೇ ಇರುವುದು.

ತಂಗಾಳಿ ವಶವಲ್ಲವೇ

ತಂಗಾಳಿ ವಶವಲ್ಲವೇ ರಾಗ:ಶಂಕರಾಭರಣ ತಾಳ: ಅಟ ತಂಗಾಳಿ ವಶವಲ್ಲವೇ ||ಪ|| ಅಂಗದೊಳಗೆ ಬೆಳದಿಂಗಳು ತುಂಬಿತು ||ಅ.ಪ|| ಚಂದನದಿಂದ ಕುಚಂಗಳ ತವಿಸಲು ಇಂದುಕಿರಣ ಬಂದು ಕಂದಿಸಲು ಮಂದ ಮಾರುತದಲಿ ನಿಂದಿರಲಾರೆನೇ ಹೊಂದಿದ ತಾಪವು ಹೋಹುದೇನೆ ಹೆಣ್ಣೇ ||ಚ1||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡೆ ನಾ ಕನಸಿನಲಿ

ಪಲ್ಲವಿ: ಕಂಡೆ ನಾ ಕನಸಿನಲಿ ಗೋವಿಂದನ! ಅನುಪಲ್ಲವಿ: ಕಂಡೆ ನಾ ಕನಸಿನಲಿ ಕನಕ ರತ್ನದ ಮಣಿಯ ನಂದನ ಕಂದ ಮುಕುಂದನ ಚರಣವ! ಚರಣಗಳು: ಅಂದುಗೆ ಕಿರುಗೆಜ್ಜೆ ಘಲಿರೆಂಬ ವಾದ್ಯದಿ ಬಂದು ಕಾಳಿಂಗನ ಹೆಡೆಯನೇರಿ ಧಿಂ ಧಿಮಿ ಧಿಮಿಕೆಂಧು ತಾಳಗತಿಗಳಿಂದಾ -
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂಥವನೆಂಥವನೇ!

ಪಲ್ಲವಿ: ಎಂಥವನೆಂಥವನೆ ರಂಗಯ್ಯ ಎಂಥವನೆಂಥವನೆ ಚರಣಗಳು: ಆಗಮವನು ತಂದವನೆ ರಂಗ ಬೇಗದಿ ಗಿರಿಯ ಪೊತ್ತವನೆ ಮೂಗಿಂದ ಭೂಮಿಯನೆತ್ತಿದನೆ ಶಿಶು ಕೂಗಲು ಕಂಭದಿಂದೊದಗಿದನೆ ಕೃಷ್ಣ ಧರಣಿಯ ಈರಡಿ ಮಾಡಿದನೆ ಭೂ- ಸುರನಾಗಿ ಪರಶುವ ಧರಿಸಿದನೆ ಭರದಿ ಕೋಡಗ ಹಿಂಡ ಕೂಡಿದನೆ ಫಣಿ-
ದಾಸ ಸಾಹಿತ್ಯ ಪ್ರಕಾರ
ಬರೆದವರು