ಪದ / ದೇವರನಾಮ

ದಾಸರ ಪದಗಳು

ಕಾಣಬಹುದಕೆ ಕನ್ನಡಿ ಯಾಕೆ

(ಭೈರವಿ ರಾಗ ದಾದರಾ ತಾಳ) ಕಾಣಬಹುದಕೆ ಕನ್ನಡಿ ಯಾಕೆ , ಭಿನ್ನವಿಲ್ಲದೆ ನೋಡಿ ತನ್ನೊಳು ಘನಬ್ರಹ್ಮವಿರಲಿಕ್ಕೆ ಅನುಮಾನವು ಬ್ಯಾಡಿ ||ಧ್ರುವ|| ಕುಂಭಿನಿಯೊಳು ಘನಹೊಳೆಯುತ ತುಂಬಿ ತುಳುಕುತಲ್ಯಾದೆ ಉಂಬವರಿಗಿದಿರಿಡುತ ಬಿಂಬಿಸುತಲ್ಯಾದೆ ಹಂಬಲಿಸಿದರೆ ತನ್ನೊಳಗೆ ತಾ ಗುಂಭಗುರುತವಾಗ್ಯಾದೆ ಡಿಂಬಿನೊಳಗೆ ನಿಜದೋರುತ ಇಂಬು ತಾನೆ ಆಗ್ಯಾದೆ ||೧|| ಹೇಳುವ ಮಾತಿನ ಮಾತಿಲ್ಲ ಕೇಳಿರಯ್ಯ ಚೆನ್ನಾಗಿ ಒಳಹೊರಗಿದು ಭಾಸುತಿಹುದೆಲ್ಲಾ ಸುಳುವು ಬಲ್ಲಾತ ಯೋಗಿ ಕಳೆಕಾಂತಿಗಳ ಅನುಭವವೆಲ್ಲಾನು ತಿಳಿಯಬಲ್ಲವ ಭೋಗಿ ಹೊಳೆವುತಿಹುದು ಸರ್ವಮಯವೆಲ್ಲಾ ಮೊಳೆಮಿಂಚು ತಾನಾಗಿ ||೨|| ಇಲ್ಲೆವೆ ಎರಡು ಹಾದಿಯ ಕಟ್ಟಿ , ಗುಲ್ಲುಮಾಡದೆ ನೋಡಿ ಮ್ಯಾಲಿಹ ಸ್ಥಾನಸ್ಥಾನವ ಮುಟ್ಟಿ ಮೂಲಸ್ಥಾನವ ಕೂಡಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಂಡಿರ್ಯಾ ನೀವು ಕೊಂಡಿರ್ಯಾ

(ಕಾಲಿಂಗಡಾ ರಾಗ ದೀಪಚಂದಿ ತಾಳ) ಕೊಂಡಿರ್ಯಾ ನೀವು ಕೊಂಡಿರ್ಯಾ ಮಂಡಲದೊಳು ವಸ್ತು ಕೊಂಡಿರ್ಯಾ ||ಧ್ರುವ|| ಕೊಳಬೇಕಾದರೆ ನೀವು ತಿಳಿದುಕೊಂಡು ಬನ್ನಿ ||೧|| ತಿಳಿಯದಿದ್ದರೆ ಖೂನ ಕೇಳಿ ಸದ್ಗುರುವಿನ ||೨|| ಬೆಲೆಯು ಹೇಳುವದಲ್ಲ ನೆಲೆಯು ತಿಳಿಯುವದಲ್ಲ ||೩|| ಅಳೆದು ಕೊಡುವುದಲ್ಲ ಕೊಳಗ ಎಣಿಸುವುದಲ್ಲ ||೪|| ತೂಕ ಮಾಡುವದಲ್ಲ ಲೆಕ್ಕ ಇಡುವುದಲ್ಲ ||೫|| ಇಟ್ಟು ಮಾರುವುದಲ್ಲ ಕೊಟ್ಟರ್ಹೋಗುವುದಲ್ಲ ||೬|| ಪಂಡಿತರಿಗೆ ಪ್ರಾಣ ಕೊಂಡವರಿಗೆ ತ್ರಾಣ ||೭|| ಹೇಳಿದೆ ನಾ ನಿಮಗೊಂದು ಸುಲಭವಾಗಿಂದು ||೮|| ಒಮ್ಮನವಾದರೆ ಸುಮ್ಮನೆ ಬಾಹುದು ||೯|| ಸಾಧು ಸಜ್ಜನರಿಗೆ ಸಾಧ್ಯವಾಗದಿದು ||೧೦||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡಿ ನೋಡಿ ನಿಮ್ಮೊಳು ನಿಜ ಘನವ

(ಕಾಫಿ ರಾಗ ತೀನ್ ತಾಳ) ನೋಡಿ ನೋಡಿ ನಿಮ್ಮೊಳು ನಿಜ ಘನವ ||ಧ್ರುವ|| ಆಧಾರ ಧೃಡದಿಂದ ಆರು ಸ್ಥಳವ ಮುಟ್ಟಿ ಆದಿ ಅನಾದಿಯ ಪಥವ ನೋಡಿ ||೧|| ಭೂಚರ ಖೇಚರ ಜಲಚರ ಗೋಚರ ಅಲಕ್ಷ ಮುದ್ರೆಯ ಸ್ಥಾನ ನೋಡಿ ||೨|| ಪರಾಪಶ್ಯಂತಿಯ ಮಧ್ಯಮ ವೈಖರಿ ವೇದಾಂತಾಕರದ ಸಾರ ನೋಡಿ ||೩|| ಪಂಚತತ್ವದ ಗತಿ ಪಂಚಪ್ರಾಣದ ಸ್ಥಿತಿ ಪಂಚ ಕರುಣಾಕೃತಿ ಗತಿ ನೋಡಿ ||೪|| ಸ್ಥೂಲಸೂಕ್ಷ್ಮ ಕಾರಣ ಮಹಾಕಾರಣ ನೋಡಿ ಆನಂದಗತಿಯಲಿ ಬೆರೆದಾಡಿ ||೫|| ಅಕ್ಷರಕ್ಷರವು ಶಬ್ದನಿಶ್ಶಬ್ದವು ಶೂನ್ಯ ಮಹಾ- ಶೂನ್ಯ ನಿಶ್ಶೂನ್ಯ ನೋಡಿ ||೬|| ಮಹಿಪತಿ ಸ್ವಾಮಿ ಶ್ರೀಗುರು ಸರ್ವೋತ್ತಮನ ನೋಡಿ ಆನಂದಗತಿಯಲಿ ಬೆರೆದಾಡಿ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಡುತಲಿಹುದು ಬೆಡಗಿನ ಕೋಡಗ

(ಮಾಂಡ್ ರಾಗ ಕೇರವಾ ತಾಳ) ಕಾಡುತಲಿಹುದು ಬೆಡಗಿನ ಕೋಡಗ ಬಡವರಿಗಳವಲ್ಲ ಪೊಡವಿಯಲಿ ||ಧ್ರುವ|| ಮಾಯದ ಮುಖವದು ಮೋಹದ ನಾಶಿಕ ಮಾಯ ಮಕರ ಕಿವಿಗಣ್ಣುಗಳು ಹ್ಯಾವ ಹೆಮ್ಮೆಯು ಹುಬ್ಬು ಕಪಿ ಕಣ್ಣ ಎವೆಗಳು ಬಾಯಿ ನಾಲಗೆ ಹಲ್ಲು ಬಯಕೆಗಳು ||೧|| ಗರ್ವಗುಣ ಶಿರ ಗಾತ್ರ ಸರ್ವಾಂಗವು ದುರುಳ ದುರ್ಬುದ್ಧಿಯ ಬೆರಳುಗಳು ಎರಡು ತುಟಿಗಳೆಂಬ ನಿಂದೆ ದೂಷಣಗಳು ಕೊರಳು ಕುತ್ತಿಗೆ ದುಷ್ಕರ್ಮಗಳು ||೨|| ಹಣೆಯು ದಾಡಿಯು ಗಲ್ಲ ಪ್ರಪಂಚ ಶೋಭಿತ ಕಣ್ಣ ಭಾವಗಳಿವು ಚಂಚಲವು ಬಣ್ಣಬಣ್ಣದಿ ಕುಣಿದಾಡುವ ಕಪಿ ಗುಣ ಏನೆಂದ್ಹೇಳಲಿ ಕಪಿ ವಿವರಣವ ||೩|| ಉದರ ಬೆನ್ನುಗಳಿವು ಸ್ವಾರ್ಥ ಬುದ್ಧಿಗಳು ಮದಮತ್ಸರಗಳೆಂಬ ಕೈಗಳು ಪಾದ ಕಾಲುಗಳಿವು ಕಾಮಕ್ರೋಧಗಳು ಮೇದಿನಿಯೊಳು ಕುಣಿದಾಡುವದು ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮನವೇನೆಂಬುದನರಿಯೋ ಮನುಜ

---ಅಸಾವೇರಿ( ಜೀವನಪುರಿ ರಾಗ ) ಆದಿತಾಳ ಮನವೇನೆಂಬುದನರಿಯೋ ಮನುಜ ಮನವೇನೆಂಬುದನು ||ಧ್ರುವ || ಮನವೇನೆಂಬುದನನುಭವಕೆ ತಂದು ಖೂನದಲಿಡದೆ ಜ್ಞಾನದಲಿ ನಾನಾ ಶಾಸ್ತ್ರವ ಓದಿ ನೀ ಅನುದಿನ ಏನು ಘಳಿಸಿದ್ಯೊ ಮರುಳ ಮನುಜಾ ||೧|| ಉತ್ಪತ್ತಿ ಸ್ಥಿತಿ ಲಯ ಕರ್ತರೆಂದೆನಿಸಿ ಪ್ರತ್ಯೇಕವರನು ತೋರುತಲಿ ಮತ್ತೆ ಬ್ಯಾರ್ಯಾದ ಪರಬ್ರಹ್ಮೆಂದು ತಾ ಚಿತ್ತ ಭ್ರಮಿಸುದು ದಾವುದೊ ಮನುಜ ||೨|| ಏಕೋ ವಿಷ್ಣು ವೆಂದೆನಿಸಿ ಮುಖದಲಿ ಪೋಕ ದೈವಕೆ ಬಾಯದೆರೆಸುತಲಿ ನಾಕು ವೇದವ ಬಲ್ಲವನೆಂದೆನಿಸಿ ವಿಕಳಿಸುತಿಹುದು ದಾವುದೊ ಮನುಜ ||೩|| ಉತ್ತಮೋತ್ತಮರ ಕಂಡಾಕ್ಷಣದಿ ಹರುಷದಿ ನಿತ್ಯಿರಬೇಕೀ ಸಹವಾಸವೆನಿಸಿ ಮತ್ತೊಂದರಘಳಿಗಾಲಸ್ಯವ ತೋರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಡೆವ ಬನ್ನಿ ಸಡಗರದಿಂದ ಘುಡಘುಡಿಸಿ

( ಭೈರವಿ ರಾಗ ಕೇರವಾ ತಾಳ) ಕಡೆವ ಬನ್ನಿ ಸಡಗರದಿಂದ ಘುಡಘುಡಿಸಿ ದೃಢವೆಂಬುದು ಕಡುಕಂಬನೆ ಮಾಡಿ ನಡನಡಿಸಿ ನುಡಿ ನಿಜ ಒಡನೆ ಪಡಗವ ತಂದು ಜಡದಿಡಸಿ ಜಡದಿಡಸಿ ಹುಡುಕಿ ತೆಗೆದಡಕುವ ನವನೀತ ಗಡಬಡಿಸಿ ಗಡಬಡಿಸಿ ||೧|| ಮೀಸಲಮನ ಕೆನೆಮೊಸರನೆ ಮಾಡಿ ಶೋಧಿಸಿ ಶೋಧಿಸಿ ವಾಸನೆ ಮೊಸರ ಕರಣೆಕುಸಕಿರಿದು ಮರ್ದಿಸಿ ಮರ್ದಿಸಿ ಮೋಸಹೋಗದೆ ದುರಾಶದ ಕಿಲ್ಮಿಷ ಝಾಡಿಸಿ ಝಾಡಿಸಿ ಧ್ಯಾಸ ಬಲಿದು ಸುವಾಸನೆ ಕಳಲ ಕಡೆವದಾರಂಭಿಸಿ ||೨|| ನಾಮದಿವ್ಯ ಮಂತವ ಕಟ್ಟಿ ವಿಷಮಬಿಡಿಸಿ ವಿಷಮಬಿಡಿಸಿ ನೇಮದಿಂದ ಸುಪ್ರೇಮದರವಿಗೆ ಘಮಗುಡಿಸಿ ಘಮಗುಡಿಸಿ ಶಮೆದಮೆವೆಂಬ್ಹಗ್ಗನೆ ಸಮವಿಡಿದು ಧಿಮಿಗುಡಿಸಿ ಧಿಮಿಗುಡಿಸಿ ಶ್ರಮಜನ್ಮದ ಹರುವ ಕ್ರಮಗೊಂಡಾಹಂ ಬಿಡಿಸಿ ||೩|| ನಾವು ನೀವೆಂಬ ಹೊಲೆಗುಡತಿಯ ನೆರೆಬಿಡಿಸಿ ನೆರೆಬಿಡಿಸಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆದಿತತ್ವದ ಸಾರ ತಿಳಿಯದೆ ಭೇದಾಭೇದವಿದ್ಯಾತಕೆ

(ಭೈರವಿರಾಗ ದಾದರಾ ತಾಳ) ಆದಿತತ್ವದ ಸಾರ ತಿಳಿಯದೆ ಭೇದಾಭೇದವಿದ್ಯಾತಕೆ ವೇದ ಉಪನಿಷದ್ವಾಕ್ಯವರಿಯದೆ ಗಾಧ ಸೂಸುವದ್ಯಾತಕೆ ಹರಿಭಕುತಿಗೆ ||ಧ್ರುವ|| ಮೂಲದಲಿ ಮನಮೈಲ ತೊಳಿಯದೆ ಜಲಮುಣುಗುವದಿದ್ಯಾತಕೆ ಬಲುವಭಾವದ ಕೀಲ ತಿಳಿಯದೆ ಮಾಲೆಜಪ ಕೈಯಲ್ಯಾತಕೆ ನೆಲೆಯುಗೊಳ್ಳದೆ ಮೂಲಮೂಲ ಮೂರ್ತಿಯ ಮ್ಯಾಲೆ ತಲೆ ಮುಸುಕ್ಯಾತಕೆ ಹಲವು ಜನ್ಮದ ಹೊಲಿಯು ತೊಳಿಯದೆ ಶೀಲ ಸ್ವಯಂಪಾಕ್ಯಾತಕೆ ||೧|| ಹರಿಯ ಚರಣಾಂಬುಜವನರಿಯದೆ ಬರಿಯ ಮಾತಿನ್ಯಾತಕೆ ಗುರುವಿನಂಘ್ರಿಯ ಗುರುತವಿಲ್ಲದೆ ಶರಣಸಾವಿರವ್ಯಾತಕೆ ತುರಿಯಾವಸ್ಥೆಯೊಳರಿತು ಕೂಡದೆ ತೋರಿಕೆಯ ಡಂಭವ್ಯಾತಕೆ ತರಣೋಪಾಯದ ಸ್ಮರಣೆ ಇಲ್ಲದೆ ತರ್ಕಭೇದಗಳ್ಯಾತಕೆ ||೨|| ಅಂತರಾತ್ಮದ ತಂತುವಿಡಿಯದೆ ಗ್ರಂಥಪಠಣಗಳ್ಯಾತಕೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸತ್ಯದಾ ನುಡಿ ಹಿಡಿರೋ ಮನುಜರು

(ಕಾಫೀ ರಾಗ ತೀನ್ ತಾಳ) ಸತ್ಯದಾ ನುಡಿ ಹಿಡಿರೋ ಮನುಜರು ಸತ್ಯದಾ ನಡಿಗಿನ್ನು ಮತ್ತೊಂದು ಭಯವಿಲ್ಲ ||ಪ|| ಸತ್ಯದಾ ನಡಿಗಿನ್ನು ಸತ್ಯ ನುಡಿಯಲುಬೇಕು ಸತ್ಯಂ ಸತ್ಯ ಶರಣರೆಲ್ಲಾ ಎತ್ತಾಡಿಸುವಂತೆ ||ಅ.ಪ|| ಕೈಯಾರ ಕೊಂಡಿನ್ನು ಬಾಯಾರಬ್ಯಾಡಿರೊ ಮೈಯೊಳಗಿಹ ಕಾವನಯ್ಯನ ಮರಿಯಬ್ಯಾಡಿ ||೧|| ಹುಸಿಯಾಡಿ ನೀವಿನ್ನು ಘಾಸಿಗೆ ಬೀಳಲಿಬ್ಯಾಡಿ ವ್ಯಸನಕಾಗಿ ಬಿದ್ದು ದೆಶೆಗೆಟ್ಟು ಹೋಗಬ್ಯಾಡಿ ||೨|| ಆಶೆಯ ಕೊಟ್ಟು ನಿರಾಶೆಯ ಮಾಡಲಿಬ್ಯಾಡಿ ಮೋಸ ಮುರುಕದಿಂದ ಘಾಸಿ ಮಾಡಲುಬ್ಯಾಡಿ ||೩|| ಘಟ್ಟಿಸಿ ಒಬ್ಬರ ಹೊಟ್ಟೆ ಹೊರಿಯಬ್ಯಾಡಿ ಸಿಟ್ಟಿಲಿ ನೆಂಟರ ತುಟ್ಟಿಸಿ ಬಿಡಬ್ಯಾಡಿ ||೪|| ಗುಟ್ಟುನೊಳಿಹ ಮಾತು ತುಟ್ಟಿಗಿ ತರಬ್ಯಾಡಿ ಹೊಟ್ಟಿಲೆ ಹಡೆದವರ ಕಟ್ಟಿಗೆ ತರಬ್ಯಾಡಿ ||೫|| ಲೆತ್ತಪಗಡಿ ಆಡಿ ಹೊತ್ತುಗಳೆಯಲಿಬ್ಯಾಡಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡೆ ನಾನೊಂದು ಕೌತುಕವ

( ದುರ್ಗಾ ರಾಗ ದಾದರಾ ತಾಳ) ಕಂಡೆ ನಾನೊಂದು ಕೌತುಕವ ||ಧ್ರುವ || ಆಯಿ ಅಜ್ಜನ ನುಂಗಿದ ಕಂಡೆ ನಾಯಿ ಲಜ್ಜೆಯ ಹಿಡಿದುದ ಕಂಡೆ ಕಾಯಿ ಹೆಜ್ಜೆಯನಿಕ್ಕುತ ಜಗದೊಳು ರಾಜ್ಯ- ಪ್ರದಕ್ಷಿಣೆ ಮಾಡುದು ಕಂಡೆ ||೧|| ಇರುಹೆ ವಿಷ್ಣುನ ನುಂಗಿದ ಕಂಡೆ ನರಿಯು ರಾಜ್ಯನಾಳುದ ಕಂಡೆ ಅರಿಯು ಮರಿಯ ನುಂಗಿದ ಕಂಡೆ ಕುರಿಯಿಂದ ಪರಲೋಕಯೆಯ್ದಿದ ಕಂಡೆ ||೨|| ಇಲಿಯು ಯುಕ್ತಿಯದೋರುದು ಕಂಡೆ ಹುಲಿಯು ಭಕ್ತಿಯ ಮಾಡುದು ಕಂಡೆ ಇಳೆಯೊಳು ಮಹಿಪತಿ ಕಳೇವರದೊಳಿನ್ನು ಮುಕ್ತಿಸಾಧನದೊಂದು ಬೆಡಗನು ಕಂಡೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೈಶ್ವದೇವೆಂಬುದು ಇದೇ ನೋಡಿ

(ಕಾಫೀ ರಾಗ ತೀನ್ ತಾಳ ) ವೈಶ್ವದೇವೆಂಬುದು ಇದೇ ನೋಡಿ ಶ್ವಾಸೋಚ್ಛಾಸವೆಂಬುದು ಪುಟಮಾಡಿ ||ಧ್ರುವ|| ಬ್ರಹ್ಮಜ್ಞಾನವೆಂಬುದು ಕುಂಡಮಾಡಿ ಕರ್ಮಕಾಷ್ಠದಗ್ನಿ ಪುಟಗೂಡಿ ನಾಮ ದಿವ್ಯ ನೆನಹು ತಾ ಊದಿಬಿಡಿ ಕಾಮಕ್ರೋಧವೆಂಬ ಧೂಮ್ರ ಹೋಗಾಡಿ ||೧|| ಜ್ಞಾನವೈರಾಗ್ಯೆಂಬುದು ಅಗ್ನಿ , ನಾ- ನೀನೆಂಬುದು ಆಹುತಿ ಪೂರ್ಣ ನೀಡಿ ಭಿನ್ನ ಭೇದ ಭೂತಬಲಿ ಮಾಡಿ ಮನಮೈಲಿಗೆ ತೊಳೆದು ಶುದ್ಧಮಾಡಿ ||೨|| ವೈಶ್ವದೇವ ಮಹಿಪತಿಗಿದೇ ನೋಡಿ ವಿಶ್ವದೊಳಿದೇ ನಿಜ ನಿತ್ಯ ಮಾಡಿ ಹಸನಾದ ಸತ್ಕರ್ಮ ಇದೇ ನೋಡಿ ಲೇಸು ಲೇಸಾಯಿತು ಪುಣ್ಯಗೂಡಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು