ಪದ / ದೇವರನಾಮ

ದಾಸರ ಪದಗಳು

ಮರೆತೆಯೇನೋ ರಂಗಾ ಮಂಗಳಾಂಗ

(ಕಾಂಬೋಧಿ ರಾಗ ಝಂಪೆತಾಳ) ಮರೆತೆಯೇನೋ ರಂಗಾ ಮಂಗಳಾಂಗ ತುರುಕರ ಕಾಯ್ವಲ್ಲಿ ತೊಂಡನಾಗಿದ್ದೆನ್ನ ||ಪ|| ಕೋಲು ಕೈಯಲಿ ಕೊಳಲು ಜೋಲುಗಂಬಳಿ ಹೆಗಲ ಮ್ಯಾಲೆ ಕಲ್ಲಿ ಚೀಲ ಕೊಂಕಳಲ್ಲಿ ಕಾಲಗಡಗವನಿಟ್ಟು ಕಾಡೊಳಿಹ ಪಶುಹಿಂಡ ಲಾಲಿಸುವ ಬಾಲಕರ ಮ್ಯಾಳದೊಳಗಿದ್ದೆನ್ನ ||೧|| ಕಲ್ಲು ಮಣಿ ಕವಡೆಯನು ಕಾಡೊಳಿಹ ಗುಲಗಂಜಿ ಸಲ್ಲದೊಡವೆಯ ನೀನು ಸರ್ವಾಂಗಕೆ ಅಲ್ಲಲ್ಲೆಸೆಯೆ ಧರಿಸಿ ನವಿಲಗರಿಗಳ ಗೊಂಡೆ ಅಲ್ಲಿ ಗೊಲ್ಲರ ಕೂಡ ಚಲ್ಲಾಟ ಮಾಡುತಲಿ ||೨|| ಸಿರಿದೇವಿ ಬಂದು ಸೇರಿದ ಬಳಿಕ ಲೋಕದಲಿ ಸಿರಿ ಅರಸನೆಂದು ಸೇವಕರರಿವರೋ ಶರಣಾಗತರ ಪೊರೆವ ಶ್ರೀರಂಗವಿಠಲಯ್ಯ ನರಸಿಂಗ ನೀನಿರುವ ಪರಿಯು ಮುಂದಿನ ಸಿರಿಯು||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭೂಷಣಕೆ ಭೂಷಣ ಇದು ಭೂಷಣ

(ಸಾರಂಗ ರಾಗ ಝಂಪೆ ತಾಳ) ಭೂಷಣಕೆ ಭೂಷಣ ಇದು ಭೂಷಣ ಶೇಷಗಿರಿವಾಸ ಶ್ರೀ ವರವೆಂಕಟೇಶ ||ಪ|| ನಾಲಿಗ್ಗೆ ಭೂಷಣ ನಾರಾಯಣ ನಾಮ ಕಾಲಿಗೆ ಭೂಷಣ ಹರಿಯಾತ್ರೆಯು ಆಲಯಕೆ ಭೂಷಣ ತುಲಸಿ ವೃಂದಾವನ ವಿ- ಶಾಲ ಕರ್ಣಕೆ ಭೂಷಣ ವಿಷ್ಣುಕಥೆಯು ||೧|| ದಾನವೇ ಭೂಷಣ ಇರುವ ಹಸ್ತಂಗಳಿಗೆ ಮಾನವೇ ಭೂಷಣ ಮಾನವರಿಗೆ ಜ್ಞಾನವೇ ಭೂಷಣ ಮುನಿಯೋಗಿವರರಿಗೆ ಮಾನಿನಿಗೆ ಭೂಷಣ ಪತಿಭಕ್ತಿಯು ||೨|| ರಂಗನನು ನೋಡುವುದೇ ಕಂಗಳಿಗೆ ಭೂಷಣ ಮಂಗಳಾಂಗಗೆ ಮಣಿವ ಶಿರ ಭೂಷಣ ಶೃಂಗಾರ ತುಲಸಿ ಮಣಿ ಕೊರಳಿಗೆ ಭೂಷಣ ರಂಗವಿಠಲ ನಿಮ್ಮ ನಾಮ ಅತಿ ಭೂಷಣ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಕ್ತಿ ಬೇಕು ವಿರಕ್ತಿ ಬೇಕು

(ಶಂಕರಾಭರಣರಾಗ ಅದಿತಾಳ) ಭಕ್ತಿ ಬೇಕು ವಿರಕ್ತಿ ಬೇಕು ಸರ್ವ- ಶಕ್ತಿ ಬೇಕು ಮುಕ್ತಿಯ ಬಯಸುವಗೆ ||ಪ|| ಸತಿ ಅನುಕೂಲ ಬೇಕು ಸುತನಲಿ ಗುಣಬೇಕು ಮತಿವಂತನಾಗಬೇಕು ಮತ ಒಂದಾಗಿರಬೇಕು ||೧|| ಜಪದ ಜಾಣುವೆ ಬೇಕು ತಪದ ನೇಮವೆ ಬೇಕು ಉಪವಾಸ ವ್ರತ ಬೇಕು ಉಪಶಾಂತವಾಗಿರಬೇಕು ||೨|| ಸುಸಂಗ ಹಿಡಿಯಲಿಬೇಕು ದುಸ್ಸಂಗ ಬಿಡಲಿಬೇಕು ರಂಗವಿಠಲನ್ನ ಬಿಡದೆ ನೆರೆ ನಂಬಿರಬೇಕು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರೋ ಮನೆಗೆ ಗೋವಿಂದ

(ಆರಭಿ ರಾಗ ಅಟ್ಟತಾಳ) ಬಾರೋ ಮನೆಗೆ ಗೋವಿಂದ -ನಿನ್ನಂಘ್ರಿಕಮಲವ ತೋರೋ ಎನಗೆ ಮುಕುಂದ ನಲಿದಾಡು ಮನದಲಿ ಮಾರಪಿತ ಆನಂದನಂದನ್ನ ಕಂದ ||ಪ|| ಚಾರುತರ ಶರೀರ ಕರುಣಾ- ವಾರಿನಿಧಿ ಭವ ಘೋರನಾಶನ ವಾರಿಜಾಸನ ವಂದ್ಯ ನಿರಜ ಸಾರ ಸದ್ಗುಣ ಹೇ ರಮಾಪತೆ ||ಅ.ಪ|| ನೋಡೋ ದಯದಿಂದೆನ್ನ, ಕರಪದುಮ ಶಿರದಲಿ ನೀಡೋ ಭಕ್ತಪ್ರಸನ್ನ , ನಲಿದಾಡೊ ಮನದಲಿ ಬೇಡಿಕೊಂಬೆನೊ ನಿನ್ನ , ಆನಂದ ಘನ್ನ ಮಾಡದಿರು ಅನುಮಾನವ , ಕೊಂ- ಡಾಡುವೆನು ತವ ಪಾದಮಹಿಮೆಗಳನು ಜೋಡಿಸುವೆ ಕರಗಳನು ಚರಣಕೆ ಕೂಡಿಸೊ ತವ ದಾಸಜನರೊಳು ||೧|| ಹೇಸಿ ವಿಷಯಗಳಲ್ಲಿ ತೊಳಲಾಡಿ ನಾ ಬಲು ಕ್ಲೇಶ ಪಡುವುದು ಬಲ್ಲಿ , ಘನ ಯುವತಿಯರ ಸುಖ ಲೇಸು ಎಂಬುದನು ಕೊಲ್ಲಿ , ಆಸೆ ಬಿಡಿಸಿಲ್ಲಿ ಏಸು ಜನುಮದ ದೋಷದಿಂದಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪಾಲೊಳಗದ್ದು ನೀರೊಳಗದ್ದು

(ಮಧ್ಯಮಾವತಿರಾಗ ಆದಿತಾಳ) ಪಾಲೊಳಗದ್ದು ನೀರೊಳಗದ್ದು ಹರಿ ನಾ ನಿನ್ನ ನಂಬಿದೆನೋ ||ಪ|| ಜಲಜನಾಭ ನೀನಿಟ್ಟ ತೆರದಲಿ ಇರುವೆನಯ್ಯ ||ಅ.ಪ|| ಸುಖದುಃಖದೊಳಗಿಡು ಸುಕೃತ ದುಷ್ಕೃತ ಮಾಡು ನಿಖಿಳ ದುಃಖದೊಳೆನ್ನನೋಲ್ಯಾಡಿಸು ಅಖಿಳ ಖಿಳನೆನಿಸು ಅಭಯ ಭಯವ ಸೂಸು ಮಕರಕುಂಡಲ ನಿನ್ನ ಮತವೆ ಸನ್ಮತವಯ್ಯ ||೧|| ಜ್ಞಾನಾಜ್ಞಾನದೊಳಗಿಡು ಮಾನಾಪಮಾನವ ಮಾಡು ಅನಾಥನಾಥರೊಳೆನ್ನ ಅನವರತಾಗಿರಿಸು ದೀನಾದೀನತೆಯೊಳೆನ್ನ ನೀನೀಡ್ಯಾಡು ಶ್ರೀನಾಥ ನಿನ್ನಯ ಮತ ಮತವೇ ಸನ್ಮತವಯ್ಯ ||೨|| ವ್ರಾಣಾಪಾನ ವ್ಯಾನೋದಾನ ಸಮಾನಂಗಳ ಭೇದಿಸು ಘನದಾರಿದ್ರ್ಯದಿ ನೂಕು ಸುಖವೆ ಸುರರೊಳಗ್ಹಾಕು ಮುನಿಜನರ ಸಂಗ ಪೊರೆವ ರಂಗವಿಠಲ ನಿನ್ನಯ ಮತ ಮತವೇ ಸನ್ಮತವಯ್ಯ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನೇ ಬಲ್ಲಿದನೋ ರಂಗ

(ರಾಗ ಭೈರವಿ ಆದಿತಾಳ) ನೀನೇ ಬಲ್ಲಿದನೋ ರಂಗ ನಿನ್ನ ದಾಸರೇ ಬಲ್ಲಿದರೋ ||ಪ|| ನಾನಾ ತೆರದಿ ನಿಧಾನಿಸಿ ನೋಡಲು ನೀನೇ ಭಕ್ತರಾಧೀನನಾದ ಮೇಲೆ ||ಅ.ಪ|| ಪರಮಪುರುಷ ಪರಬೊಮ್ಮನೆಂದೆನುತಲಿ ನಿರುತದಿ ಶ್ರುತಿಯು ಕೊಂಡಾಡಲು ನಿನ್ನನು ನರ ಧರ್ಮಜನರಮನೆಯ ಒಳಗೆ ನಿಂ- ದ್ಹರುಷದಿಂದ ಕರೆದಲ್ಲಿ ಪೋದ ಮ್ಯಾಲೆ ||೧|| ಖ್ಯಾತಿಯಿಂದ ಪುರುಹೂತ ಸಹಿತ ಸುರ ವ್ರಾತವು ನಿನ್ನನು ವಾಲೈಸುತಿರೆ ಭೂತಳದೊಳು ಸಂಪ್ರೀತಿಯಿಂದ ಪಾರ್ಥನ ರಥಕೆ ನೀ ಸೂತನಾದ ಮ್ಯಾಲೆ ||೨|| ಜಲಜಭವಾಂಡದೊಡೆಯನೆಂದೆನಿಸುವ ಬಲು ಬಲು ದೊಡ್ಡವನಹುದಹುದಾದಡೆ ಒಲಿದು ಸದ್ಗತಿಯೀವೆ ಅನುದಿನದಲಿ ನೀ ಬಲಿಯ ಮನೆಯ ಬಾಗಿಲ ಕಾಯ್ದ ಮ್ಯಾಲೆ ||೩|| ಧುರದೊಳು ವಡೆಯನೆಚ್ಚೊಡೆದ ಭೀಷ್ಮನ ಮರಳಿಪುದೆನುತಲಿ ಚಕ್ರವ ಪಿಡಿಯಲು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾರಾಯಣ ನಿನ್ನ ನಂಬಿದೆ

(ರಾಗಶಂಕರಾಭರಣ ಅಟ್ಟತಾಳ) ನಾರಾಯಣ ನಿನ್ನ ನಂಬಿದೆ , ಲಕ್ಷ್ಮೀ- ರಮಣ ನಿನ್ಹೊರತು ಪೊರೆವ ದೈವವೆಲ್ಲಿದೆ ||ಪ|| ನಾ ಮೀರಿ ದುಷ್ಕರ್ಮವ ಮಾಡಿದೆ ಅಪಾರಮಹಿಮ ದಯಾನಿಧೇ ||ಅ.ಪ|| ನಾನಾ ಯೋನಿಗಳಿಂದ ಬಂದೆನೋ ಮಾನ ತಾಳಲಾರದೆ ಬಲು ನೊಂದೆನೋ ದೀನರಕ್ಷಕ ಎನ್ನ ಗತಿ ಮುಂದೇನೋ ಮಾನದಿಂದಲಿ ರಕ್ಷಿಸುವಂಥ ದೊರೆ ನೀನೋ ||೧|| ದಾಸರ ಮನ ಉಲ್ಲಾಸನೆ ಶ್ರೀಶ ಆಶ್ರಿತ ಜನರ ಪೋಷನೆ ಸಾಸಿರ ಅನಂತ ಮಹಿಮನೆ ಕ್ಲೇಶ ನಾಶಪಡಿಸೋ ಶ್ರೀನಿವಾಸನೆ ||೨|| ರಂಗನಗರ ಉತ್ತುಂಗನೆ ಗಂಗಾಜನಕ ಗರುಡತುರಂಗನೆ ಉ- ತ್ತುಂಗ ಗುಣಗಳಂತರಂಗನೆ ಅ- ನಂಗನ ಪೆತ್ತ ರಂಗವಿಠಲನೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಂದನಂದನ ಪಾಹಿ ಗುಣವೃಂದ

(ವಸಂತ ರಾಗ ಅಟ್ಟತಾಳ) ನಂದನಂದನ ಪಾಹಿ ಗುಣವೃಂದ ಸುಂದರರೂಪ ಗೋವಿಂದ ಮುಕುಂದ ||ಪ|| ದಿನಕರಭವಪಾಲ ಕನಕಾಂಕಿತ ಚೇಲ ಜನಕಜಾಲೋಲ ಜನಕಾನುಕೂಲ ||೧|| ಪವನಜಪರಿವಾರ ಯವನವಿದಾರ ನವರತ್ನಹಾರ ನವನೀತಚೋರ ||೨|| ತುಂಗ ವಿಹಂಗತುರಂಗ ದಯಾಪಾಂಗ ರಂಗವಿಠಲ ಭವಭಂಗ ಶುಭಾಂಗ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದೃಷ್ಟಿ ತಾಕೀತೋ ಬೀದಿ ಮೆಟ್ಟಬ್ಯಾಡವೋ

( ಆನಂದಭೈರವಿ ಆದಿತಾಳ) ದೃಷ್ಟಿ ತಾಕೀತೋ ಬೀದಿ ಮೆಟ್ಟಬ್ಯಾಡವೋ ಸೃಷ್ಟಿಯ ನಾರಿಯರೆಲ್ಲ ಕಣ್ಣಿಟ್ಟು ಹೀರುವರೋ ನಿನ್ನ ||ಪ|| ಪುಟ್ಟ ಪದಕಮಲದಿ ಮೆಟ್ಟಿ ರತುನ ಪಾದುಕಾ ಇಟ್ಟ ಕಿರುಗೆಜ್ಜೆ ಪೆಂಡ್ಯೆ ದಿಟ್ಟತನದಿ ಘಟ್ಟಿ ಸಾಸಿರ ಬಾಳುವ ಪಟ್ಟೆಯನೆ ಬಿಗಿ - ದುಟ್ಟು ಮೇಗಿಲ್ಲದೆ ಬೆಲೆಯಾದ ಪಟ್ಟದುಡುದಾರವಿಟ್ಟು ||೧|| ಸಿರಿಯಿರುವ ಉರದಲ್ಲಿ ಪರಿಮಳ ಗಂಧವ ಪೂಸಿ ಪರಿಪರಿ ಪದಕ ಮುತ್ತು ಸರ ವೈಜಯಂತಿ ಕೊರಳ ಕೌಸ್ತುಭ ಕಾಂತಿ ನಿರುಪಮ ಶ್ರೀವತ್ಸಲಾಂಛನ ಸರಿಗೆ ತಾಳಿ ಪದಕವು ಸೇರಿದ ಮುತ್ತ್ತಿನ ಜಲ್ಲೆ ||೨|| ಉಗುರ ಗೋರಂಟಿ ಛಾಯಾ ಚಿಗುರು ಪೋಲುವ ಬೆರಳು ಬಗೆಬಗೆ ರತುನಂಗಳ ನಗಗಳನಿಟ್ಟು ನಗವನೆತ್ತಿದ ಭುಜಕೆ ಬಿಗಿದ ಬಾಹುಪುರಿ ಕೆಂಪು ನಿಗಿನಿಗಿಗುಟ್ಟುವ ಕಾಂತಿ ನಗುತಿದೆ ಬಾಲ ಭಾನುವ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಯಮಾಡಿ ಸಲಹಯ್ಯ ಭಯನಿವಾರಣನೆ

(ಮುಖಾರಿ ರಾಗ ಝಂಪೆತಾಳ) ದಯಮಾಡಿ ಸಲಹಯ್ಯ ಭಯನಿವಾರಣನೆ ಹಯವದನ ನಿನ್ನ ಚರಣ ನಂಬಿದೆನೊ ಜೀಯ ||ಪ|| ಕ್ಷಣ ಕ್ಷಣಕೆ ನಾ ಮಾಡಿದಂಥ ಪಾಪಂಗಳನು ಎಣಿಸಲಳವಲ್ಲ ಅಷ್ಟಿಷ್ಟು ಎಂದು ಫಣಿಶಾಯಿ ನೀನೆನ್ನ ಅವಗುಣಗಳೆನಿಸದೆ ನೆನಹಿನಾತುರ ಕೊಟ್ಟು ದಾಸನೆಂದೆನಿಸಯ್ಯ ||೧|| ಕಂಡ ಕಂಡ ಕಡೆಗೆ ಪೋಪ ಚಂಚಲ ಮನವು ಪಿಂಡ ತಿಂಬಲ್ಲಿ ಬಹು ನಿಷ್ಠ ತಾನು ಭಂಡಾಟದವನೆಂದು ಬಯಲಿಗೆ ತಾರದೆ ಕೊಂಡಾಡುವಂತೆ ಭಕುತಿಯ ಕೊಟ್ಟು ಸಲಹಯ್ಯ ||೨|| ಜಾತಿಧರ್ಮವ ಬಿಟ್ಟು ಅಜಾಮಿಳನು ಇರುತಿರಲು ಪ್ರೀತಿಯಿಂದಲಿ ಮುಕುತಿ ಕೊಡಲಿಲ್ಲವೆ ಖ್ಯಾತಿಯನು ಕೇಳಿ ನಾ ಮೊರೆಹೊಕ್ಕೆ ಸಲಹಯ್ಯ ವಾತಜನ ಪರಿಪಾಲ ಶ್ರೀರಂಗವಿಠಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು