ಮಹೀಪತಿದಾಸರು

ಇದೇ ನಮ್ಮ ವೃತ್ತಿ ಸದ್ಗುರು ಭಾವಭಕ್ತಿ

( ಪಹಾಡಿ ರಾಗ ಕೇರವಾ ತಾಳ) ಇದೇ ನಮ್ಮ ವೃತ್ತಿ ಸದ್ಗುರು ಭಾವಭಕ್ತಿ ||ಧ್ರುವ|| ಇದೇ ನಮ್ಮ ಮನೆಯು ಸದ್ಗುರು ಸ್ಮರಣೆಯು ಇದೇ ನಮ್ಮ ವರ್ತನೆಯು ಸದ್ಗುರು ಪ್ರಾರ್ಥನೆಯು ||೧|| ಇದೇ ನಮ್ಮ ಗ್ರಾಮ ಸದ್ಗುರು ದಿವ್ಯನಾಮ ಇದೇ ನಮ್ಮ ಸ್ತೋಮ ಸದ್ಗುರು ಆತ್ಮಾರಾಮ ||೨|| ಇದೇ ನಮ್ಮ ಭೂಮಿ ಸದ್ಗುರು ಘನಸ್ವಾಮಿ ಇದೇ ನಮ್ಮ ಸೀಮಿ ಸದ್ಗುರು ಅಂತರ್ಯಾಮಿ ||೩|| ಇದೇ ನಮ್ಮ ದೇಶ ಸದ್ಗುರು ಉಪದೇಶ ಇದೇ ನಮ್ಮಭ್ಯಾಸ ಸದ್ಗುರು ಜಗದೀಶ ||೪|| ಇದೇ ನಮ್ಮ ವಾಸ ಸದ್ಗುರು ಸಮರಸ ಇದೇ ನಮ್ಮ ಗ್ರಾಸ ಸದ್ಗುರು ಪ್ರೇಮರಸ ||೫|| ಇದೇ ನಮ್ಮ ವ್ಯಸನ ಸದ್ಗುರು ನಿಜಧ್ಯಾಸ ಇದೇ ನಮ್ಮ ಆಶೆ ಸದ್ಗುರು ಸುಪ್ರಕಾಶ ||೬|| ಇದೇ ನಮ್ಮಾಶ್ರಮ ಸದ್ಗುರು ನಿಜೋತ್ತಮ ಇದೇ ನಮ್ಮುದ್ಯಮ ಸದ್ಗುರು ಸಮಾಗಮ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಗಳ ಮಂಗಳ ಜಯಮಂಗಳ

(ಭೈರವಿ ರಾಗ ತೀನ್ ತಾಳ) ಮಂಗಳ ಮಂಗಳ ಜಯಮಂಗಳಾ , ಶುಭ- ಮಂಗಳ ಸ್ವಾಮಿ ಸರ್ವೋತ್ತಮಗೆ ಸಹಸ್ರ ಮಂಗಳ ದೇವೋತ್ತಮಗೆ ||ಪ|| ಕೇಶವ ನಾರಾಯಣಗೆ ಮಂಗಳ ವಾಸುದೇವ ಸುತ ಶ್ರೀಕೃಷ್ಣಗೆ ಮಂಗಳ ಹೃಷಿಕೇಶ ಪುರುಷೋತ್ತಮಗೆ ಮಂಗಳ ವಸುದೇವಸುತ ಶ್ರೀಕೃಷ್ಣಗೆ ಮಂಗಳ ||೧|| ಅಚ್ಯುತ ಜನಾರ್ದನಗೆ ಮಂಗಳ ಮತ್ಸ್ಯಕೂರ್ಮವರಾಹಗೆ ಮಂಗಳ ಸಚ್ಚಿದಾನಂದ ಶ್ರೀಧರಗೆ ಮಂಗಳ ಮುಚಕುಂದ ವರದ ವಿಷ್ಣುಗೆ ಮಂಗಳ ||೨|| ಮಾಧವ ಮಧುಸೂಧನಗೆ ಮಂಗಳ ಸಾಧು ಹೃದಯವಾಸಗೆ ಮಂಗಳ ಅಧೋಕ್ಷಜ ಅನಿರುದ್ಧಗೆ ಮಂಗಳ ಪದ್ಮನಾಭ ಪ್ರದ್ಯುಮ್ನಗೆ ಮಂಗಳ ||೩|| ಗರುಡವಾಹನ ಗೋವಿಂದಗೆ ಮಂಗಳ ಉರಗಶಯನ ಉಪೇಂದ್ರಗೆ ಮಂಗಳ ಹರಿ ದಾಮೋದರ ಸಮ್ಕರುಷಣಗೆ ಮಂಗಳ ನಾರಸಿಂಹ ತ್ರಿವಿಕ್ರಮಗೆ ಮಂಗಳ ||೪|| ಪರಮಪಾವನ ಭಾರ್ಗವಗೆ ಮಂಗಳ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯ ಜಯ ಕರುಣಾಕರ ಕೃಪಾಲ

(ಯಮನ್ ರಾಗ ತೀನ್ ತಾಲ್) ಜಯ ಜಯ ಕರುಣಾಕರ ಕೃಪಾಲ ಜಯ ಜಯ ಗುರುಮುನಿಜನ ಪ್ರತಿಪಾಲ ||ಧ್ರುವ|| ರಾಜತೇಜೋನಿಧಿ ರಾಜರಾಜೇಂದ್ರ ರಾಜಿಸುತಿಹ ಮಕುಟಮಣಿ ಸುರೇಂದ್ರ ಸುಜನಹೃದಯ ಸದ್ಗುಣಮಣಿ ಸಾಂದ್ರ ಅಜಸುತ ಸೇವಿತ ಸುಜ್ಞಾನ ಸುಮೋದ ||೧|| ಅಗಣಿತಗುಣ ಅಗಾಧ ಅಪಾರ ನಿಗಮಗೋಚರ ನಿರುಪಮ ನಿರ್ಧಾರ ಸಗುಣ ನಿರ್ಗುಣನಹುದೋ ಸಾಕ್ಷಾತ್ಕಾರ ಭಕ್ತವತ್ಸಲ ಮುನಿಜನ ಮಂದಾರ ||೨|| ಧೀರ ಉದಾರ ದಯಾನಿಧಿಪೂರ್ಣ ತಾರಕಸ್ವಾಮಿ ಸದ್ಗುರು ನಿಧಾನ ತರಳ ಮಹಿಪತಿ ಜನೋದ್ಧರಣ ಚರಣಸ್ಮರಣಿ ನಿಮ್ಮ ಸಕಲಾಭರಣ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾನಾ ತಂದನಾನಾ ತಾನಾ ತಂದನಾನಾ

( ಜಾನಪದ ಧಾಟಿ ) ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ||ಧ್ರುವ || ಬಲ್ಲೆಬಲ್ಲೆನೆಂಬರು ಬಲ್ಲರಿಯದಿಹರು ಬಲ್ಲರೆ ನೀವಿನ್ನು ಹೇಳುವದು ತಾನಾ ||೧|| ಕಣ್ಣು ಕಾಂಬುವದೇನು ಕಣ್ಣಿನೊಳಿಹುದೇನು ಕಣ್ಣು ಕಾಂಬುವ ಗತಿ ತಿಳಿಯುವದು ತಾನಾ ||೨|| ಕಿವಿಯು ಕಿವಿಯೆಂಬುವದೇನು ಕಿವಿಯು ಕೇಳುವದೇನು ಕಿವಿಯು ಕೇಳುವ ಗತಿ ತಿಳಿಯುವದು ತಾನಾ ||೩|| ಮೂಗು ಮೂಗೆಂಬುದೇನು ಮೂಗಿನೊಳಾಡುವದೇನು ಆಡುವ ಗತಿಗಳ ತಿಳಿಯುವದು ತಾನಾ ||೪|| ಬಾಯಿ ಬಾಯೆಂಬುದೇನು ಬಾಯಿಯೊಳ ನುಡಿವದೇನು ಬಾಯಿ ನುಡಿವ ಗತಿ ತಿಳಿಯುವದು ತಾನಾ ||೫|| ದೇಹ ದೇಹೆಂಬುದೇನು ದೇಹದೊಳಿಹುದೇನು ದೇಹದೊಳಿಹ ವಸ್ತು ತಿಳಿಯುವದು ತಾನಾ ||೬|| ಪ್ರಾಣವೆಂಬುದೇನು ಕರಣವೆಂಬುದೇನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯದೇವ ಜಯದೇವ ಜಯಗುರು ಮೈಲಾರಿ

( ಮಾಲಕಂಸ್ ರಾಗ ಝಪ್ ತಾಳ) ಜಯದೇವ ಜಯದೇವ ಜಯಗುರು ಮೈಲಾರಿ ಮನಮೈಲ ಮರ್ದಿಸಿದಯ್ಯ ನೀನೆ ಅಸುರಾರಿ ||ಧ್ರುವ|| ಖಡ್ಗವ ಕರದಲಿ ಪಿಡಿದು ಖಂಡಿಸಿದಜ್ಞಾನ ಖಂಡೇರಾಯೆನಿಸಿಕೊಂಡು ಪ್ರಕಟಿಸಿದನುದಿನ ಹಿಂಡದೈವಕೆ ಪ್ರಚಂಡನಹುದೊ ಪರಿಪೂರ್ಣ ಮಂಡಲದೊಳು ನಿಮ್ಮ ಕೊಂಡಾಡುದು ತಾ ಸುರಜನ ||೧|| ಮಲಹರಣ ಮಾಡಲು ಧರಿಸಿ ಅವತಾರ ಮೂಲೋಕ ಪಾವನ ಮಾಡುವ ಸಹಕಾರ ಸಲಹುವೆ ಭಕ್ತ ಜನರಿಗೆ ನೀ ಘನ ಮಂದಾರ ಮಲೆತಿಹ ದೈತ್ಯರ ಸಂಹರಿಸುವೆ ನೀ ಅತಿ ಶೂರ ||೨|| ಮಹಿಗೆ ಪತಿ ಅಹುದು ಶ್ರೀಗುರು ಭೂಪತಿ ಬಾಹ್ಯಾಂತ್ರ ಬೆಳಗುವೆ ಶ್ರೀಪಾದಕೆ ಆರ್ತಿ ಇಹಪರಕೆ ದಾತನಹುದೋ ಶ್ರೀಪತಿ ಜಯಜಯವೆಂದು ಬೆಳಗುವೆ ದಾಸ ಮಹಿಪತಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು

(ಪೂರ್ವಿ ರಾಗ ದೀಪಚಂದಿ ತಾಳ) ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು ||ಧ್ರುವ|| ಎನ್ನೊಳು ಗುರು ತನ್ನ ಮರ್ಮವ ತೋರಿದ ಇನ್ನೇನಿನ್ನೇನು ||೧|| ಮುನ್ನಿನ ಕರ್ಮವು ನಿರ್ಮೂಲವಾಯಿತು ಇನ್ನೇನಿನ್ನೇನು ||೨|| ಎನ್ನೊಳು ಘನ ಬ್ರಹ್ಮವಸ್ತು ತಾನಾಯಿತು ಇನ್ನೇನಿನ್ನೇನು ||೩|| ನಾನು ನಾನೆಂಬುದು ನೆಲೆಯು ತಾ ತಿಳಿಯಿತು ಇನ್ನೇನಿನ್ನೇನು||೪|| ಏನೆಂದು ತಿಳಿಯದ ಅನುಮಾನಗಳೆಯಿತು ಇನ್ನೇನಿನ್ನೇನು ||೫|| ಪರಮತತ್ವದ ಗತಿ ನೆಲೆನಿಭ ತೋರಿತು ಇನ್ನೇನಿನ್ನೇನು ||೬|| ಎನ್ನೊಳಾತ್ಮ ಖೂನ ಕುರುಹುವು ತಿಳಿಯಿತು ಇನ್ನೇನಿನ್ನೇನು ||೭|| ಕನಸುಮನಸು ಎಲ್ಲ ನಿನ್ನ ಸೇವ್ಯಾಯಿತು ಇನ್ನೇನಿನ್ನೇನು ||೮| ಹಗಲಿರುಳೆಂಬುದು ಹಗರಣವಾಯಿತು ಇನ್ನೇನಿನ್ನೇನು ||೯||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂದು ಎನ್ನ ಜನುಮ ಸಾಫಲ್ಯವಾಯಿತು

(ಭೈರವಿ ರಾಗ ದಾದರಾ ತಾಳ) ಇಂದು ಎನ್ನ ಜನುಮ ಸಾಫಲ್ಯವಾಯಿತು ಬಂದು ಎನ್ನ ಮೊದಲೆ ಪುಣ್ಯ ಕೈಗೂಡಿತು ||ಧ್ರುವ|| ಭಾನುಕೋಟಿ ತೇಜವಾಗಿ ರೂಪುದೋರಿತು ತಾನೆ ತನ್ನಿಂದೊಲಿದು ದಯವ ಬೀರಿತು ಜ್ಞಾನ ಭಕುತಿ ವೈರಾಗ್ಯವನ್ನು ಅರುಹಿತು ನಾನು ನೀನು ಎಂಬುವ ಅಹಂಭಾವ ಹರಿಯಿತು ||೧|| ಎಂದು ಇಂದಿರೇಶನ ಕಾಣದ ಕಣ್ಣುದೆರೆಯಿತು ಬಂದು ಬೀಳುವ ಭವಪಾಶದ ಬಲಿಯು ಹರಿಯಿತು ಚಂದವಾಗಿ ಸದ್ಗುರು ಕರುಣ ಮಳೆಯಗರೆಯಿತು ಹೊಂದಿ ಹರುಷಪಡುವಾನಂದ ಪಥವುದೋರಿತು ||೨|| ಭಿನ್ನವಿಲ್ಲದೆ ಸಹಸ್ರದಳದಲ್ಯಾಡುವ ಹಂಸನ ಕಣ್ಣು ಕಂಡು ಪಾವನವಾಯಿತು ವಾಸುದೇವನ ಎನ್ನ ಮನಸಿನಂತಾಯಿತು ಪುಣ್ಯ ಜೀವನ ಧನ್ಯಗೈಸಿತು ಮಹಿಪತಿ ಪ್ರಾಣಜೀವನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡು ಮನವೆ ನಿನ್ನೊಳಾಡುವ ಹಂಸನ

(ಬಸಂತ್ ರಾಗ ಝಪ್ ತಾಳ) ನೋಡು ಮನವೆ ನಿನ್ನೊಳಾಡುವ ಹಂಸನ ಇಡಾಪಿಂಗಳ ಮಧ್ಯನಾಡಿವಿಡಿದು ||ಪ|| ಆಧಾರವಂ ಬಲಿದು ಸ್ವಾಧಿಷ್ಠಾನವ ದಾಟಿ ಹಾದಿವಿಡಿದು ನೋಡು ಮಣಿಪುರದ ಒದಗಿ ಕುಡುವ ಅನಹತ ಹೃದಯಸ್ಥಾನವ ಸಾಧಿಸಿ ನೋಡುವದು ವಿಶುದ್ಧವ ||೧|| ಭೇದಿಸಿ ನೋಡುವದಾಜ್ಞಾ ಚಕ್ರ ದ್ವಿದಳ ಸಾಧಿಸುವದು ಸುಖ ಸಾಧುಜನ ಆಧಾರದಲಿಹ ತಾ ಅಧಿಷ್ಠಾನವ ನೋಡು ಅಧಿಪತಿ ಆಗಿಹಾಧೀನ ದೈವವ ||೨|| ಮ್ಯಾಲಿಹ ಬ್ರಹ್ಮಾಂಡ ಸಹಸ್ರದಳ ಕಮಲ ಹೊಳೆಯುತಿಹ ಭಾಸ್ಕರ ಪ್ರಭೆಯು ಕೂಡಿ ಮೂಲಸ್ಥಾನದ ನಿಜನೆಲೆನಿಭವ ನೋಡು ಬಲಕನೊಡೇಯ ಮಹಿಪತಿಸ್ವಾಮಿಯ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ

(ಬಿಹಾಗ್ ರಾಗ ದಾದರಾ ತಾಳ) ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ ಗುರುಮೂರ್ತಿಯಿಂದ ನಿತ್ಯವಾಗಿ ಪೂರ್ಣಬೆರೆತು ಕೂಡುವಾ ಬನ್ನಿ ಗುರ್ತದಿಂದ ||ಧ್ರುವ|| ಸೂರ್ಯನಿಲ್ಲದೆ ಸುಪ್ರಕಾಶ ತುಂಬಿದೆ ಹೇಳತೀನ ತೂರ್ಯಾವಸ್ಥೆಯೊಳು ಬೆರೆದು ಕೂಡಿದೆ ಜ್ಞಾನಿಬಲ್ಲ ಖೂನ ಬರಿಯ ಮಾತನಾಡಿ ಹೊರೆಯ ಹೇಳುವದಲ್ಲ ಅರಹು ಸ್ಥಾನ ಪರಿಯಾಯದಿಂದ ಪರಿಣಮಿಸಿ ನೋಡಿ ಪರಮಪ್ರಾಣ ||೧|| ಚಂದ್ರನಿಲ್ಲದೆ ಬೆಳದಿಂಗಳು ಬಿದ್ದಿದೆ ಬಹಳ ಇಂದ್ರಾದಿಗಳೆಲ್ಲ ಹರುಷದಿ ನೋಡುವರು ಸರ್ವಕಾಲ ಸುಂದರವಾದ ಸುವಸ್ತು ಒಳಗೊಂಡಿದೆ ಅಚಲ ಸಾಂದ್ರವಾಗಿ ಸುಖ ತುಂಬಿ ತುಳುಕುತಿದೆ ಥಳ ಥಳ ||೨|| ಮನದ ಕೊನೆಯಲಿದ್ದ ಘನಸುಖ ನೋಡಿರೋ ನೆನೆದು ಬೇಗ ಸ್ವಾನುಭವದಲನುಭವಿಸುವದು ಬ್ರಹ್ಮಭೋಗ ನಾ ನೀನೆಂಬುವ ಮಾತು ಏನು ತಾಳುವದಲ್ಲ ರಾಜಯೋಗ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅನುಭವಿದೇ ನೋಡಿ ಆನಂದೋ ಬ್ರಹ್ಮ

(ಮಾಲಕಂಸ್ ರಾಗ ತಾಳ ತ್ರಿತಾಳ) ಅನುಭವಿದೇ ನೋಡಿ ಆನಂದೋ ಬ್ರಹ್ಮ ಏನೆಂದ್ಹೇಳಲಿನ್ನಾಗು ಸಂಭ್ರಮ ||ಧ್ರುವ|| ಸುಖ ನೋಡಿ ನಮ್ಮ ಸ್ವಾನುಭವದ ಸಖರಿಂದ ಮೀರಿ ಬಲು ಸುಸ್ವಾದ ಆಖರಿಂದ ಕೇಳಿ ಗುರು ನಿಜಬೋಧ ಶುಕಮುನಿ ಸೇವಿಸುವದಾ ||೧|| ಬೆರೆದು ನೋಡಿ ಆರು ಚಕ್ರವೇರಿ ಸುರಿಯುತಿದೆ ಸುಖಸಂತ್ರಾಧಾರಿ ಭೋರ್ಗರೆಯುತಿದೆ ಅನಂತಪರಿ- ದೋರಿ ಕೊಡುತಾನೆ ಶ್ರೀಹರಿ ||೨|| ಸುಗ್ಗಿ ಇದೇ ನೋಡಿ ಸುಜ್ಞಾನಿಗಳು ಲಗ್ಗೆ ಮಾಡಿಕೊಳ್ಳಿ ಅದೆ ಬಲು ಬಹಳ ಬೊಗ್ಗಿ ಉಣಬೇಕು ಇದು ಸರ್ವಕಾಲ ಹಿಗ್ಗಿಕೊಳ್ಳೊ ಮಹಿಪತಿ ನೀ ತರಳ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು