ಉಗಾಭೋಗ

Haridasa compositions that fall under ugAbgOga category

ಗಾಳಿಗಿಕ್ಕಿದ ದೀವಿಗೆಯಂತೆ ದೇಹ



ಗಾಳಿಗಿಕ್ಕಿದ ದೀವಿಗೆಯಂತೆ ದೇಹವೆಂದು
ವೇಳೆವೇಳೆಗೆ ಶ್ರುತಿ ಸ್ಮೃತಿ ಸಾರುತಲಿವೆ
ಹಾಳುಹರಟೆಯಿಂದ ಫಲವೇನು ಇಲ್ಲ
ನಾಲಿಗೆ ಇದ್ದು ನಾರಾಯಣೆನ್ನಬಾರದೆ
ಕಾಲಕಾಲಕೆ ಹರಿಯ ಕಲ್ಯಾಣಗುಣಗಳ
ಕೇಳದವನ ಜನ್ಮವ್ಯರ್ಥ ಶ್ರೀ ರಾಮಕೃಷ್ಣ
ಹಾಳುಹರಟೆಯಿಂದ ಫಲವೇನು ಇಲ್ಲ

----ಬಡೇಸಾಹೇಬರು


 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಗಾಣದೆತ್ತಿನಂತೆ ತಿರುಗಾಡಲಾರೆ

ಗಾಣದೆತ್ತಿನಂತೆ ತಿರುಗಾಡಲಾರೆ
ಬಂಡಿಯ ನೊಗದಂತೆ ಬೀಳಲಾರೆ
ಗಿಳಿಯಂತೆ ನಾ ನಿನ್ನ ಕೂಗಾಡಲಾರೆ
ನವಿಲಿನಂತೆ ನಾ ನಲಿದಾಡಲಾರೆ
ಪುರಂದರವಿಠಲ,  ನೀನೇ ಕರುಣಾಳು ಕಾಯೋ




 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಟ್ಟಮೇಲೆ ಒಲೆಯು ಉರಿವಂತೆ ಎನಗಿನ್ನು

ಅಟ್ಟಮೇಲೆ ಒಲೆಯು ಉರಿವಂತೆ ಎನಗಿನ್ನು
ಕೆಟ್ಟ ಮೇಲೆ ಬುದ್ಧಿ ಬಂದಿತೀಗ
ಉದ್ದುಕನ್ನಡಿ ಮೇಲೆ ಉರುಳುವೋಲ್ ಷಡ್ವರ್ಗ
ಕೆದ್ದು ಬಿದ್ದೆನು ಬರಿಯ ಗರ್ವದಿಂದ
ಮರುಳಹಂಕಾರದಲಿ ಮಾಯಕ್ಕೆ ಸಿಲುಕಿನ್ನು
ಮರೆತುಬಿಟ್ಟೆನು ನಿನ್ನ ಮಹಿಮೆಯನ್ನು
ಜ್ಞಾನಸುಖ ಪರಿಪೂರ್ಣ ಏನು ಮಾಡಲು ಇನ್ನು
ಶ್ರೀನಿವಾಸನೆ ನಿನ್ನ ದಾಸ ನಾನು
ಸಾರಿದರ ಬಿಡನೆಂಬ ಬಿರುದನುಳುಹೊ
ಆರಿಗಾರಿಲ್ಲ ನೀನಿಲ್ಲದಿನ್ನು
ನೀರಿನೊಳಗದ್ದು ಕ್ಷೀರದೊಳಗದ್ದು
ಭಾರ ನಿನ್ನದು ಕಾಣೊ ಧೀರ ಶ್ರೀಕಾಂತ

--ದಾಸರ ಲಕ್ಷ್ಮೀನಾರಾಯಣರಾಯರು

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂದು ಶ್ರುತಿರಾಶಿಯನು ತಂದು ಕೊಟ್ಟವರಾರು


ಅಂದು ಶ್ರುತಿರಾಶಿಯನು ತಂದು ಕೊಟ್ಟವರಾರು
ಸಿಂಧುಮಥನದಿ ಸುಧೆಯನಿತ್ತವರಾರು
ನೊಂದು ಮುಳುಗಲು ವಸುಂಧರೆಯ ತಂದವರಾರು
ಕಂದ ಕರೆಯಲು ಬಂದ ಬಂಧುವಾರು
ಇಂದ್ರನೈಶ್ವರ್ಯವನು ತಂದು ಕೊಟ್ಟವರಾರು
ಮಂದನೃಪರನು ಕಾಡಿಕೊಂದವರಾರು
ಸುಂದರಾಂಗಿಯ ಸೆರೆಯ ಬಂದು ಬಿಡಿಸಿದರಾರು
ಕುಂದುಗಳನೆಣಿಸದೆ ಕಾವದಾರು
ನಂದಿನೇರಿದನಿಂಗೆ ಗೆಲುವಿತ್ತವರಾರು
ಬಂದ ಭಯಗಳನೆಲ್ಲ ಬಿಡಿಸುವರಾರು
ಮುಂದೆ ಮುಕ್ತಿಯನೀವ ಶಕ್ತ ಪ್ರಭುವಾರು
ತಂದೆ ಶ್ರೀಕಾಂತನಲ್ಲದೆ ಮತ್ತೆ ಯಾರು

--ದಾಸರ ಲಕ್ಷ್ಮೀನಾರಾಯಣರಾಯರು



ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂಕುಡೊಂಕಾದ ಮಂಚ ಅನಂತಕಾಲದ ಮಂಚ

ಅಂಕುಡೊಂಕಾದ ಮಂಚ ಅನಂತಕಾಲದ ಮಂಚ
ಶಂಕರನ ಕೊರಳಿಗೆ ಪದಕವಾಗಿಹ ಮಂಚ
ವೆಂಕಟ ಪುರಂದರವಿಠಲ ಮಲಗುವ ಮಂಚ
ಶೃಂಗಾರವಾಗಿದೆ ಶ್ರೀಹರಿ  ರಂಗನ ಮಂಚ
ಮಂಗಳಮೂರುತಿ ಪಾಂಡುರಂಗ ಮಲಗುವ ಮಂಚ





ದಾಸ ಸಾಹಿತ್ಯ ಪ್ರಕಾರ
ಬರೆದವರು

ಅನ್ನದಾಸೆಗೆ ಪರರಮನೆಯ ಬಾಗಿಲ ಕಾಯ್ದು


ಅನ್ನದಾಸೆಗೆ ಪರರಮನೆಯ ಬಾಗಿಲ ಕಾಯ್ದು
ಅನೇಕ ಬಾಧೆಗಳಿಂದ ನೊಂದೆನಯ್ಯ
ಅನ್ಯತ್ರ ಪೊಡಮಟ್ಟು  ಪೋಗಲೀಸರು ಅವರು
ಮನ್ನಿಸಿ ಕೃಪೆಯಿಂದ ಕೂಡಿಕೊಂಡಿರಲು
ಅನಾಥಬಂಧು ಶ್ರೀಹಯವದನನೇ
ನಿನ್ನ ಮನೆಯ ಕುನ್ನಿಯಂಜಲಿಕ್ಕಿ ನೀನು ಪೊರೆಯೋ ತಂದೆ

----ವಾದಿರಾಜರು


 

ದಾಸ ಸಾಹಿತ್ಯ ಪ್ರಕಾರ

ಅರಿತವರನು ಕಾಣೆ ನಿನ್ನ ದೇವ

ಅರಿತವರನು ಕಾಣೆ ನಿನ್ನ ದೇವ
ಅರವಿದೂರನೆ ತವ ಮಹಿಮೆಯು ಘನ್ನ
ಭಂಡಿಕಾಲನು ಪಿಡಿದೆಯಂತೆ , ಹತ್ತು
ಭಂಡಿರಾಯನ ಸುತ ನೀನಾದೆಯಂತೆ
ಭಂಡಿಸುರನ ಕೊಂದೆಯಂತೆ , ಧುರದಿ
ಭಂಡಿನಡಿಸಿ ನರನ ಸಲಿಹಿದೆಯಂತೆ
ತಂದೆತಂದೆಗೆ ತಂದೆಯಂತೆ , ಜಗದ
ತಂದೆ ನಿನ್ನಗೆ ತಾಯಿತಂದೆಗಳಂತೆ
ತಂದೆ  ವಿಪ್ರಜರ ನೀನಂತೆ ಸ್ವಾಮಿ
ತಂದೆ ನೃಪಾಲನ ಸುತೆಗೀಶನಂತೆ
ಸಿಂಧೂರದ್ವಯವರದನಂತೆ , ಮಧ್ಯ
ಸಿಂದೂರವದನವು ನಿನಗಿಹುದಂತೆ
ಸಿಂಧುಮಂದಿರ ನೀನಂತೆ , ಶ್ಯಾಮ-
ಸುಂದರ ನಿನಗೆ ಭಕ್ತರ ಚಿಂತೆಯಂತೆ


---ಶ್ಯಾಮಸುಂದರದಾಸರು



 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರಿಗೇತರ ಮೊರೆಯನಿಡಲಿ

ಆರಿಗೇತರ ಮೊರೆಯನಿಡಲಿ
ಸಾರಿದವನ ಪೊರೆವ ಶ್ರೀ ರಮಣ ನೀನಿರಲು
ಬೆಳಸಿಗೊಬ್ಬನ ಕೇಳೆ ಮಳೆಗೆ ಮತ್ತೊಬ್ಬನೆ
ಅಳತೆಗೆ ಇನ್ನೊಬ್ಬನೇ ಹಾಗೆ
ಒಳಿತಿಗೊಬ್ಬರು ದೊರೆಗಳೇ ಮೇಲೆನ್ನ
ಪ್ರಳಯಕ್ಕೆ ಮತ್ತೊಬ್ಬನೇ ಪರಿಪರಿ
ಖಳರ ಮಾತುಗಳೇ ಸ್ವಾಮಿ
ಆ ಕಾಲದಲಿ ನೀನೆ ಈ ಕಾಲದಲಿ ನೀನೆ
ಸಾಕುವನು ಸ್ಥಿರವಾಗಿ ಇನ್ನೊಬ್ಬನೆ
ತಾಕು ತಗಲಿಲ್ಲದನೆ ಬೊಮ್ಮನೆ ಮೊದಲಾದ
ಲೋಕಪತಿಗಳ ಒಡೆಯನೆ ಈ ವೇಳೆ
ಲೋಕರನು ಕಾಯಬೇಕೋ ಸ್ವಾಮಿ
ಕಾಸು ಒಬ್ಬರಿಗಿಲ್ಲ ಲೇಸು ತೋರದಲೇ
ದೇಶಕೊಬ್ಬರು ಪೋದರೋ ಪೊಟ್ಟಿಗೆ
ಕೂಸುಗಳ ಮಾರುತ್ತ ಲುಂಡರೋ ಆ ಜನರ
ಕ್ಲೇಶಪಡೆಸದಲೆ  ಪೊರೆಯೊ ಕರುಣದಲಿ
ವಾಸುದೇವ ವಿಠಲ ಸ್ವಾಮಿ

 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಲ್ಪಧರ್ಮವು ಜ್ಞಾನದಿಂದ ಮಾಡಲು

ಅಲ್ಪಧರ್ಮವು ಜ್ಞಾನದಿಂದ ಮಾಡಲು
ಬ್ರಹ್ಮಪರಿಯಂತ ಸುಖ ಉಂಟು ನರಗೆ
ಸ್ವಲ್ಪೇತರ ತಿಳಿಯದೆ ಮಾಡಲ್ ಫಲವು ಭುಜಗ-
ತಲ್ಪ ಪ್ರಾಣೇಶವಿಠಲ ಮೆಚ್ಚನೋ

----ಲಿಂಗಸುಗೂರಿನ ಯೋಗೇಂದ್ರರಾಯರು


ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಲ್ಪವೆನಿಸಲಿಬೇಡವನ್ಯರಿಗೆ ಎಲೊ ಹರಿಯೆ

ಅಲ್ಪವೆನಿಸಲಿಬೇಡವನ್ಯರಿಗೆ ಎಲೊ ಹರಿಯೆ
ಕಾಲಿಗೆರಗುವೆನೊ ಕರುಣಾರ್ಣವೇಶ
ಕಾಲದೇಶವ ತೋರಿ ಕಠಿಣಮಾತುಗಳಾಡೆ
ಮೇಲೆ ನಿನ್ನ ಘನತೆಗೆ ಶ್ರೀಧರ
ಮೂಲ ನೀ ಸಕಲ ಕಾರಣಗಳಿಗೆ ಮುಖ್ಯ ತವ
ಆಳಿನಾಳೋ ನಾನು ಅನಿಮಿತ್ತಬಂಧು
ಬಾಲಕರ ಬಳಲಿಸುವ ಬಡಿವಾರವೇನೊ ನಾ
ಕೀಳುಮತಿಯಯ್ಯ ಕಿಂಕರರ ದೊರೆಯೆ
ಸಾಲುಸಾಲಿಗೆ ಶ್ರಮಜಾಲ ತೊಲಗಲು ನಿನ್ನ
ಊಳಿಗಕೆ ಮನವೆರಗುವುದೆ ಕೇಶವ
ಪಾಲಸಾಗರಶಾಯಿ ಪತಿತಪಾವನ ಮಾತ-
ಲಾಲಿಸುವುದುಚಿತ ವಿಶಾಲಚರಿತ
ಬಾಲಗೋಪಾಲ ಶ್ರೀಪತಿವಿಠಲನೆ ನಿನ್ನ
ಪಾಲಿಗೇ ಬಂದ ಪಾಮರದಾಸ ನಾನಯ್ಯ





ದಾಸ ಸಾಹಿತ್ಯ ಪ್ರಕಾರ
ಬರೆದವರು