ಪದ / ದೇವರನಾಮ

ದಾಸರ ಪದಗಳು

ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು ಕೇಳಿ

(ಭೈರವಿರಾಗ ದಾದರಾ ತಾಳ) ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು ಕೇಳಿ ಮುಕ್ತಿ ಶೀಲವ ತಿಳಿದು ನಿಜವಿರಕ್ತತನದಲಿ ಬಾಳಿ ||ಧ್ರುವ|| ಪ್ರೇಮ ಪ್ರೀತಿ ರತಿ ನೇಮದಲಿ ಶ್ರೀಸ್ವಾಮಿಚರಣದಲಿಡಬೇಕು ಸೌಮ್ಯ ಸಮಾಧಾನದಲಿ ತಾನಮೃತವನು ಹಿಡಿಯಬೇಕು ರೋಮರೋಮವನು ಕೋಮಲವಾಗಿ ನಿರ್ಮಲದಲಿ ನಡಿಬೇಕು ಶಮೆದಮೆಯಲಿ ತಾ ಕ್ಷಮೆಯನು ಪಡೆದು ಸಮದೃಷ್ಟಿಗುಡಬೇಕು ||೧|| ನಿತ್ಯನಿತ್ಯ ವಿವೇಕವ ತಿಳಿದು ಪಥ್ಯದಲಿ ನಡಿಯಬೇಕು ಚಿತ್ತವೃತ್ತಿ ಸುವೃತ್ತಿಯ ಮಾಡಿ ಸತ್ಯದಲಿ ನುಡಿಯಬೇಕು ಉತ್ತಮೋತ್ತಮ ವಸ್ತುದ ನಿಜಸುಖ ಹೃತ್ಕಮಲದಲಿಡಬೇಕು ಭಕ್ತಿಗೆ ಭಾವನೆ ಬಲಗೊಂಡು ವೈರಾಗ್ಯದ ಸುಖ ತೊಡಬೇಕು ||೨|| ಸೋಹ್ಯ ಸೊನ್ನಿಯ ಸೂತ್ರವ ತಿಳಿದು ಸ್ಥಾಯಿಕನಾಗಿರಬೇಕು ಧ್ಯೇಯಧ್ಯಾತಧ್ಯಾನವ ತಿಳಿದು ಮಾಯದ ಮೊನಿ ಮುರಿಯಬೇಕು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುತ್ತು ಕೊಳ್ಳಿರೋ ಉತ್ತಮರೆಲ್ಲ

(ಬಿಹಾಗ್ ರಾಗ ದಾದರಾ ತಾಳ) ಮುತ್ತು ಕೊಳ್ಳಿರೋ ಉತ್ತಮರೆಲ್ಲ ||ಧ್ರುವ|| ಜ್ಞಾನಸಮುದ್ರದಲಿನ್ನು ಧ್ಯಾನವೆಂಬ ಸಿಂಪಿನೊಳು ಘನಗುರುಕರುಣದ ಮಳೆಯಾದ ಮುತ್ತು ಕೊಳ್ಳಿರೋ ||೧|| ಪಿಂಡಬ್ರಹ್ಮಾಂಡವೆಂಬ ಗಡ್ಡೆಯೊಳಿನ್ನು ಪುಟ್ಟಿ ಭಕ್ತಿಭಾವ ಹಡಗದೊಳು ಬಂದ ಮುತ್ತು ಕೊಳ್ಳಿರೋ ||೨|| ಸಾಧು ಸಜ್ಜನರೆಂಬ ಮುತ್ತಿನ ಜೋಹರೇರ ಕೈಯ ನಿಜಹಸ್ತಸ್ಪರ್ಶವಾದ ನೀವು ಮುತ್ತು ಕೊಳ್ಳಿರೋ ||೩|| ಅತ್ತಲಿತ್ತಲಾಗದೆ ಈ ಮುತ್ತು ಜತನಮಾಡಿ ನಿಮ್ಮ ಚಿತ್ತ ಮನದೊಳು ಇಟ್ಟುಕೊಳ್ಳಿರೋ ||೪|| ತನುಮನಧನವನರ್ಪಿಸಿಕೊಂಡಿಹ ಮುತ್ತು ಮಹಿಪತಿ ಇಹಪರವಸ್ತು ಮುತ್ತು ಕೊಳ್ಳಿರೋ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದೇವೆ ಪೂಜೆಯು ನೋಡಿ ಹೃದಯದಲಿ ಒಡಗೂಡಿ

(ಭೈರವಿ ರಾಗ ದೀಪಚಂದಿತಾಳ ) ಇದೇವೆ ಪೂಜೆಯು ನೋಡಿ , ಹೃದಯದಲಿ ಒಡಗೂಡಿ ||ಧ್ರುವ || ಮೂರ್ತಿ ಎಂಬುದೇ ಅಮೂರ್ತಿ ನಾಮಸ್ವರೂಪ ನಿಜಗುಹ್ಯವಾರ್ತಿ ವ್ಯೋಮಾಕಾರದ ಮನೆಮೂರ್ತಿ ಸ್ವಾಮಿ ಸದ್ಗುರುವಿನ ಕೀರ್ತಿ ||೧|| ನಿತ್ಯ ನಿರ್ಗುಣ ನಿರ್ವಿಕಲ್ಪ ಸತ್ಯ ಸದ್ಗುರು ಸ್ವರೂಪ ನಿತ್ಯನಿತ್ಯ ನಿತ್ಯರ್ಥ ಸುದೀಪ ತತ್ವಜ್ಞಾನ ಮನ ಮಂಟಪ ||೨|| ಸ್ವಾನುಭವ ಸ್ವಾದೋದಕ ಜ್ಞಾನಭಾಗೀರಥಿ ಅಭಿಷೇಕ ಮೌನಮೌನ್ಯ ವಸ್ತ್ರಾಮೋಲಿಕಾ ಧ್ಯಾನವೆಂಬುದೇ ಸೇವೆ ಅನೇಕ ||೩|| ಗಂಧಾಕ್ಷತಿ ಪರಿಮಳವುಳ್ಳ ಪುಷ್ಪ ಬುದ್ಧಿಮನವಾಯಿತು ಸ್ವರೂಪ ಸದ್ವಾಸನ್ಯಾಯಿತು ಧೂಪಧೀಪ ಸದ್ಭಾವನೆ ನೈವೇದ್ಯಮೋಪ ||೪|| ಫಲತಾಂಬೂಲವೆ ಸದ್ಭಕ್ತಿ ಮೂಲಭಿಭಾವನೆ ಮಂಗಳಾರ್ತಿ ಬಾಲಕ ಮಹಿಪತಿ ನಿಜಪೂಜಿಸ್ಥಿತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಿದ್ಧಾಂತವಿದು ನೋಡಿ ಸದ್ಗುರುವಿನ ಕೃಪೆಯು

(ತೋಡಿ ರಾಗ ತೀನ್ ತಾಳ) ಸಿದ್ಧಾಂತವಿದು ನೋಡಿ ಸದ್ಗುರುವಿನ ಕೃಪೆಯು ಬುದ್ಧಿವಂತರು ಬಲ್ಲರಾಧ್ಯಾತ್ಮಸುಖವು ||ಧ್ರುವ|| ಕಾಲಿಲ್ಲದಾಕಳವು ಬಾಲಮುಖದಲಿ ಬಂದು ಕಾಳರೂಪದ ಹುಲಿಯನೆ ನುಂಗಿತು ಮೇಲುವರಿಯಲಿ ಬಂದು ಜಲದೊಳಗಿನ ಕಪ್ಪೆ ಮೂಲಸರ್ಪದ ಹೆಡೆಯ ನುಂಗಿದುದು ನೋಡಿ ||೧|| ಬಾಲ ಇಲ್ಲದ ಇಲಿಯು ಜಾಲ ಹಾಕುತ ಬಂದು ಸ್ಥೂಲ ಬೆಕ್ಕಿನ ತಲೆಯನೆ ಮುರಿಯಿತು ನಾಲಿಗಿಲ್ಲದ ಮೊಲವು ನಿಲುಕಿ ಜಪ್ಪವ ಹಾಕಿ ಭಲೆ ಶ್ವಾನನ ಗಂಟಲ್ಹಿಡದಿಹುದು ನೋಡಿ ||೨|| ದಿವ್ಯಯೋಗದ ಮಾತು ಕಿವಿ ಇಲ್ಲದವ ಕೇಳಿ ಕಣ್ಣಿಲ್ಲದವ ಕಂಡು ಬೆರಗಾದನು ಕೌತುಕವ ಕಂಡು ಮಹಿಪತಿಯು ತನ್ನೊಳು ತಾನು ತ್ರಾಹಿ ತ್ರಾಹಿಯೆಂದ ಮನದೊಳು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದೇ ನೋಡಿ ಸ್ವತಃ ಸಿದ್ಧ ಮಡಿ

( ರಾಗ -ದುರ್ಗಾ ತಾಳ-ದಾದರಾ ) ಇದೇ ನೋಡಿ ಸ್ವತಃ ಸಿದ್ಧ ಮಡಿ ಸದಾ ಸರ್ವದಾ ಇದೇ ಮಾಡಿ ||ಧ್ರುವ|| ಅರಹು ಎಂಬುದೆ ಮಡಿ ಉಡಿ ಮರಹು ಮೈಲಗಿಯ ಮುಟ್ಟಬ್ಯಾಡಿ ಗುರುಸ್ಮರಣೆ ಎಂಬ ನಿಷ್ಠೆಯೊಳುಗೂಡಿ ಪರಬ್ರಹ್ಮ ಸ್ವರೂಪವ ನೋಡಿ ||೧|| ಕಾಮಕ್ರೋಧದ ಸ್ಪರ್ಶವ ಬ್ಯಾಡಿ ನೇಮ ನಿತ್ಯ ಇವನೇ ಮಾಡಿ ಶಮದಮೆಂಬುದು ಕೈಗೂಡಿ ಪ್ರೇಮಭಾವ ಭಕ್ತಿಯ ಮಾಡಿ ||೨|| ಮಿಥ್ಯಾ ಬೂಟಕಿ ಮಡಿ ಮಾಡಬೇಡಿ ಚಿತ್ತಚಿದ್ಘನ ಸಮರಸ ನೋಡಿ ನಿತ್ಯ ಮಹಿಪತಿಗಿದೆ ಮಡಿ ನೋಡಿ ಸತ್ಯ ಸನಾತನ ಪದ ಕೂಡಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದೇ ನೋಡಿರೋ ಸಂಧ್ಯಾನ , ಸದಾ ಆತ್ಮಾನುಸಂಧಾನ

(ಹಂಸಧ್ವನಿ ರಾಗ ಏಕತಾಳ) ಇದೇ ನೋಡಿರೋ ಸಂಧ್ಯಾನ ಸದಾ ಆತ್ಮಾನುಸಂಧಾನ ||ಧ್ರುವ|| ತಿಳಿಯದೆನಗೆ ತ್ರಿಕಾಲ ಹೊಳವುತಿಹುದು ಸೂರ್ಯ ಅಚಲಾ ಕಾಳವ್ಯಾಳ್ಯಲ್ಲಿದಕ ಸಮೂಲಾ ಇಳೆಯೊಳಾಯಿತು ಧರ್ಮಾನುಕೂಲಾ ||೧|| ಚಂಚಲೆಂಬುದೆ ಆಚಮನ ಮುಂಚೆ ಸಂಧ್ಯಾನಕಿದೆ ಸಾಧನ ಸಂಚಿತ ಪ್ರಾಲಬ್ಧಕ್ರಿಯಮಾಣಾ ವಂಚನಿಲ್ಲದ್ದಾಯಿತು ಅರ್ಘ್ಯದಾನ ||೨|| ಪರಮೇಷ್ಠಿ ಪರಬ್ರಹ್ಮಋಷಿಃ ಅರಿತು ಪ್ರಣಮ್ಯ ಸಾಧಿಸಿ ತಿರುಗಿ ನೋಡಿ ಘನ ಸ್ಮರಿಸಿ ಕರಗಿ ಹೋಯಿತು ಪಾಪದ ರಾಶಿ ||೩|| ಆ ಜಪವೆ ಗಾಯತ್ರಿ ಮಂತ್ರ ಬೀಜಾಕ್ಷರವಿದು ಪವಿತ್ರ ರಾಜಿಸುತಿಹುದು ಸರ್ವಾಂತರಾ ನಿಜಗುಹ್ಯ ಋಷಿಮುನಿ ಗೋತ್ರ ||೪|| ಸದೋದಿತ ಗುರುಬೋಧ ಪೂರ್ಣ ಇದಕಿಲ್ಲ ಉದಯಾಸ್ತಮಾನ ಇದೇ ಮಹಿಪತಿ ಸಂಧ್ಯಾನ ಸದಾ ನಿತ್ಯಾನುಸಂಧಾನ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದೇ ನೋಡಿರೋ ಸುಸ್ನಾನ, ಸದ್ಬೋಧದಲಿಹುದು ಮನ

(ಭೂಪ್ ರಾಗ ದೀಪಚಂದಿ ತಾಳ) ಇದೇ ನೋಡಿರೋ ಸುಸ್ನಾನ ಸದ್ಬೋಧದಲಿಹುದು ಮನ ||ಧ್ರುವ|| ಜ್ಞಾನವೆಂಬುದೆ ಪುಣ್ಯನದಿ ಮನ ನಿರ್ಮಲ ಮಾಡುದು ನಾದಿ ನಾನ್ಯಃ ಪಥವೆಂಬುದು ಓದಿ ಖೂನದೋರುದು ಸುಪಥದ ಹಾದಿ ||೧|| ಜ್ಞಾನ ಭಾಗೀರಥೀ ಸ್ನಾನ ಮಾಡಿ ಮನಮೈಲ ಹೋಯಿತು ನೋಡಿ ಘನಪುಣ್ಯೊದಗಿತು ಕೈಗೂಡಿ ಅನುದಿನ ಮನ ಮುಳಗ್ಯಾಡಿ ||೨|| ನಿತ್ಯ ಮಹಿಪತಿಗಿದೇ ಸುಸ್ನಾನ ನಿತ್ಯ ಸದ್ಗುರು ನಿಜಧ್ಯಾನ ಉತ್ತಮೋತ್ತಮಿದೇ ಸಾಧನ ಹಿತದೋರುತಿದೆ ನಿಧಾನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮೈಹೋಳು ನೀ ಬಂದು ಮೈ ಮರಿಯಬ್ಯಾಡವೋ

(ಭೈರವಿ ರಾಗ ತ್ರಿತಾಳ) ಮೈಹೋಳು ನೀ ಬಂದು ಮೈ ಮರಿಯಬ್ಯಾಡವೋ ಮಹಿಮಾನಂದನಂಘ್ರಿಯ ಬಿಡಬ್ಯಾಡವೋ ||ಧ್ರುವ|| ಮಾಯಾಮೋಹದೊಳು ಸಿಲ್ಕಿ ದೇಹ ಭ್ರಮೆಯಗೊಂಡು ಕಾಯಸೌಖ್ಯಕೆ ಬಾಯಿದೆರಿಯಬ್ಯಾಡವೋ ||೧|| ಹೊನ್ನು ಹೆಣ್ಣು ಮಣ್ಣಿಗಾಗಿ ಬಣ್ಣ ಬಣ್ಣ ಪರಿಯಲಿನ್ನು ಕಣ್ಣುಗೆಟ್ಟು ಕುರುದನಂತೆ ದಣಿಯಬ್ಯಾಡವೋ ||೨|| ನಾನು ನೀನು ಎಂಬ ಭಾವ ಮಹಿಪತಿಗಳೆದು ಭಾನುಕೋಟಿ ತೇಜನಂಘ್ರಿ ಬೆರೆದು ಮನಕೂಡವೊ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಥಾದೇವೋ ತಥಾಗುರೌ

(ಭೈರವಿ ರಾಗ ದೀಪಚಂದಿ ತಾಳ) ಯಥಾದೇವೋ ತಥಾಗುರೌ ಶ್ರುತಿ ಹೇಳಿದ ಸನ್ಮತದಲಿರೋ ||ಧ್ರುವ|| ವೃಥಾ ಅಭಾವ ನೀ ಹಿಡುವರೆ ಸ್ವತಃ ಸಿದ್ಧವ ತಾಂ ಬಿಡುವರೆ ಸತ್ಸಂಗದಲಿ ನೋಡಿನ್ನಾರೆ ಚಿತ್ಸುಖ ಹೊಳೆವುದು ಕಣ್ಣಾರೆ ||೧|| ಮುಗಿಲಿಗೆ ಮತ್ತೆ ಮುಗಿಲುಂಟೆ ಹಗಲಿಗೆ ಮತ್ತು ಹಗಲಾಗುದುಂಟೆ ಜಗ ಇಹುದಕೆ ಜಗಮುಂಟೆ ಹೀಗಾದ ಮ್ಯಾಲೆ ವಸ್ತು ಎರಡುಂಟೆ ||೨|| ಅನುಭವಕಿದರಿಟ್ಟು ಬಾಹುದು ಖೂನ ಹೇಳ್ಯಾವು ನೋಡು ವೇದ ದೀನ ಮಹಿಪತಿಗಿದೆ ಬೋಧ ಭಾನುಕೋಟಿ ತೇಜವೊಂದೇ ತಾನಾದ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಾಸುದೇವನಾಶ್ರಯಿಸದಿಹ ಉಪಾಸನ ಯಾತಕೆ

( ಖಮಾಜ್ ರಾಗ ದಾದರಾ ತಾಳ) ವಾಸುದೇವನಾಶ್ರಯಿಸದಿಹ ಉಪಾಸನ ಯಾತಕೆ ಧ್ಯಾಸ ಬಲಿಯದಿಹ ಮಿಗಿಲಭ್ಯಾಸವ್ಯಾತಕೆ ||ಧ್ರುವ|| ಹೃದಯ ಶುದ್ಧವಾಗದೆ ಉದಯಸ್ನಾನವ್ಯಾತಕೆ ಬದಿಯಲಿಹ ವಸ್ತುಗಾಣದ ಜ್ಞಾನವ್ಯಾತಕೆ ಉದರಕುದಿಯು ಶಾಂತಿಹೊಂದದ ಸಾಧನೆ ಯಾತಕೆ ಬುಧರ ಸೇವೆಗೊದಗದಿಹ ಸ್ವಧನವ್ಯಾತಕೆ ||೧|| ಭಾವ ನೆಲೆಗೊಳ್ಳದಿಹ ಭಕುತಿದ್ಯಾತಕೆ ಕಾವನಯ್ಯನ ಕಾಣದಿಹ ಯುಕುತಿದ್ಯಾತಕೆ ದೇವದೇವನ ಸೇವೆಗಲ್ಲದ ಶಕುತಿದ್ಯಾತಕೆ ಹ್ಯಾವ ಹೆಮ್ಮೆ ಅಳಿಯದಿಹ ವಿರಕ್ತಿ ಯಾತಕೆ ||೨|| ತತ್ವ ತಿಳಿಯದಿಹದೀ ವಿದ್ವತ್ವವ್ಯಾತಕೆ ಸತ್ವಗುಣದಲಾಚರಿಸದಿಹ ಕವಿತ್ವವ್ಯಾತಕೆ ಚಿತ್ತಶುದ್ಧವಾಗದಿಹ ಮಹತ್ವವ್ಯಾತಕೆ ವಿತ್ತದಾಸೆಯು ಅಳಿಯದಿಹ ಸಿದ್ಧತ್ವವ್ಯಾತಕೆ ||೩|| ನೀತಿಮಾರ್ಗ ಅರಿಯದಿಹ ರೀತಿ ಅದ್ಯಾತಕೆ
ದಾಸ ಸಾಹಿತ್ಯ ಪ್ರಕಾರ
ಬರೆದವರು