ಪದ / ದೇವರನಾಮ

ದಾಸರ ಪದಗಳು

ನಿನ್ನ ಪೂಜೆ ಹೊರತಿಲ್ಲ ಎನ್ನ ವ್ಯಾಪಾರವೆಲ್ಲ

( ತೋಡಿ ರಾಗ ಆದಿತಾಳ) ನಿನ್ನ ಪೂಜೆಯೊ - ರಾಮ ||ಪ|| ನಿನ್ನ ಪೂಜೆ ಹೊರತಿಲ್ಲ ಎನ್ನ ವ್ಯಾಪಾರವೆಲ್ಲ ||ಅ.ಪ|| ಸ್ನಾನ ಸಂಧ್ಯಾವಂದನ ಹೋಮ ಮೌನ ಜಪ ಸದ್ಗ್ರಂಧ್ಯ ( ಸದ್ಗ್ರಂಥ?) ವ್ಯಾ- ಖ್ಯಾನ ಯಜ್ಞ ಸಾಧನ ಸಂಪಾದನ ಅಧ್ಯಯನ ನಾನಾರಸ ನೈವೇದ್ಯ ಭೋಜನ ತಾಂಬೂಲಚರ್ವಣ ಮಾನಿನಿ ಮೊದಲಾದ ಚಂದನ (ಸ್ಯಂದನ) ಗಾನದ ಭೋಗಗಳೆಲ್ಲ ||೧|| ಸರ್ವೇಂದ್ರಿಯಗಳಲಿಹ ಶರ್ವಾದಿ ದೇವರ್ಕಳಿಗೆ ಸರ್ವಚೇಷ್ಟಾಪ್ರದನಾದ ಪ್ರಾಣಗೆ ನಿರ್ವಾಹಕನಾಗಿ ಸರ್ವಜೀವರ ಕೈಯಿಂದ ಸರ್ವಜ್ಞಾನ ಕರ್ಮಗಳನು ಸರ್ವದಾ ಮಾಡಿಸಿ ಅವರ ಸರ್ವಶುಭಭೋಕ್ತನಹೆ ||೨|| ಅಂಗಾಂಗಗಳಲ್ಲಿ ಸುರರು ಕಂಗಳಲ್ಲಿ ಭಾಗ್ಯಲಕ್ಷ್ಮಿ ಉಂಗುಷ್ಟದಿ ಲೋಕಪಾವನೆ ಗಂಗಾದೇವಿಯು ಹಿಂಗದೆ ನಿನ್ನಲ್ಲಿರಲು ತುಂಗಗುಣ ಪರಿಪೂರ್ಣ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತುರುಗಾಯ ಬಂದ ಗೋಪಿಯ ಕಂದ ಆನಂದದಿಂದ

(ಮೋಹನ ರಾಗ ಆದಿತಾಳ) ತುರುಗಾಯ ಬಂದ ಗೋಪಿಯ ಕಂದ ಆನಂದದಿಂದ ||ಪ|| ಸುರ ನರ ತರು ಮೃಗ ಜಲಚರ ಮೋಹಿಸೆ ತರಳೇರ ಮನಸೂರೆಯಾಗೆ ಕೊಳಲಿಂದ ||ಅ.ಪ|| ತಂದೆಯ ಕಂದನೆಂದು ಕೊಂಕುಳೊಳಿಟ್ಟು ಕಂದನ ಕೆಳಗಿಟ್ಟು ಅಂದುಗೆ ಗೆಜ್ಜೆ ಕಿವಿಗಳಿಗಿಟ್ಟು ಮುತ್ತಿನ ಬಟ್ಟು ಹೊಂದಿಸಿ ಗಲ್ಲದಲಿ ತಾನಿಟ್ಟು ಕಸ್ತೂರಿಯ ಬಟ್ಟು ಮುಂದಾಗಿ ಮೂಗಿನ ಮೇಲಳವಟ್ಟು ಮನೆಬಾಗಿಲ ಬಿಟ್ಟು ಕಂದರ್ಪನ ಶರದಿಂದ ನೊಂದು ಬಹು ಕಂದಿಕುಂದುತಲಿಂದುವದನೆಯರು ಇಂದಿರೇಶನಾನಂದದ ಗಾನಕೆ ಚಂದ್ರಮುಖಿಯರೊಂದಾಗುತ ಬರುತಿರೆ ||೧|| ಮುರಳಿಯ ಸ್ವರಕೆ ಮೋಹಿತರಾಗೆ ಕರುಗಳನು ತಂದು ಕರದಿಂದಲೆತ್ತಿ ತೊಟ್ಟಿಲೊಳಗೆ ಇರಿಸುತ್ತ ಹಾಲ ಬೆರೆಸುತ್ತ ಮಜ್ಜಿಗೆ ಮೊಸರಿನೊಳಗೆ ಪರಮಾತ್ಮನ ನೆನೆದು ಹೊರಟರು ಬಿಸಿಲು ಚಳಿ ಮಳೆಯೊಳಗೆ ಮನೆಮನೆಯೊಳಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಚಿಂತೆಯನು ಮಾಡದಿರು ಚದುರೆ

(ಮೋಹನರಾಗ ಝಂಪೆತಾಳ) ಚಿಂತೆಯನು ಮಾಡದಿರು ಚದುರೆ ನಿನಗೆ ನಾನು ಕಂತುಪಿತನನು ತೋರುವೆ ||ಪ|| ಸಂತೋಷದಿಂದ ಸರ್ವಾಭರಣವಿಟ್ಟುಕೊಂಡು ನಿಂತು ಬಾಗಿಲೊಳು ನೋಡೆ ಪಾಡೆ ||ಅ.ಪ|| ಒಂದು ಕ್ಷಣ ಪಾದಾರವಿಂದ ತೊಳೆದು ಕುಡಿದು ಮಂದಹಾಸದಲಿ ನಲಿದು ಒಂದೆ ಮನದಲಿ ದಿವ್ಯಗಂಧವನು ತಂದ್ಹಚ್ಚಿ ನಂದದಿಂದವನ ಮೆಚ್ಚಿ ಅಂದವಾದ ಕುಸುಮಹಾರವನು ಸುಖನಿಧಿಗೆ ಕಂಧರದಿ ನೀಡಿ ನೋಡಿ ಸಂದೇಹ ಬಿಟ್ಟು ಬಿಗಿದಪ್ಪಿ ಮನವೊಂದಾಗಿ ಎಂದೆಂದಿಗಗಲದಿರೆನ್ನೆ ರನ್ನೆ ||೧|| ಆಸನವ ಕೊಟ್ಟು ಕಮಲಾಸನನ ಪಿತಗೆ ಸವಿ- ಯೂಟಗಳನುಣ್ಣಿಸಿ ಲೇಸಾಗಿ ತಾಂಬೂಲ ತಬಕದಲಿ ತಂದಿಟ್ಟು ವಾಸನೆಗಳನೆ ತೊಟ್ಟು ಸೂಸುವ ಸುಳಿಗುರುಳುಗಳ ತಿದ್ದುತಲಿ ನಕ್ಕು ಶ್ರೀಶನ್ನ ಮರೆಯ ಹೊಕ್ಕು ಆ ಸಮಯದಲಿ ನಿನಗೆ ದಾಸಿ ಎನ್ನಯ ಮನದಿ ವಾಸವಾಗು ಬಿಡದೆ ಎನ್ನೆ ರನ್ನೆ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗುಮ್ಮ ಬಂದನೆಲೊ ದುರ್ಜನ ಬೇಡ ಸುಮ್ಮನಿರೆಲೊ ರಂಗಯ್ಯ

(ಆಹರಿ ರಾಗ ತ್ರಿಪುಟ ತಾಳ) ಗುಮ್ಮ ಬಂದನೆಲೊ ದುರ್ಜನ ಬೇಡ ಸುಮ್ಮನಿರೆಲೊ ರಂಗಯ್ಯ ||ಧ್ರುವ|| ಉಟ್ಟ ಪುಲಿತೊವಲು ತೊಟ್ಟ ಮುತ್ತಿನ ಹಾರ ಇಟ್ಟ ಕಾಮಾಕ್ಷಿ ಕಪಾಲ ತ್ರಿಶೂಲ ಬಟ್ಟು ಹಣೆಮೆರಿಯ(ರೆಯೆ?) ಚರಣದಲಿ ಮೆಟಿದ ಹಾವುಗೆಯ ದಿಟ್ಟ ಮೂರುತಿ ನಿಮ್ಮ ಚರಣ ಸೇವೆಗೆ ನಿತ್ಯ ||೧|| ಕಡಗ ಕಂಕಣ ಬಾಹುಪುರಿ ಭುಜಕೀರ್ತಿಯು ಉರದಲಿ ಧರಿಸಿದ ರುಂಡಮಾಲಿಯು ತನ್ನ ಸಿರದ ಜಟಾಜೂಟೆಯು ತಾಂ ಧರಿಸಿದ ಉರಗನಾ- ಭರಣಗಳು ಪರಮಮೂರುತಿ ನಿಮ್ಮ ಚರಣಸೇವೆಗೆ ನಿತ್ಯ ||೨|| ಕಾಮನ್ನ ರೂಪಕ್ಕೆ ಜರಿವ ಚನ್ನಿಗನಾಗಿ ಕೋಮಲಾಂಗೇರು ಭಿಕ್ಷವ ನೀಡಲು ಪ್ರೇಮದಿಂದವರಿಗೆಲ್ಲ ಮುಕ್ತಿಯನೀವ ಸೋಮಶೇಖರನ ಚೆಲ್ವ ರಾಮನಾ ಭಾವ ಮೃದುವಾಕ್ಯವಿದು ಮುದ್ದು ||೩|| ಕೋಟಿ ಸೂರ್ಯರ ಕಾಂತಿ ನೀಟಾದ ತನುವಿನ ಪೂಸಿದ ಭಸ್ಮವು ನೊಸಲ ಮುಕ್ಕಣ್ಣಿನ ನೋಟದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೀರ್ತಿಸಿ ಜನರೆಲ್ಲ ಹರಿಯ ಗುಣ

(ರಾಗ ಸುರಟಿ, ಆದಿತಾಳ) ಕೀರ್ತಿಸಿ ಜನರೆಲ್ಲ ಹರಿಯ ಗುಣ ||ಪ|| ಕೀರ್ತಿಸಿ ಜನರು ಕೃತಾರ್ಥರಾಗಿರೊ ||ಅ.ಪ|| ಅವನು ವನದೊಳಗೆ ನಿತ್ಯದಿ ಬಾಹ ಜನರ ಬಡಿದು ಜೀವನ ಮಾಳ್ಪ ಕಿರಾತನು ಕೀರ್ತಿಸೆ ತಾ ಒಲಿದಾತನ ಕೋವಿದನೆನಿಸಿದ ||೧|| ಅವನ ಪಾದರಜ ಸೋಕಲು ಆ ವನಿತೆಯ ಜಡ ಭಾವನ ತೊಲಗಿಸಿ ಆ ವನಿತೆಯನು ಪಾವನ ಮಾಡಿದ ದೇವಾಧಿದೇವನ ||೨|| ಅಂದು ಶಬರಿ ತಾನು ಪ್ರೇಮದಿ ತಿಂದ ಫಲವ ಕೊಡಲು ಕುಂದು ನೋಡದೆ ಆನಂದದಿ ಗ್ರಹಿಸಿ ಕುಂದದ ಪದವಿಯನಂದು ಕೊಟ್ಟವನ ||೩|| ದುಷ್ಟರಾವಣ ತಾನು ಸುರರಿಗೆ ಕಷ್ಟಬಡಿಸುತಿರಲು ಪುಟ್ಟಿ ಭುವನದೊಳು ಕುಟ್ಟಿ ಖಳರ ಸುರ- ರಿಷ್ಟವ ಸಲಿಸಿದ ಸೃಷ್ಟಿಗೊಡೆಯನ ||೪|| ತನ್ನ ನಂಬಿದ ಜನರ ಮತ್ತೆ ತಾ- ನನ್ಯರಿಗೊಪ್ಪಿಸದೆ ಮುನ್ನಿನಘವ ಕಳೆದಿನ್ನು ಕಾಪಾಡುವ ಘನ್ನಮಹಿಮ ಶ್ರೀರಂಗವಿಠಲನ್ನ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂತುಪಿತನೆ ನಿನ್ನ ಎಂತು ವರ್ಣಿಪೆ

(ಕಾಂಬೋಧಿ ರಾಗ , ರೂಪಕ(ಆದಿ?)ತಾಳ) ಕಂತುಪಿತನೆ ನಿನ್ನ ಎಂತು ವರ್ಣಿಪೆ ಲಕ್ಷ್ಮೀ- ಕಾಂತ ಪಾಲಿಸೆನ್ನನು ನಿರಂತರದಲಿ ||ಪ|| ಕುಂತೀಪುತ್ರಗೆ ನೀನತ್ಯಂತ ಸಾರಧಿತ್ವವ ಮಾಡಿ ನಿಂತು ದುರ್ಯೋಧನನ ಶಿರವ ಅಂತಕನಿಗೊಪ್ಪಿಸಿದ ಧೀರ ||ಅ.ಪ|| ಸುಂದರವದನ ನಿನ್ನ ಕಂದ ಭಜಿಸಲು ಮುದ- ದಿಂದ ಕಂಬದೊಳ್ಬಂದೆ ಮಂದರೋದ್ಧರ ಸಿಂಧುಶಾಯಿ ರಕ್ಕಸನ ಕೊಂದು ಕರುಳಮಾಲೆಯನ್ನು ಚೆಂದದಿಂ ಕಂಧರದೊಳ್ಧರಿಸಿದಾನಂದಮೂರ್ತಿ ಇಂದಿರೇಶ ||೧|| ಜಂಭವೈರಿ ಮುಖ್ಯ ಸುರಕದಂಬ ಪೂಜಿತಾಂಘ್ರಿಯುಗಳ ನಂಬಿದ ಭಕ್ತರ ಕಾಯ್ವ ಅಂಬುಜನೇತ್ರ ಅಂಬರೀಷ ದ್ವಾದಶಿ ವ್ರತವ ಸಂಭ್ರಮದಿ ಮಾಡುತಿರೆ ಡೊಂಬಿಯಿಂ ದೂರ್ವಾಸ ಶಪಿಸೆ ಬೆಂಬಿಡದೆ ಚಕ್ರದಿ ಸಲಹಿದ ||೨|| ಗಂಗೆಯ ಜನಕ ನಿನ್ನ ಅಂಗನೆ ದ್ರೌಪದ ದೇವಿ ಭಂಗಬಿಡಿಸೆಂದು ಕೂಗೆ ಮಂಗಳಾಂಗನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಹುದೋ ಹನುಮಂತ ನೀನಹುದೊ ಬಲವಂತ

ಅಹುದೋ ಹನುಮಂತ ನೀನಹುದೊ ಬಲವಂತ ನೀನಹುದೋ ಮುಖ್ಯಪ್ರಾಣ ಮೂಲಗುರು ಅಹುದೊ ||ಪ|| ಅಹುದೊ ಧರಣಿಯ ಮ್ಯಾಲೆ ದಿವಾಕರನ ಪ್ರಭೆಯಂತೆ ಅಹುದೊ ಮಧ್ವಮತಕೆ ಬಿರುದು ನೀ ಅಹುದೊ ||ಅ.ಪ|| ಅಂಜನೆಯ ಗರ್ಭದಲಿ ಉದ್ಭವಿಸಿದ್ಯೊ ನೀನು ಸಂಜೀವನವ ತಂದ್ಯೊ ಸಕಲ ಕಪಿಗಳಿಗೆ ಮಂಜುಭಾಷಣ ನೀನು ಶರಧಿಯನು ದಾಟಿದೆಯೊ ಕಂಜಾಕ್ಷಿ ಸೀತೆಗೆ ಉಂಗುರವನಿತ್ತೆ ||೧|| ಕುಂತಿಯ ಗರ್ಭದಲಿ ಉದ್ಭವಿಸಿದ್ಯೊ ನೀನು ಪಂಥವನಾಡಿ ದಾಯಾದಿಯರೊಡನೆ ಕಂತುಪಿತನ ಕೂಡಿ ಕೌರವರನ ಗೆಲಿದ್ಯೊ ಸಂತೋಷದಿಂದ ಸಾಮ್ರಾಜ್ಯ ಕೈಗೊಂಡೆ ||೨|| ಮಧ್ವಾವತಾರದಲಿ ಮುನಿವೇಷವನು ತಾಳಿ ಅದ್ವೈತವೆಂಬೊ ಅರಣ್ಯವನು ತರಿದೆ ಮಧ್ವಶಾಸ್ತ್ರವೆಂಬೊ ಮತವ ನಿರ್ಣೈಸಿದೆ ಮುದ್ದು ಹಯವದನದಾಸ ನೀನಹುದೊ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಲಿದೆ ಯಾತಕಮ್ಮಾ ಲಕ್ಷುಮೀ

(ಶಂಕರಾಭರಣ ರಾಗ, ಆದಿತಾಳ)

 

ಒಲಿದೆ ಯಾತಕಮ್ಮಾ ಲಕ್ಷುಮೀ ವಾಸುದೇವಗೆ ||ಪ||

ಶುದ್ಧ ನೀಲವರ್ಣದ ಮೈಯ ಕಪ್ಪಿನವನಿಗೆ ಹ್ಯಾಗೆ ||ಅ.ಪ||

 

ಹುಟ್ಟಿದ ಮನೆಗಳ ಬಿಟ್ಟು - ಕಳ್ಳ

ದಿಟ್ಟತನದಿ ಗೋಕುಲದಲ್ಲಿ ಬೆಳೆದ

ಚಟ್ಟಿ ಸಹಿತ ಹಾಲು ಕುಡಿದ-ಅಲ್ಲಿ

ದಿಟ್ಟ ಕಾಳಿಂಗನ ಹೆಡೆಯ ತುಳಿದವನಿಗೆ ||೧||

 

ಗೊಲ್ಲರ ಮನೆಗಳ ಪೊಕ್ಕು - ಅಲ್ಲಿ

ಗುಲ್ಲು ಮಾಡದೆ ಮೊಸರೆಲ್ಲ ಸವಿದ

ಮೆಲ್ಲನೆ ಸವಿಮಾತನಾಡಿ - ಅಲ್ಲಿ

ಎಲ್ಲ ಸಖಿಯರ ಅಭಿಮಾನಗೇಡಿಗೆ ||೨||

 

ಮಾವನ ಮರ್ದಿಸಿದವಗೆ-ಅಲ್ಲಿ

ಸೋಳ ಸಾಸಿರ ಗೋವೇರಿಗೆ ಮದುವೆ ಆದವಗೆ

ಹಾವಿನ ಮ್ಯಾಲೊರಗಿದವಗೆ

ಕಾವೇರಿ ತೀರದ ರಂಗವಿಠಲಗೆ ||೩||

ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಕೆ ದೂರುವಿರೇ ರಂಗಯ್ಯನ

(ಕಲ್ಯಾಣಿ ರಾಗ ಅಟ್ಟತಾಳ/ ತ್ರಿಪುಟ ತಾಳ) ಏಕೆ ದೂರುವಿರೇ ರಂಗಯ್ಯನ ಏಕೆ ದೂರುವಿರೇ ||ಪ|| ಸಾಕು ನಿಮ್ಮ ದೂರ ಬಲ್ಲೆನು ಈ ಕುವರನಾ ಕೃತ್ಯ ಮಾಳ್ಪನೆ ||ಅ.ಪ|| ದಟ್ಟಡಿಯಿಡಲರಿಯ ಗೋವತ್ಸವ ಬಿಟ್ಟು ಚಲಿಸಬಲ್ಲನೆ ಘಟ್ಟಿಯಾಗಿ ಗೊತ್ತಿನಲ್ಲಿ ಕಟ್ಟಿನೊಳು ಕಟ್ಟಿದ್ದ ಕರುಗಳ ಬಿಟ್ಟನೇ ಈಕೃಷ್ಣನ ಮೇ- ಲೆಷ್ಟು ಹೊಟ್ಟೆಕಿಚ್ಚೆ ನಿಮಗೆ ||೧|| ಕೆನೆಹಾಲು ಬೆಣ್ಣೆಯನು ಇತ್ತರೆ ಆ ದಿನವೊಲ್ಲನು ಊಟವ ಮನೆಮನೆಗಳನು ಪೊಕ್ಕು ಬೆಣ್ಣೆ ಪಾಲ್ಮೊಸರನ್ನು ತಿನ್ನುತ ವನಿತೆಯರ ಕೂಡಾಡಿದನೆಂ- ದೆನಲು ನಿಮಗೆ ನಾಚಿಕಿಲ್ಲವೆ ||೨|| ಪಾಲು ಮೊಸರು ಬೆಣ್ಣೆಯು ಇಲ್ಲವೆ ನ- ಮ್ಮಾಲಯದೊಳು ನೋಡಿರೆ ಹೇಳುವರೆ ಈ‌ ಠೌಳಿಗಳ ಗೋ- ಪಾಲಬಾಲನ ನೋಡಿ ಸೈಸದೆ ಬಾಳುವಿರ ಭವ ಜಲಧಿಯಿಂದಲಿ ತೇಲಿಸುವನೆ ರಂಗವಿಠಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಭ್ರಮೆ ಮನುಜರಿಗೆ ಎಷ್ಟು ಮಮತೆ ಪ್ರಕೃತಿಯಲಿ

(ಹಿಂದೋಳ ರಾಗ ರೂಪಕತಾಳ)

ಏನು ಭ್ರಮೆ ಮನುಜರಿಗೆ ಎಷ್ಟು ಮಮತೆ ಪ್ರಕೃತಿಯಲಿ

ಮೀನು ಗಾಳವ ನುಂಗಿ ಮೋಸಹೋದ ತೆರನಂತೆ ||ಧ್ರುವ||

 

ನನ್ನ ಮನೆ ನನ್ನ ಸತಿ ನನ್ನ ಸುತರೆಂದೆನಿಸಿ

ಹೊನ್ನುಗಳ ಗಳಿಸಿ ಹೆಚ್ಚು ಹೋರ್ಯಾಡಿ

ಸಣ್ಣವರ ಮದುವೆ ಸಂಭ್ರಮದಿ ಮಾಡುವೆನೆಂದು

ಅನ್ನ ಮೊದಲು ಕಾಣದೆ ಅಂತರಪಿಶಾಚಿಯಂತೆ ||೧||

 

ಬಲುವೋದಿಕೆಯಲ್ಲಿ ಬಲ್ಲವರೆನಿಸಬೇಕೆನುತ

ಹಲವು ಬುದ್ಧಿಯಲಿ ಹಿರ್ರನೆ ಹಿಗ್ಗುತ

ಮಲಿನ ಮನಸಿನಜ್ಞಾನದಲಿ ತಾನರಿಯದೆ

ಬಲೆಯಲ್ಲಿ ಸಿಲುಕಿದ ಪಕ್ಷಿಯಂತೆ ಬಳಲುತಿಹ ||೨||

 

ಮಿಗಿಲು ಆಸೆಗೆ ಬಿದ್ದು ಬಗೆ ಬಗೆ ಹೂಣಿಕೆಯಲಿ

ಹೊಗದಲ್ಲಿ ಹೊಗುವರು ಹೊಲಬಿಟ್ಟು ತಿಳಿಯರು

ದಾಸ ಸಾಹಿತ್ಯ ಪ್ರಕಾರ
ಬರೆದವರು