ಪಾಂಡುರಂಗ

ನೆರೆ ನಂಬಿದೆ ಮದ್‍ಹೃದಯಮಂಟಪದೊಳು

ನೆರೆ ನಂಬಿದೆ ಮದ್‍ಹೃದಯಮಂಟಪದೊಳು | ಪರಿಶೋಭಿಸುತಿರು ಪಾಂಡುರಂಗ |ಪ| ಶರಣಜನರ ಸಂಸಾರಮಹಾಭಯ | ಹರಣ ಕರುಣ ಸಿರಿ ಪಾಂಡುರಂಗ | ಅ ಪ | ನೆರೆದಿಹ ಬಹು ಜನರೊಳಿದ್ದರು ಮನ | ಸ್ಥಿರವಿಡು ನಿನ್ನಲಿ ಪಾಂಡುರಂಗ | ಪರಿಪರಿ ಕೆಲಸವು ನಿನ್ನ ಮಹಾಪೂಜೆ | ನಿರುತ ಎನಗೆ ಕೊಡು ಪಾಂಡುರಂಗ | ೧ |
ದಾಸ ಸಾಹಿತ್ಯ ಪ್ರಕಾರ
ಬರೆದವರು