ಆರು ಬದುಕಿದರಯ್ಯ

ಆರು ಬದುಕಿದರಯ್ಯ

ರಾಗ : ಮುಖಾರಿ ತಾಳ : ತ್ರಿಪುಟ ಆರು ಬದುಕಿದರಯ್ಯ ಹರಿ ನಿನ್ನ ನಂಬಿ || ಪಲ್ಲವಿ || ತೋರು ಈ ಧರೆಯೊಳಗೆ ಒಬ್ಬರನು ಕಾಣೆ ಕೃಷ್ಣ || ಅನುಪಲ್ಲವಿ || ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆ ಸುಲಭದಲಿ ಕೌರವರ ಮನೆಯ ಮುರಿದೆ ನೆಲವ ಬೇಡಲು ಹೋಗಿ ಬಲಿಯ ಭೂಮಿಗೆ ತುಳಿದೆ ಮೊಲೆಯನುಣ್ಣಲು ಪೋಗಿ ಪೂತನಿಯ ಕೊಂದೆ || ೧ || ಕರುಳೊಳಗೆ ಕತ್ತರಿಯನಿಟ್ಟು ಹಂಸಧ್ವಜನ ಸರಸದಿಂ ಮಗಳ ಗಂಡನ ಕೊಲಿಸಿದೆ ಮರುಳಿನಿಂದಲಿ ಪೋಗಿ ಭೃಗುಮುನಿಯ ಕಣ್ಣೊಡೆದೆ ಅರಿತು ನರಕಾಸುರನ ಹೆಂಡತಿಯ ತಂದೆ || ೨ || ತಿರಿದುಂಬ ದಾಸರಕೈಯ ಕಪ್ಪವ ಕಟ್ಟಿಸಿಕೊಂಡೆ ತಿರುಮಲಾಚಾರ್ಯ ಶ್ರೀ ಗುರುವೇ ಬಲ್ಲ ವರ ಕಾಗಿನೆಲೆಯಾದಿ ಕೇಶವನ ಭಜಿಸಿದರೆ ತಿರಿವೆನೆಂದರೆ ತಿರುಪೆಕೊಳ್ಪುಟ್ಟದೈ ಕೃಷ್ಣ || ೩ ||