ಹೋಗಬೇಡ ನಿಗಮಾನುತ ಮಧುರೆಗೆ

ಹೋಗಬೇಡ ನಿಗಮಾನುತ ಮಧುರೆಗೆ

(ರಾಗ ದ್ವಿಜಾವಂತಿ ಆದಿತಾಳ) ಹೋಗಬೇಡ ನಿಗಮಾನುತ ಮಧುರೆಗೆ ಹೋಗಬೇಡ ಹರಿಯೇ ||ಪ|| ಪೋಗುವೆ ನೀ ಪುನರಾಗಮವೆಂದಿಗೆ ಹೇಗೆ ತಾಳುವೆವೊ ನಾಗಮರ್ದನ ಕೃಷ್ಣ ||ಅ|| ಬಾಲತನದಲಿ ಬಲು ಲೀಲೆಗಳಿಂದ ಗೋಪಾಲರೊಡಗೂಡಿ ಬಾಳ ಪ್ರೇಮದಿ ನಮ್ಮಾಲಯದೊಳಪೊಕ್ಕು ಪಾಲು ಬೆಣ್ಣೆಯ ಬೇಡಿ ಶೀಲಮಾರುತಿ ನಿನ್ನೊಲುಮೆಗೆ ಸಿಲುಕಿದ ಬಾಲೆಯರಾ ಸ್ಮರನಂಬಿಗೆ ಮಾಡಿ || ಹುಟ್ಟಿದ್ದು ಮಧುರೆ , ತಂದಿಟ್ಟದ್ದು ಗೋಕುಲಕೆ , ಪಟ್ಟದರಸು ಎನಿಸಿ ಬೆಟ್ಟಿಲಿ ಬೆಟ್ಟವನೆತ್ತಿ ಪೊರೆದೆ , ಬಂದ ಕಷ್ಟವ ಪರಿಹರಿಸಿ ಕೃಷ್ಣಮೂರುತಿ ಪರಮೇಷ್ಟಿಗಳರಸೆ ನ- ಮ್ಮಿಷ್ಟದೇವನೆ ಈಗ ಬಿಟ್ಟು ಪೋಗದಿರೊ || ಮಾರಮಣನೆ ಕರುಣಾಕರನೆಂಬುದು ತೋರಲಿಲ್ಲವೊ ನಮಗೆ ಸೇರಿದವರ ಮೊರೆ ಲಾಲಿಸದಿರ್ದಡೆ ಯಾರೆಲೊ ಗತಿ ನಮಗೆ ಮಾರಜನಕ ಗುರುಪುರಂದರವಿಟ್ಠಲ ಗಾರು ಮಾಡದೆ ನಮ್ಮ ಸೇರಿ ಸುಖಿಸುತಿರು ||
ದಾಸ ಸಾಹಿತ್ಯ ಪ್ರಕಾರ
ಬರೆದವರು