ಹೊರಗ್ಹೋಗಿ ಆಡದಿರ್ ‍ಹರಿಯೆ

ಹೊರಗ್ಹೋಗಿ ಆಡದಿರ್ ‍ಹರಿಯೆ

( ರಾಗ ಆನಂದಭೈರವಿ ಛಾಪು ತಾಳ) ಹೊರಗ್ಹೋಗಿ ಆಡದಿರ್ ‍ಹರಿಯೆ ಎನ್ನ ದೊರೆಯೆ, ನೆರೆ- ಹೊರೆಯವರು ಕಂಡರೆ ದೂರುವುದರಿಯೆ ||ಪ|| ಮನೆಯೊಳಗಾಡೋದೆ ಚಂದ, ನೆರೆ ಮನೆಗಳಿಗೆಲ್ಲ ಪೋಗುವರೆ ಮುಕುಂದ ಮಾನಿನಿಯರು ಮೋಹದಿಂದ ನಿನ್ನ ಮನವನಪಹರಿಸಿಕೊಂಬುವರೊ ಗೋವಿಂದ || ಏನೇನು ಬೇಕಾದ್ದು ಕೊಡುವೆ, ಕೆನೆ ಬೆಣ್ಣೆ ಸಕ್ಕರೆ ತಂದು ಕೈಯಲ್ಲಿ ಕೊಡುವೆ ಅನುದಿನ ಗುಣಗಳ ಪಾಡುವೆ ,ನಿನ- ಗನುವಾಗಿ ಅಲಂಕಾರ ಮಾಡಿ ನಾ ನೋಡುವೆ || ಹೊಲಸು ಮೈಯವನೆಂಬುವರೊ, ದೊಡ್ಡ ಕುಲಗಿರಿಯನ್ನು ಎತ್ತಿದವನೆಂಬುವರೊ ಬಲುಕೇಶದನೆಂಬುವರೊ, ಕರುಳ ಮಾಲೆಯ ಹಾಕಿದ ಘೋರನೆಂಬುವರೊ || ಭಿಕ್ಷೆ ಬೇಡಿದವನೆಂಬುವರೊ, ಭುವಿ ರಕ್ಷಿಪ ರಾಯರ ಕಡಿದನೆಂಬುವರೊ ಲಕ್ಷ್ಮಿಯ ಕಳೆದನೆಂಬುವರೊ ವೈ- ಲಕ್ಷಣ್ಯದವ ಬೆಣ್ಣೆಕಳ್ಳನೆಂಬುವರೊ || ಮಾನ ಬಿಟ್ಟವನೆಂಬುವರೊ, ಮಹಾ ಹೀನರ ಹಿಂದಟ್ಟಿ ಹೋದನೆಂಬುವರೊ ದಾನವವೈರಿಯೆಂಬುವರೊ, ಸಿರಿ ವನಜಾಕ್ಷ ಪುರಂದರವಿಠಲನೆಂಬುವರೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು