ಹೇವವೆಲ್ಲಿಹುದಯ್ಯ ವೈಕುಂಠಪತಿಗೆ

ಹೇವವೆಲ್ಲಿಹುದಯ್ಯ ವೈಕುಂಠಪತಿಗೆ

( ರಾಗ ಶಂಕರಾಭರಣ ಅಟತಾಳ) ಹೇವವೆಲ್ಲಿದುಹಯ್ಯ ವೈಕುಂಠಪತಿಗೆ ||ಪ || ಮೌನದಿಂ ಭಾರ್ಗವನು ಮಾತೆಯ ಶಿರ ತರಿದ || ಅ. ಪ|| ಒಬ್ಬ ಮಾವನ ಕೊಂದ , ಒಬ್ಬ ಮಾವನ ಎಸೆದ ಒಬ್ಬ ಮಾವನ ಕೂಡೆ ಕಡಿದಾಡಿದ ಒಬ್ಬ ಭಾವನ ಹಿಡಿದು ಹೆಡೆಮುಡಿಯ ಕಟ್ಟಿದ ಒಬ್ಬ ಮೈದುನಗೆ ಬಂಡಿಬೋವನಾದ || ಕುಂಭಿನಿಗೆ ಪತಿಯಾದ , ಕುಂಭಿನಿಗೆ ಸುತನಾದ ಕುಂಭಿನೀಮಗನ ಸಂಹಾರ ಮಾಡ್ದ ಅಂಬುಧಿಗೆ ಪಿತನಾದ , ಅಂಬುಧಿಗೆ ಸುತನಾದ ಅಂಬುಧಿಜಾತೆಗೆ ಸ್ವಾಮಿಯಾದ || ಬೊಮ್ಮ(?)ನಾ ಸಂಹರಿಸಿ ಅವರ ಮಕ್ಕಳನು ಈ ಮಹಿಯೊಳಗೆ ಅವರ ಹತಮಾಡಿದ ( / ಮೊಮ್ಮನನು ಮಲಗಿಸಿದ ಅವರ ಹೆಮ್ಮಕ್ಕಳನು ಯಿಮ್ಮೈಯವರಿತು ಸಂಹಾರ ಮಾಡಿದ) ರಮ್ಯ ಮೂರುತಿ ಪುರಂದರವಿಠಲ ದೇವೇಶ ಬೊಮ್ಮಮೂರುತಿಗೇಕೆ ಬಂಧುಬಳಗ ? ||
ದಾಸ ಸಾಹಿತ್ಯ ಪ್ರಕಾರ
ಬರೆದವರು