ಹಿಂದಿಲ್ಲ ಇಂದು ಮುಂದಿಲ್ಲ

ಹಿಂದಿಲ್ಲ ಇಂದು ಮುಂದಿಲ್ಲ

-- ರಾಗ ಪಂತುವರಾಳಿ (ಬಸಂತ) ಅಟತಾಳ (ಝಪ್) ಹಿಂದಿಲ್ಲ ಇಂದು ಮುಂದಿಲ್ಲ ಶ್ರೀ ಮು- ಕುಂದಗೆ ಸಮರೆನಿಸುವರು ಲೋಕದೊಳಗೆ ||ಪ|| ವನಧಿ(?) ಮಥನದಲ್ಲಿ ಅನಿಮಿಷರನ್ನ್ನು ಬಿಟ್ಟು ಜನನಿ ಲಕುಮಿ ನಾರಾಯಣನೊಲಿಸಿದಳಾಗಿ ||೧|| ಪ್ರಪಿತಾಮಹನು ಲೋಕಾಧಿಪ ಚತುರ್ಮುಖನಿಗೆ ತಪತಪವೆಂದ್ಹೇಳ್ದನುಪಮರೆನಿಸುವರು ||೨|| ಕಂಧರ ವರವೀಯೆ ಹಿಂದಟ್ಟಿದಸುರನ ಕೊಂದು ಶಿವನ ಕಾಯ್ದ ಇಂದಿರಾಪತಿಗೆಣೆ ||೩|| ಮಂದರಾದ್ರಿಯನೆತ್ತಿ ಸಿಂಧುಮಥನ ಮಾಡಿ ವೃಂದಾರಕರಿಗೆ ಆನಂದವಿತ್ತಗೆ ಸರಿ ||೪|| ಭೃಗುಮುನಿಪನು ಬ್ರಹ್ಮಾದಿಗಳ ಪರೀಕ್ಷಿಸಿ ಜಗನ್ನಾಥವಿಠಲಗೆ ತ್ರಿಗುಣವರ್ಜಿತನೆಂದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು