ಹರಿಯೆಂದು ಮನದಲ್ಲಿ ಮರೆದೊಮ್ಮೆ ನೆನೆದರೆ

ಹರಿಯೆಂದು ಮನದಲ್ಲಿ ಮರೆದೊಮ್ಮೆ ನೆನೆದರೆ

( ರಾಗ ಬಿಲಹರಿ ತ್ರಿಪುಟ ತಾಳ) ಹರಿಯೆಂದು ಮನದಲ್ಲಿ ಮರೆದೊಮ್ಮೆ ನೆನೆದರೆ ದುರಿತ ಪರ್ವತಗಳ ಖಂಡಿಪುದು ವಜ್ರದಂತೆ ||ಪ|| ಮೇರುಸುವರ್ಣ ದಾನವ ಮಾಡಲು ನಿತ್ಯ ನೂರು ಕನ್ಯಾದಾನವ ಮಾಡಲು ಧಾರಿಣಿಯೆಲ್ಲವ ಧಾರೆಯನೆರೆಯಲು ನಾರಾಯಣ ಸ್ಮರಣೆಗೆ ಸರಿಯಹುದೆ || ಹತ್ತುಲಕ್ಷ ಗೋದಾನ ಮಾಡಲು ಪುಣ್ಯ- ವ್ರತಗಳ ಅನುದಿನ ಆಚರಿಸಲು ಶತಕೋಟಿ ಯಜ್ಞವ ಮಾಡಲು ಲಕ್ಷ್ಮೀ- ಪತಿ ನಾಮಸ್ಮರಣೆಗೆ ಸರಿಯೆನ್ನಬಹುದೆ || ಗಂಗೆ ಕಾಳಿಂದಿ ಗೋದಾವರಿ ಕಾವೇರಿ ತುಂಗಭದ್ರೆಯಲಿ ಸ್ನಾನವ ಮಾಡಲು ಮಂಗಳ ಮೂರುತಿ ಪುರಂದರವಿಟ್ಠಲ ರಂಗನ ಸ್ಮರಣೆಗೆ ಸರಿಯೆನ್ನಬಹುದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು