ಹರಿನಾಮ ಕೀರ್ತನೆ ಅನುದಿನ

ಹರಿನಾಮ ಕೀರ್ತನೆ ಅನುದಿನ

(ರಾಗ ಧನಶ್ರೀ. ಆದಿತಾಳ ) ಹರಿನಾಮ ಕೀರ್ತನೆ ಅನುದಿನ ಮಾಳ್ಪಗೆ ನರಕ ಭಯಗಳುಂಟೆ ||ಪ|| ಹರಿನಾಮವೊಂದೆ ಯಮನಾಳ್ಗಳನೊದೆದು ಅಜಮಿಳನಿಗೆ ಸುಕ್ಷೇಮವಿತ್ತ ಹರಿ ||ಅ|| ಕೇಸರಿಗಂಜದ ಮೃಗವುಂಟೆ ದಿನೇಶನಿಗಂಜದ ತಮವುಂಟೆ ವಾಸುದೇವ ವೈಕುಂಠ ಜಗನ್ಮಯ ಕೇಶವ ಕೃಷ್ಣಾ ಎಂದುಚ್ಚರಿಸುತ || ಕುಲಿಶಕ್ಕೆದುರಹ ಗಿರಿಯುಂಟೆ ಬಲು ಪ್ರಳಯ ಬಂದಾಗ ಜೀವಿಪರುಂಟೆ ಜಲಜನಾಭ ಗೋವಿಂದ ಜನಾರ್ದನ ಕಲುಷಹರಣ ಕರಿರಾಜ ವರದನೆಂದು || ಗರುಡನಿಗಂಜದ ಫಣಿಯುಂಟೆ ದಳ್ಳುರಿಯಲಿ ಬೇಯದ ತೃಣವುಂಟೆ ನರಹರಿ ನಾರಾಯಣ ದಾಮೋದರ ಪುರಂದರವಿಠಲನೆಂದುಚ್ಚರಿಸುತ ||
ದಾಸ ಸಾಹಿತ್ಯ ಪ್ರಕಾರ
ಬರೆದವರು