ಹಣ್ಣು ಕೊಂಡನು ಬಾಲಕೃಷ್ಣನು

ಹಣ್ಣು ಕೊಂಡನು ಬಾಲಕೃಷ್ಣನು

( ರಾಗ ಬೇಗಡೆ. ಆದಿ ತಾಳ) ಹಣ್ಣು ಕೊಂಡನು ಬಾಲಕೃಷ್ಣನು ||ಪ|| ಹಣ್ಣು ಬೇಕು ಎಂದು ಸಣ್ಣ ಕೃಷ್ಣನು ಬಂದು ಕಣ್ಣೀರ ತಂದು ಬೆಣ್ಣೆ ಕಳ್ಳ ನಿಂತ ||ಅ|| ದುಡುಕು ಮಾಡಿದ ಪಿಡಿ ನೆಲ್ಲನೆ ಕೊಂಡ ಕಡುವೇಗದಿಂದ ಮಡದಿ ಬಳಿಗೆ ಬಂದ ಸಡಗರದಿಂದ ಪಿಡಿ ನೆಲ್ಲನ ಕೊಟ್ಟ || ಇಟ್ಟಳೆ ಹಣ್ಣ ಕೃಷ್ಣನ ಕೈಯಲಿ ಇಟ್ಟಳೆ ಮತ್ತೊಂದು ಕೊಟ್ಟಳೆ ಮುದ್ದೊಂದು ಪಟ್ಟಳೆ ಭಯ ಬಂದು ಕಂ- ಗಟ್ಟಳೆ ಮನನೊಂದು || ದಾತ ನೋಡಿದ ನಾರಿಮಣಿಯ ಮನವ ಆತ ತೋರಿದ ಎಂಥಾ ಮಾಯ ಮಾಡಿದ ನಾಥ ಕೊಟ್ಟ ನೆಲ್ಲು ಮಣಿಗಳಾಯಿತಲ್ಲೊ || ತಿರುಗಿ ಪೋದನು ಮುದ್ದು ಕೃಷ್ಣನು ತಿರುಗಿ ತಿರುಗಿ ನೋಡಿ ಮರುಳಿಗೆ ಆಳಾಗಿ ತಿರುಗಿ ಬಂದಳವಳು ಹಣ್ಣು ಕೂಗಿದಳು || ನಿನ್ನ ಹೊರತು ಅನ್ಯರನು ಕಾಣೆ ಸಣ್ಣ ಕೃಷ್ಣ ಬಂದು ಎನ್ನ ಸಲಹೋ ಇಂದೆ ಘನ್ನ ಮಹಿಮ ತಂದೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು