ಸೋಮಕುಲವಾರಿನಿಧಿ

ಸೋಮಕುಲವಾರಿನಿಧಿ

( ರಾಗ ಮುಖಾರಿ/ಸಾವೇರಿ. ಝಂಪೆ ತಾಳ) ಸೋಮಕುಲವಾರಿನಿಧಿ ಸೋಮನುದ್ದಾಮ ರಣಧೀರ ಜಯ ಜಯ ಭೀಮಸೇನ ಭಾಪುರೆ ||ಪ|| ಮರೆಸಿ ಕೌರವರಿತ್ತ ವಿಷವುಂಡು ತೇಗಿ ನೀ ಉರಗಗಳ ಮೇಲೆ ಬಿಡಲವನೊರಗಿದೆ ಸುರನದಿಯೊಳಗೆ ನೂಕೆ ಭರದಲೆದ್ದು ಖಳನ ಮುರಿದು ಮುಟ್ಟಿಯ ಮಾಡಿದೆಲ , ಭಾಪುರೆ || ನರನು ಮಗಧೇಶನ ಕರೆಯೆ ನಿನ್ನನು ರಣಕೆ ವರಸೆ ಹರಿಗಿದಿರಲಾ ಖಳನ ಮುರಿದೆ ಧರೆಯೊಳತಿಬಲರೆನಿಪ ಕ್ರೂರ ಕೀಚಕನನುಜರ ಪರಿಪರಿಯ ಭಂಗಪಡಿಸಿದೆಲ, ಭಾಪುರೆ || ನರನಮಿತ ಗುರುರಥವ ತಿರುಹಿ ನಭಕೀಡಾಡಿ ಕುರುಭೂಪಾನುಜರ ರಕ್ತ ಸುರುಹಿದೆ ಹರಯಶಕ್ಕಿದಿರಾದ ಗಿರೀಶನವತಾರನಾದ ಗುರುಸುತನ ಭಂಗಪಡಿಸಿದೆಲ , ಭಾಪುರೆ || ದುರುಳ ದುಶ್ಯಾಸನನ ಧರೆಯ ಮೇಲಡಗೆಡಹಿ ಎರಡು ಬಲದತಿರಥರ ಜರದರಳಲಿಸಿ ನರಹರಿಯ ಲೀಲೆಯಿಂದವನುರವ ಬಗಿದು ಕೆಂ- ಗರುಳ ನಿಜಸತಿಗೆ ಮುಡಿಸಿದೆಲ ಭಾಪುರೆ || ಕುರುಪತಿ ಯಮಜ ಪಾರ್ಥ ನಕುಲ ಸಹದೇವರನು ಜರೆದು ( /ವರಿಸೆ) ನಿನ್ನಯ ಸಂಗರಕೆ ವರಿಸಲು ಧರೆಯ ಭಾರಹಾರಿ ಗುರು ಪುರಂದರವಿಠಲಗಿದಿರ- ಲಿರವಣಿಸೆ ಖಳನ ನೀ ಮುರಿದೆಲ ಭಾಪುರೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು