ಶ್ರೀನಿವಾಸನು ಒಲಿಯನು ಕೇಳೋ

ಶ್ರೀನಿವಾಸನು ಒಲಿಯನು ಕೇಳೋ

ಶ್ರೀನಿವಾಸನು ಒಲಿಯನು ಕೇಳೋ ಜ್ಞಾನೋಪಾರ್ಜನೆ ಮಾಡದಲೆ ||ಪಲ್ಲವಿ|| ಏನೇನೋ ಸತ್ಕರ್ಮವ ಮಾಡಲು ಪ್ರಾಣೇಶಾರ್ಪಣವೆನ್ನದಲೆ ||ಅನುಪಲ್ಲವಿ|| ಸ್ನಾನವು ಸಂಧ್ಯಾವಂದನ ಜಪತಪ ಜ್ಞಾನ ಸಾಧನವಿದೆನ್ನದಲೆ ಧಾನಧರ್ಮಗಳು ಈಶನ ಅನು ಸಂಧಾನವಮಾಡಿ ಮಾಡದಲೆ ||1 || ಕಾಮ ಕ್ರೋಧ ಲೋಭ ದುರಾತ್ಮಕ ಆ ಮಹಾ ರಿಪುಗಳ ಜಯಿಸದಲೆ ಪ್ರೇಮಾದಿ ಶ್ರೀಹರಿ ಭಕುತರ ಚರಣದಿ ನೇಮದಿ ನಿತ್ಯ ನಮಿಸದಲೆ || 2|| ಬಾಲಕ ಸತಿ ಮೊದಲಾದ ಜನರು ಶ್ರೀ ಲೋಲನ ಸೇವಕರೆನ್ನದಲೆ ಕಾಲ ದೇಶ ಅಸು ಮೊದಲಾದುವು ಗೋಪಾಲಗೆ ಆಧೀನವೆನ್ನದಲೆ ||3|| ಸಾಧು ಸಂಗದಲಿ ತೀರ್ಥಯಾತ್ರೆಗಳ ಪಾದದಿ ನಡೆದು ನೀ ಮಾಡದಲೆ ಬೇಡಪಂಚಕವು ಜಗದಿ ಅಭೇದವ ಮಾಧವನಲಿ ನೀ ತಿಳಿಯದಲೆ ||4|| ಒಂದು ಕ್ಷಣವು ಬಿಡದಿಂದಿರೇಶ ಗೋವಿಂದನಂಘ್ರಿಯ ನೆನೆಯದಲೆ ವಂದ್ಯನು ಶ್ರೀ ಪುರಂದರ ವಿಟ್ಠಲ ಬಂಧವಿಮೋಚಕನೆನ್ನದಲೆ || 5 ||
ದಾಸ ಸಾಹಿತ್ಯ ಪ್ರಕಾರ
ಬರೆದವರು