ವೇಂಕಟೇಶ ನಿನ್ನ ನಂಬಿದೆ, ಎನ್ನ ಸಂಕಟವನು ಪರಿಹರಿಸಯ್ಯ

ವೇಂಕಟೇಶ ನಿನ್ನ ನಂಬಿದೆ, ಎನ್ನ ಸಂಕಟವನು ಪರಿಹರಿಸಯ್ಯ

( ಯಮುನಾಕಲ್ಯಾಣಿ ರಾಗ ಅಷ್ಟತಾಳ) ವೇಂಕಟೇಶ ನಿನ್ನ ನಂಬಿದೆ, ಎನ್ನ ಸಂಕಟವನು ಪರಿಹರಿಸಯ್ಯ ನೀನು ||ಪ|| ಒಡಲೆಂಬ ಕಡಲೆಡೆಗೊಂಡಿಹ ಹಡಗು ಕಡೆಯ ಕಾಣ ಬಹು ಜಡದಿಂದ ಗುಡುಗು ಜಡಿಯುತ್ತ ಬರುತಿಹ ಮಳೆ ಮುಂದೆ ತೊಡಗು ದಡವ ಸೇರಿಸೋ ಎನ್ನ ಒಡೆಯ ನೀ ಕಡೆಗು ||೧|| ಅಣುರೇಣು ತೃಣಕಾಷ್ಠದೊಳಗಿದ್ದು ನೀನು ಕ್ಷಣಕ್ಷಣ ಆರೈವ ಗುಣ ನಿನ್ನದೇನು ಪ್ರಣವರೂಪನೇ ನಿನ್ನ ಚರಣಕ್ಕೆ ನಾನು ಮಣಿವೆನು ಮನ್ನಿಸು ವರಕಾಮಧೇನು ||೨|| ನಾರಾಯಣ ನರಹರಿ ಜಗನ್ನಾಥ ದಾರಿದ್ರ್ಯ ದುಃಖ ನಿರ್ಮುಕ್ತ ನೀ ತಾತ ಸಾರಿದವರ ಸಂಸಾರದ ದಾತ ಮಾರಿದ ಮನವಕೊಂಬರೆ ನೀನೆ ಪ್ರೀತ ||೩|| ಉತ್ತಮವಾದ ಶ್ರೀಶೈಲನಿವಾಸ ಭಕ್ತರ ಸಲಹುವ ಬಿರುದುಳ್ಳ ಈಶ ಚಿತ್ತವು ತಿಳಿದೆನ್ನ ಕಾಯೋ ಸರ್ವೇಶ ನಿತ್ಯ ಮಂಗಲವೀವ ವಸ್ತು ಲಕ್ಷ್ಮೀಶ ||೪|| ವರಾಹ ತಿಮ್ಮಪ್ಪನು ಒಲಿದೆನ್ನ ಕರೆದು ಆರಿದ ಬಾಯೊಳು ಅಮೃತವನೆರೆದು ದೂರವಾಗದೆ ಅಡಿಗಡಿಗೆನ್ನ ಹೊರೆದು ಏರುಗಂಡಪರಾಧ ಎಲ್ಲವ ಮರೆದು ||೫|| --- ಈ ರಚನೆ ನೆಕ್ಕರ ಕೃಷ್ಣದಾಸರದು.
ದಾಸ ಸಾಹಿತ್ಯ ಪ್ರಕಾರ
ಬರೆದವರು