ವೇಂಕಟಾಚಲನಿವಾಸ ಸಲಹಯ್ಯ

ವೇಂಕಟಾಚಲನಿವಾಸ ಸಲಹಯ್ಯ

(ಮಧ್ಯಮಾವತಿ ರಾಗ ಝಂಪೆತಾಳ) ವೇಂಕಟಾಚಲನಿವಾಸ ಸಲಹಯ್ಯ ಪಂಕಜಾಕ್ಷನೆ ಶ್ರೀನಿವಾಸ ||ಪ|| ವಾರಿಯೊಳು ಮುಳುಗಾಡಿದೆ, ಮಂದರದ ಮೇರು ಬೆನ್ನೊಳು ತಾಳಿದೆ ಕಾರಡವಿಯೊಳು ಚರಿಸಿದೆ, ಕಂಬದೊಳು ಘೋರ ರೂಪವ ತೋರಿದೆ||೧|| ವಟುವಾಗಿ ಧರೆಯನಳೆದೆ, ಕೊಡಲಿಯೊಳು ಪಟುತರದ ನೃಪರ ಗೆಲಿದೆ ಅಟವಿವಾಸವ ಮಾಡಿದೆ, ರಣದೊಳಗೆ ಚಟುಳ ವಾಜಿಯ ನಡೆಸಿದೆ ||೨|| ಅಂಗದಂಬರವ ಮರೆದೆ, ಕಡೆಯೊಳು, ತು- ರಂಗದೊಳು ಏರಿ ನಲಿದೆ ಬಂಗಾರದದ್ರಿಯೊಳು ಮೆರೆದೆ , ವರಾಹ ರಂಗತಿಮ್ಮಪ್ಪ ಒಲಿದೆ ||೩|| -- ರಚನೆ :- ನೆಕ್ಕರ ಕೃಷ್ಣದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು