ಯಾರೇ ಬಂದವರು ಮನೆಗೆ

ಯಾರೇ ಬಂದವರು ಮನೆಗೆ

( ರಾಗ ಸೌರಾಷ್ಟ್ರ. ಅಟ ತಾಳ) ಯಾರೇ ಬಂದವರು ಮನೆಗೆ ಮ- ತ್ಯಾರೇ ಬಂದವರು ||ಪ|| ನಾರಾಯಣ ಕೃಷ್ಣನಾಥನಲ್ಲದೆ ಬೇರೆ || ವಜ್ರರೇಖೆಗಳಿವೆ ಮನೆಯಲ್ಲಿ, ಕಾಲ ಗೆಜ್ಜೆ ಧ್ವನಿ ಕೇಳಿ ಬರುತಿದೆ ವಜ್ರಮಾಣಿಕ್ಯವೆಲ್ಲ ಹರಿದು ಬಿದ್ದಿವೆ ಮಜ್ಜಿಗೆಯೊಳಗೆ ಕಾಣ್ವ ಬೆಣ್ಣೆಯ ಕಾಣೆ || ಕೊಂಬು ಕೊಳಲು ರಭಸಗಳಿವೆ, ಕ- ದಂಬ ಕಸ್ತೂರಿ ಪೆಂಪೆಸೆದಿವೆ ಪೊಂಬಟ್ಟೆ ಚಲ್ಲಣ ಚೆಲ್ಲಿದೆ ಹಾಲು ಕುಂಭ ಒಡೆದು ಮನೆ ತುಂಬ ಬೆಳ್ಳಗಾಯಿತು || ಮಿಂಚು ಹುಳದಂತೆ ಹೊಳೆವುತ, ತಮ್ಮ ಸಂಚರರೊಡಗೂಡಿ ಚಲಿಸುತ್ತ ವಂಚಿಸಿ ಬೆಣ್ಣೆಯ ಮೆಲ್ಲುತ, ನಮ್ಮ ಲಂಚದ ಪುರಂದರವಿಠಲನಲ್ಲದೆ ಬೇರೇ ||
ದಾಸ ಸಾಹಿತ್ಯ ಪ್ರಕಾರ
ಬರೆದವರು