ಯಾಕೆ ಕಕುಲಾತಿ ಪಡುವೆ

ಯಾಕೆ ಕಕುಲಾತಿ ಪಡುವೆ

( ರಾಗ ಕಲ್ಯಾಣಿ ಅಟತಾಳ) ಯಾಕೆ ಕಕುಲಾತಿ ಪಡುವೆ ಎಲೆ ಮರುಳೆ ||ಪ|| ಲೋಕ ಮೂರನು ಆಳ್ವ ಶ್ರೀನಿವಾಸನು ನಮ್ಮ ಸಾಕಲಾರದೆ ಬಿಡುವನೆ ಮರುಳೆ ||ಅ|| ಕಲ್ಲುಪಡೆಯಲ್ಲಿ ಹುಟ್ಟಿರುವ ಮಂಡೂಕಕೆ ಅಲ್ಲಿ ತಂದಿಡುವರಾರೋ ಎಲ್ಲವನು ತೊರೆದಿರುವ ಅರಣ್ಯವಾಸಿಯನು ಅಲ್ಲೆ ಸಲಹದೆ ಬಿಡುವನೆ ಮರುಳೆ || ಅಡವಿಯೊಳು ಹುಟ್ಟುವ ಮೃಗಜಾತಿಗಳಿಗೆಲ್ಲ ಬಿಡದೆ ತಂದಿಡುವರಾರೋ ಗಿಡದಿಂದ ಗಿಡಗಳಿಗೆ ಹಾರುವ ಪಕ್ಷಿಗೆ ಪಡಿಯನಳೆಯದೆ ಬಿಡುವನೇ ಮರುಳೆ || ಎಂಭತ್ತನಾಲ್ಕು ಲಕ್ಷ ರಾಶಿಗಳನ್ನು ಇಂಬಾಗಿ ಸಲಹುತಿಹನು ನಂಬು ಶ್ರೀಪುರಂದರವಿಠಲನ ಚರಣವನು ನಂಬಿದರೆ ಸಲಹದಿಹನೇ ಮರುಳೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು