ಮುಸುಕ ತೆಗೆದರೆ

ಮುಸುಕ ತೆಗೆದರೆ

(ರಾಗ ಮುಖಾರಿ. ಆದಿ ತಾಳ ) ಮುಸುಕ ತೆಗೆದರೆ ಬೆನ್ನಿಲಿ ನಾಲಿಗೆ , ಇದರ ಹೆಸರು ಬಲ್ಲವರುಂಟೆ ಪೇಳಿ ರಂಗಯ್ಯ ಸತ್ತಿಗೆ ತಲೆಯವಳು ನೆತ್ತಿಲಿ ಬಾಲದವಳು ಕತ್ತಿನ ಕೆಳಗೆ ಕಪ್ಪಿನ ಕೊಪ್ಪಿನವಳು ಸುತ್ತೇಳು ಮೈಗೆರಡು ಜೋಡು ಭಂಗಾರದ ಸೃಷ್ಟಿಯೊಳಗೆ ಇದರ ಹೆಸರು ಬಲ್ಲವರುಂಟೆ ಜಡೆ ಮೆರಗುವ ಬಾಲೆ ಒಡಲೊಳು ಕರುಳಿಲ್ಲ ಬಿಡದೆ ಪಟ್ಟಾವಳಿಯುಟ್ಟು ಬಲ್ಲವಳು ಅಡವಿಯೊಳಗೆ ಪುಟ್ಟಿ ಪಡೆದಳು ದೇಹವ ಪೊಡವಿಯೊಳಗೆ ಇದರ ಹೆಸರು ಬಲ್ಲವರುಂಟೆ ಬೇರಾಗಿ ಬೆರಳೈದು ಮೂರು ತಾನೊಂದಾಗಿ ಯಾರು ಕಂಡರು ಎಂದು ನಸು ನಗುತ ಸೇರಿದ ಭಕುತರ ಪೊರೆವ ರಂಗಯ್ಯನ ಸೇರಿ ಮೆಚ್ಚಿಸಿಕೊಳ್ಳೆ ಪುರಂದರ ವಿಠಲನ
ದಾಸ ಸಾಹಿತ್ಯ ಪ್ರಕಾರ
ಬರೆದವರು