ಮುಂಜಾನೆ ಎದ್ದು ಮುರಹರನ ಸ್ಮರಿಸೆಲಾ ಮನವೇ (ಚತುರ್ವಿಂಶತಿ ನಾಮಾವಳಿ )

ಮುಂಜಾನೆ ಎದ್ದು ಮುರಹರನ ಸ್ಮರಿಸೆಲಾ ಮನವೇ (ಚತುರ್ವಿಂಶತಿ ನಾಮಾವಳಿ )

( ವಸಂತ ರಾಗ ಝಂಪೆತಾಳ) ಮುಂಜಾನೆ ಎದ್ದು ಮುರಹರನ ಸ್ಮರಿಸೆಲಾ ಮನವೇ ಅಂಜು ಭವಭಯದುರಿತ ಹಿಂಗಿಸುವನು ||ಪ|| ಕೇಶವೆಂದೆನಲು ತಾ ಕ್ಲೇಶ ಪರಿಹರಿಸುವನು ನಾಶಗೈಸುವ ಭವ ನಾರಾಯಣೆನಲು | ಮೀಸಲು ಮನದಲೊಮ್ಮೆ ಮಾಧವೆಂದೆನಲು ತಾ ಭಾ- ವಿಸುವ ಹೃದಯದೊಳು ಗೋವಿಂದನು | ವಾಸನಿಯ ಪೂರಿಸುವ ವಿಷ್ಣುಯೆಂದೆನಲು ತಾ ದೋಷ ಛೇದಿಸುವ ಮಧುಸೂದನನೆನಲು | ಭಾಷೆ ಪಾಲಿಸುವ ತ್ರಿವಿಕ್ರಮೆಂದೆನಲು ತಾ ಲೇಸು ಗೈಸುವ ಜನುಮ ವಾಮನನೆನಲು ||೧|| ಸಿರಿ ಸಕಲ ಪದವೀವ ಶ್ರೀಧರನೆಂದೆನಲು ತಾ ಹರುಷ ಗತಿಯೀವ ಹೃಷಿಕೇಶನೆನಲು | ಪರಮಪಾತಕದೂರ ಪದ್ಮನಾಭೆಂದೆನಲು ದಾರಿದ್ರ್ಯಭಂಜನ ದಾಮೋದರೆನಲು | ಸುರಿಸುವ ಅಮೃತ ಸಂಕರುಷಣೆಂದೆನಲು ಹೊರೆವ ಧರೆಯೊಳು ವಾಸುದೇವನೆನಲು | ಪರಿಪರಿಯ ಸಲಹುವ ಪ್ರದ್ಯುಮ್ನನೆಂದೆನಲು ಅರಹು ಗತಿಯೀವ ಅನಿರುದ್ಧನೆನಲು ||೨|| ಪೂರಿಸುವ ಭಾವ ಪುರುಷೋತ್ತಮೆಂದೆನಲು ತಾ ತಾರಿಸುವ ಜನುಮ ಅಧೋಕ್ಷಜೆನಲು | ನರ ಜನ್ಮುದ್ಧರಿಸುವ ನಾರಸಿಂಹೆಂದೆನಲು ಕರುಣ ದಯ ಬೀರುವ ಅಚ್ಯುತ ಎನಲು | ಜರಿಸುವ ದುರ್ವ್ಯಸನ ಜನಾರ್ದನೆನಲು ಊರ್ಜಿತಾಗುವುದು ಉಪೇಂದ್ರ ಎನಲು | ತರಳ ಮಹಿಪತಿ ಪ್ರಾಣದೊಡೆಯ ಶ್ರೀಹರಿ ಎನಲು ಕರುಣದಿಂದಾಗುವ ಗುರು ಕೃಷ್ಣನು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು