ಮನವೆ ಮರೆವರೇನೊ ಹರಿಯ

ಮನವೆ ಮರೆವರೇನೊ ಹರಿಯ

---- ರಾಗ ಯರಕಲ ಕಾಂಬೋಧಿ (ಕಾಫಿ) ಅಟತಾಳ(ತೀನ್ ತಾಲ್) ಮನವೆ ಮರೆವರೇನೊ ಹರಿಯ ಬಹು ||ಪ|| ಜನುಮಗಳಲಿ ಪಟ್ಟ ಬವಣೆಗಳರಿಯ ||ಅ.ಪ|| ವಿಷಯ ಚಿಂತನೆ ಮಾಡೆ ಸಲ್ಲ ಮೇಷ ವೃಷಣನಾದನು ಪೌಲೋಮಿಯ ನಲ್ಲ ಝಷಕೇತುವಿನ ಮೇಳಹೊಲ್ಲ ನಿ- ರಶನನಾಗೊ ಯಮರಾಯ ಎಂದೆಂದು ಕೊಲ್ಲ ||೧|| ಧನವೆ ಜೀವನವೆಂಬೆ ನೀನು, ಸುಯೋ- ಧನನ ನೋಡು, ಧನದಿಂದ ಏನಾದ ಕೊನೆಗೆ ಅನಿರುದ್ಧದೇವನ ಮನೆಗೆ ಪೋಪ ಘನವಿಜ್ಞಾನ ಸಂಪಾದಿಸೊ ಕೊನೆಗೆ ||೨|| ಹರಿದಾಸನಾಗಿ ನೀ ಬಾಳೋ , ಗುರು- ಹಿರಿಯರ ಪಾದಕಮಲಕೆ ನೀ ಬೀಳೊ ನರರ ನಿಂದಾಸ್ತುತಿ ತಾಳೋ, ದೇಹ ಸ್ಥಿರವಲ್ಲ ಸಂಸಾರ ಬಲು ಹೇಯ ಕೇಳೊ ||೩|| ಜಿತನಾಗಿ ಪೇಳುವೆ ಸೊಲ್ಲ, ಹರಿ- ಕಥೆಯಲ್ಲಿ ನಿರತನಾಗಿರು, ಲೋಹಕಲ್ಲ ಪ್ರತಿಮೆ ಪೂಜಿಸಲಲ್ಲೇನಿಲ್ಲ , ಪರೀ- ಕ್ಷಿತನೆಂಬ ರಾಯ ಈ ಮಹಿಮೆಯ ಬಲ್ಲ || ಹಲವು ತೀರ್ಥಗಳಲ್ಲಿ ಸ್ನಾನ ಮಾಡೆ ಮಲ ಪೋಪುದಲ್ಲದೆ ನಿರ್ಮಲ ಜ್ಞಾನ ಫಲಿಸದೆಂದೆಂದಿಗು ಹೀನ ಬುದ್ಧಿ ಕಳೆದು ಸೇವಿಸು ಸಾಧುಗಳನನುದಿನ ||೫|| ಜ್ಞಾನೇಚ್ಛಾಕ್ರಿಯಾಶಕ್ತಿ ತ್ರಯವ ತಿಳಿ- ದಾನಂದಪಡು, ಬಯಸದಿರು ಉಭಯವ ಸಾನುರಾಗದಿ ಬೇಡು ದಯವ ನೀ ಮ- ದ್ದಾನೆಯಂದದಿ ಸಂಚರಿಸು ಬಿಟ್ಟು ಭಯವ ||೬|| ಭಾವಕ್ರಿಯೆ ದ್ರವ್ಯಾದ್ವೈತ ನೀ- ನಾವಾಗ ಚಿಂತಿಸೊ , ಭೌಮಾದಿಭೂತ ಜೀವಗಳು ಜಗನ್ನಾಥವಿಠಲ- ಗಾವಾಸಯೋಗ್ಯವೆಂದರಿಯೊ ಸಂತತ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು