ಮನವೆ ಚಂಚಲಮತಿಯ ಬಿಡು

ಮನವೆ ಚಂಚಲಮತಿಯ ಬಿಡು

(ರಾಗ ಮಧ್ಯಮಾವತಿ ) ಮನವೆ ಚಂಚಲಮತಿಯ ಬಿಡು ||ಪ|| ನಮ್ಮ , ವನಜನಾಭನ ಭಜನೆಯ ಮಾಡು ||ಅ|| ಬಡಮನುಜಗೆ ಬಾಯಬಿಡುತ ದೈನ್ಯದಲವನ ಅಡಿಗಲಿಗೆರಗಲು ಪಡೆವುದೇನೊ ಕಡಲಶಯನ ಜಗದೊಡೆಯನ ನೆನೆಯೆ ಕೈ- ಪಿಡಿದು ಸಲಹುವನು ಬಿಡದಲೆ ಅನುಗಾಲ || ಬಲ್ಲಿದ ಭಜಕರ ಬಲ್ಲವ, ಬಲುಸಿರಿ- ಯುಳ್ಳನು, ಕರುಣಿಯು ನಲ್ಲನಿರೆ ಕ್ಷುಲ್ಲಕರನು ಕಾಯೆ ಸಲ್ಲದೆಂದೆಂದಿಗು ನಿಲ್ಲು ಹರಿಯ ಪಾದದಲ್ಲಿ ತಲ್ಲಣಿಸದೆ || ಮುಗಿಲು ಮೇಲೆಗಡೆ ಅಗಣಿತ ಆಪ- ತ್ತುಗಳು ಬಂದಡರಲು ನಗುತಲಿರು ಜಗದುದರನ ಮಹಿಮೆಗೆ ನಮೋ ನಮೋ ಎಂದು ಪೊಗಳುತ್ತ ಬಾಳಘಗಳನು ಗಣಿಸದಲೆ || ಆವಾವ ಕಾಲಕ್ಕೆ ದೇವನಿಚ್ಛೆಯಿಂದ ಆವಾವುದು ಬರೆ ಸುಖವೆನ್ನು ಶ್ರೀವರ ಅನಾದಿ ಜೀವರ ಕ್ಲ್ ಪ್ತದಂತೆ ಈವನು ನಿಜಸ್ವಭಾವ ಬಿಡದೆ ನಿತ್ಯ || ಕೇಶವಾಚ್ಯುತ ಶ್ರೀನಿವಾಸ ಮುರಾರೇ ದೋಷರಹಿತ ಕ್ಲೇಷನಾಶಕನೆಂದು ಮೋಸಗೊಳಿಪ ಭವಪಾಶವ ಖಂಡಿಪ ಶ್ರೀಶ ಪುರಂದರವಿಠಲನು ಜಗಕಿರೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು