ಮನವೆನ್ನ ಮಾತ ಕೇಳದು ಮಂದಜ್ಞಾನದಿ

ಮನವೆನ್ನ ಮಾತ ಕೇಳದು ಮಂದಜ್ಞಾನದಿ

(ರಾಗ ಶಂಕರಾಭರಣ ಅಟತಾಳ ) ಮನವೆನ್ನ ಮಾತ ಕೇಳದು ಮಂದಜ್ಞಾನದಿ ತನುವಿನಾಸೆಯು ಬಿಡಲೊಲ್ಲದು ||ಪ || ದೇಹಸಂಬಂಧಿಗಳಾದವರೈವರು ಮೋಹಪಾಶದಿ ಕಟ್ಟಿ ಬಿಗಿದಿಹರೈ ದೇಹವನಿತ್ಯವೆಂಬುದ ಗುರುತರಿಯದೆ ಮಾಯ ಪ್ರಪಂಚವೆಂಬುದು ಬದ್ಧವಾಗಿದೆ || ಸಾಧುಸಜ್ಜನರ ಸಂಗವ ಮಾಡಿ ಪರಗತಿಗೆ ಆಧಾರವನು ಮಾಡಲೊಲ್ಲದಯ್ಯ ಕ್ರೋಧಕುಹಕ ದುಷ್ಟರೊಡನಾಡಿ ಕಾಲನ ಬಾಧೆಗೆ ಗುರಿಯ ಮಾಡುತಲಿದೆ ಹರಿಯೆ || ಮದಗಜ ಮೈಯ ಮರೆದು ಮುಂದುಗಾಣದೆ ಕದುವಿಳೊಳಗೆ ಬಿದ್ದಂತಾಯಿತಯ್ಯ ಹೃದಯಕಮಲದಲ್ಲಿ ನಿಂತು ರಕ್ಷಿಸೊ ಎನ್ನ ಪದುಮಾಕ್ಷವರದ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು