ಮಂಗಳಂ ಮಂಗಳಂ ಮುಖ್ಯಪ್ರಾಣರಾಯಗೆ

ಮಂಗಳಂ ಮಂಗಳಂ ಮುಖ್ಯಪ್ರಾಣರಾಯಗೆ

(ರಾಗ ಹಿಂದುಸ್ಥಾನಿ ಕಾಪಿ ಆದಿತಾಳ ) ಮಂಗಳಂ ಮಂಗಳಂ ಮುಖ್ಯಪ್ರಾಣರಾಯಗೆ ||ಪ|| ಮಂಗಳಂ ಮಂಗಳಂ ಕವಿಜನಗೇಯಗೆ ||ಅ|| ಪದುಮಮಿತ್ರಪುತ್ರಗೆ ರಾಜ್ಯವ ಸಾಧಿಸಿಕೊಟ್ಟವಗೆ ಮುದದಿಂದ ವಾರಿಧಿಯ ಲಂಘಿಸಿ ಲಂಕೆಯ ಸುಟ್ಟವಗೆ ಪದುಮಾಕ್ಷಿ ಜಾನಕಿಯ ನೋಡುತ ಮೋದವ ಪಟ್ಟವಗೆ ಹದುಳದಿ ರಘುನಾಥನ ಪದದಲಿ ಶಿರವಿಟ್ಟವಗೆ || ಪುಂಡರೀಕನಯನ ಸುಪ್ರಚಂಡ ಭೀಮಗೆ ಪುಂಡರ ಶಿರಗಳ ರಣದಿ ಚೆಂಡನಾಡ್ದವಗೆ ಚಂಡಿಸಿ ಶಿವನ ವರಗಳನೆಲ್ಲ ಖಂಡಿಸಿದಾತಗೆ ಶುಂಡಾಲಪುರದರಸನೆಂದು ಮಂಡಿಸಿ ಮೆರೆದಗೆ || ದುರುಳ ಮಾಯಾವಾದಿಗಳನ್ನು ಮರುಳ ಮಾಡ್ದವಗೆ ಮುರಳೀಧರನೆ ಪರನೆಂದಾಗ ಧರೆಗೆ ತೋರಿದಗೆ ಶರಣಾಗತರನು ಪೊರೆವನೆಂದು ಬಿರುದು ಪೊತ್ತವಗೆ ಧರೆಯೊಳು ಪುರಂದರವಿಠಲನ ನೆನೆಯುವ ಕರುಣಾಸಾಗರಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು