ಮಂಗಳಂ ಜಯಮಂಗಳಂ

ಮಂಗಳಂ ಜಯಮಂಗಳಂ

(ರಾಗ ಸೌರಾಷ್ಟ್ರ ಆದಿತಾಳ) ಮಂಗಳಂ ಜಯಮಂಗಳಂ ||ಪ|| ಚರಿಸುವ ಜಲದಲಿ ಮತ್ಸ್ಯವತಾರನಿಗೆ ಗಿರಿಯ ಬೆನ್ನಿಲಿ ಪೊತ್ತ ಕೂರ್ಮನಿಗೆ ಧರೆಯನುದ್ಧರಿಸಿದ ವರಹವತಾರನಿಗೆ ತರಳನ ಕಾಯ್ದ ನರಸಿಂಹಗೆ || ಭೂಮಿಯ ದಾನವ ಬೇಡಿದಗೆ ಆ ಮಹಾ ಕ್ಷತ್ರಿಯರ ಗೆಲಿದವಗೆ ರಾಮಚಂದ್ರನೆಂಬ ಸ್ವಾಮಿಗೆ ಸತ್ಯ- ಭಾಮೆಯರಸ ಗೋಪಾಲಕೃಷ್ಣಗೆ || ಬತ್ತಲೆ ನಿಂತಿದ್ದ ಬೌದ್ಧನಿಗೆ ಉತ್ತಮ ಹಯವೇರಿದ ಕಲ್ಕಿಗೆ ಹತ್ತವತಾರದಿ ಭಕ್ತರ ಸಲಹುವ ಕರ್ತು ಶ್ರೀಪುರಂದರವಿಠಲನಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು