ಮಂಗಳಂ ಜಯಮಂಗಳಂ (2)

ಮಂಗಳಂ ಜಯಮಂಗಳಂ (2)

(ರಾಗ ಸೌರಾಷ್ಟ್ರ ಆದಿತಾಳ) ಮಂಗಳಂ ಜಯಮಂಗಳಂ ||ಪ|| ಶಕುತಿಯಿಂದಲಿ ಶಿಶುಪಾಲಾದಿ ಸಕಲ ಮಹಾರಾಯರ ಕಾದಿ ರುಕುಮನ ಗೆಲಿದು ರೂಢಿಯಿಂದಲಿ ತಂದು ರುಕುಮಿಣಿಯಾಳಿದ ಶ್ರೀಕೃಷ್ಣಗೆ || ಕಾಳಗದಿ ನರಕಾಸುರನ ಸೀಳಿ ಬೀಸಾಡಿ ಕೈಸೆರೆ ಪಿಡಿದು ಸೋಳಸಾಸಿರ ಸುದತಿಯರೆಲ್ಲರ ಆಳಿದ ವಾಸುದೇವಾತ್ಮಜಗೆ || ಸರಸಿಜಭವ ದನುಜರು ಕ್ಷೀರ ಶರಧಿಯ ಮಥಿಸಲು ಸಂಭ್ರಮದಿ ಸಿರಿಯು ಜನಿಸಲು ವರಿಸಿದ ನಿತ್ಯದಿ ವರದ ಪುರಂದರವಿಟ್ಠಲಗೆ |||
ದಾಸ ಸಾಹಿತ್ಯ ಪ್ರಕಾರ
ಬರೆದವರು