ಬಿಲ್ಲೆಗಾರನು ಆದನು ರಂಗಯ್ಯ

ಬಿಲ್ಲೆಗಾರನು ಆದನು ರಂಗಯ್ಯ

( ರಾಗ ಶಂಕರಾಭರಣ. ಆದಿ ತಾಳ) ಬಿಲ್ಲೆಗಾರನು ಆದನು ರಂಗಯ್ಯ ರಂಗ ||ಪ|| ಬಿಲ್ಲೆಗಾರನಾಗಿ ಎನ್ನ ಕಾವಲಾದ ಬಲ್ಲವರ ಭಾಗ್ಯವೊ ಎಲ್ಲವರಿತ ಸ್ವಾಮಿ ||ಅ|| ಸಾಟಿಯಿಲ್ಲದ ಪರಿ ತಲೆಯಲಿ ಕಟ್ಟಿಹ ನೀಟಾಗಿ ಧರಿಸಿಪ್ಪ ಅಂಗಿಗಳು ನೋಟಕ್ಕೆ ಆಶ್ಚರ್ಯ ಕಾಲಲಿ ತೊಟ್ಟದ್ದು ಜಾಡೆ ಮಾಡುತ ಎನ್ನ ಬೆನ್ನ್ಹಿಂದೆ ನಿಂದನು || ನಡುವಿಲಿ ಸುತ್ತಿಹ ಬಣ್ಣದ ಪಟ್ಟೆಯ ಎಡದಲಿ ಪೊಳೆವುದು ಬಲ್ಲೆ ಒಂದು ಒಡೆಯ ಎನ್ನಣ್ಣಯ್ಯ ಕರಗಳ ಕಟ್ಟಿಹ ಬೆಡಗು ಮಾಡುತಲಿ ಬೆನ್ನಟ್ಟಿ ಬಂದನು || ಒಂದೊಂದು ರೂಪದಿ ಒಂದೊಂದು ಭಕುತಗೆ ಒಂದೊಂದು ಕಾಲದಿ ತೋರುತಲಿ ಕಂದ ಕೃಷ್ಣ ಎನ್ ತಂದೆ ಪುರಂದರವಿಠಲ ಇಂದಿಲ್ಲಿ ಬಂದನು ಬಿಲ್ಲೆಗಾರನಾಗಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು