ಬಿನ್ನೈಪೆ ನಿನಗಾನು ಭೀಮಸೇನ

ಬಿನ್ನೈಪೆ ನಿನಗಾನು ಭೀಮಸೇನ

(ರಾಗ ಕಾಂಬೋಧಿ (ಭೂಪ್ ) ಝಂಪೆತಾಳ) ಬಿನ್ನೈಪೆ ನಿನಗಾನು ಭೀಮಸೇನ ||ಪ|| ಬನ್ನಬಡುತಿಹ ಜನರ ಭಯವ ಪರಿಹರಿಸೆಂದು ||ಅ.ಪ|| ನೀಚರಿಂದಲಿ ಬಂದ ಭಯಗಳಿಂದಲಿ ಜನರು ಯೋಚಿಸುವರೆಮಗಾರು ಗತಿಯೆನುತಲಿ ಕೀಚಕಾಂತಕ ನಿನ್ನ ಕೀರ್ತಿ ಬಹುವಿಧ ಕೇಳಿ ಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು ||೧|| ರೋಚನೇಂದ್ರನೆ ಭವವಿಮೋಚಕನು ನೀನೆ ಸಚರಾಚರಕೆ ಸಂತತ ಪುರೋಚನಾರೆ ಪ್ರಾಚೀನ ಕರ್ಮಾಬ್ಧಿವೀಚಿಯೊಳು ಮುಳುಗಿಹರ ಖೇಚರೇಂದ್ರಾಹಿಪ ತ್ರಿಲೋಚನರ ಗುರುವೆಂದು ||೨|| ಖಚರೋತ್ತಮನೆ ನಿನ್ನ ಸುಚರಿತ್ರೆಗಳ ಕೇಳಿ ರಚನೆಗಯ್ಯಬಲ್ಲೆನೆ ಅಚಲಸತ್ವ ಪ್ರಚಲಿಸುತ್ತಿಹ ಮನೋವಚನಕಾಯವ ಘಟೋ- ತ್ಕಚಜನಕ ಸಜ್ಜನರ ಪ್ರಚಯ ಮಾಡುವುದೆಂದು ||೩|| ಈ ಚತುರ್ದಶ ಭುವನದಾಚಾರ್ಯ ದೇಶ ಕಾ- ಲೋಚಿತ ಸುಧರ್ಮಗಳ ಸೂಚಿಸೆಮಗೆ ಪಾಚಕನೆ ನಿನ್ನಡಿಗೆ ಚಾಚುವೆನು ಶಿರ ಸವ್ಯ- ಸಾಚಿಸೋದರನೆ ದಯಗೋಚರಿಸಿ ಸಲಹೆಂದು ||೪|| ವಾಚಾಮಗೋಚರ ಜಗನ್ನಾಥವಿಠ್ಠಲನ ಶ್ರೀ ಚರಣಭಜಕ ನಿಶಾಚರಾರೇ ಮೈಚರ್ಮ ಸುಲಿದು ದುಶ್ಶಾಸನ ರಕುತ ಪರಿ- ಷೇಚನೆಯ ಮಾಡಿದೆ ಮಹೋಚಿತವಿದೆಂದರಿತು ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು