ಬಾರಯ್ಯ ರಂಗ ಬಾರಯ್ಯ ಕೃಷ್ಣ

ಬಾರಯ್ಯ ರಂಗ ಬಾರಯ್ಯ ಕೃಷ್ಣ

( ರಾಗ ಶಂಕರಾಭರಣ. ಅಟ ತಾಳ) ಬಾರಯ್ಯ ರಂಗ ಬಾರಯ್ಯ ಕೃಷ್ಣ ಬಾರಯ್ಯ ಸ್ವಾಮಿ ಬಾರಯ್ಯ ||ಪ|| ವಾರಣಭಯವ ನಿವಾರಣ ಮಾಡಿದ ಕಾರುಣ್ಯನಿಧಿಯೆನ್ನ ಹೃದಯ ಮಂದಿರಕೆ ||ಅ|| ಮೊದಲಿಂದ ಬರಬಾರದೆ ನಾನು ಬಂದೆ ತುದಿ ಮೊದಲಿಲ್ಲದ್ಹೊಂದಿದೆ ಅಪನಿಂದೆ ಇದು ಗೆದ್ದು ಕಳೆದುಪೋಪುದು ಹೇಗೆ ಮುಂದೆ ಪದುಮನಾಭ ತಪ್ಪು ಕ್ಷಮಿಸಯ್ಯ ತಂದೆ || ಹೆಣ್ಣು ಹೊನ್ನು ಮಣ್ಣಿನಾಸೆಯೊಳಿದ್ದು ಪುಣ್ಯ ಪಾಪಂಗಳ ನಾನರಿತಿದ್ದು ಅನ್ಯಾಯವಾಯಿತು ಇದಕೇನು ಮದ್ದು ನಿನ್ನ ಧ್ಯಾನವ ಕೊಡು ಹೃದಯದೊಳಿದ್ದು || ಇಂದೆನ್ನ ಪೂರ್ವ ಪಾಪಂಗಳ ಕಳೆದು ಮುಂದೆನ್ನ ಜನ್ಮ ಸಫಲವನ್ನುಗೈದು ತಂದೆ ಪುರಂದರವಿಠಲ ನೀನೊಲಿದು ಎಂದೆಂದಿಗಾನಂದ ಸುಖವನ್ನು ಸುರಿದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು