ಬಂಧನವ ಪರಿಹರಿಸು ಭಯವಿದೂರ

ಬಂಧನವ ಪರಿಹರಿಸು ಭಯವಿದೂರ

------ರಾಗ -ಕಾಂಬೋಧಿ ಝಂಪೆತಾಳ ಬಂಧನವ ಪರಿಹರಿಸು ಭಯವಿದೂರ ಕಂದರ್ಪಜನಕ ಕಾರುಣ್ಯದಲಿ ಭಕ್ತಜನ ||ಪ|| ದುಷ್ಟಜನರು ಬಲು ಕಷ್ಟಪಡಿಸುವರು ನಿನಗೆಷ್ಟು ಉಸುರಲಿ ಕೇಳು ಜಿಷ್ಣುಸಖನೇ ವೃಷ್ಣೀಶ ನೀ ದಯಾದೃಷ್ಟಿಯಿಂದಲಿ ಈಗ ಹೃಷ್ಟನ್ನ ಮಾಡು ಸಂತುಷ್ಟಿಯಲಿ ಬೇಗ ||೧|| ಹಯಮುಖನೆ ನಿನ್ನವರ ದಯದಿಂದ ಸಲಹುವದು ವಯನಗಮ್ಯನೆ ಜ್ಞಾನತ್ರಯವ ನಿರುತ ಪ್ರಿಯನೆಂದು ನಿನಗೆ ನಾ ದೈನ್ಯದಿಂದಲಿ ಮೊರೆ ಇಡುವೆ ದಯಮಾಡುವದು ನೀನು ಜಯಪ್ರದಾಯಕನಾಗಿ ||೨|| ವೀತಶೋಕನೆ ಎನ್ನ ಮಾತು ಲಾಲಿಸಿ ನಿನ್ನ ದೂತನ್ನ ಸಲಹುವದು ಪ್ರೀತಿಯಿಂದ ದಾತ ಶ್ರೀಗುರು ಜಗನ್ನಾಥವಿಠಲ ನಿನ್ನ ನಾ ತುತಿಸಬಲ್ಲೆನೆ ವಿಧಾತೃಮಖವಂದಿತನೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು