ಬಂದೆ ರಂಗಯ್ಯ ನಿನ್ನ ಬಳಿಗೆ

ಬಂದೆ ರಂಗಯ್ಯ ನಿನ್ನ ಬಳಿಗೆ

( ರಾಗ ಆನಂದಭೈರವಿ. ಅಟ ತಾಳ) ಬಂದೆ ರಂಗಯ್ಯ ನಿನ್ನ ಬಳಿಗೆ ||ಪ|| ಎಲ್ಲಿಗ್ಹೋದರು ಸುಖವಿಲ್ಲ, ಅವ- ರೆಲ್ಲರ ಸೇವೆಯ ಮಾಡ ಬೇಕಲ್ಲ ಒಳ್ಳೆದಾಯಿತು ಎಂಬೊರಿಲ್ಲ, ರಂಗ, ಎ- ನ್ನಲ್ಲಿ ತಪ್ಪುಗಳೆಣಿಸುವರೆಲ್ಲ || ಕಸಮುಸುರೆಯ ಮಾಡಲಾರೆ ......................... (?) ಸೊಸೆಯ ಮಗನ ಮಾತು ಬೇರೆ ,ಇಂಥಾ ಹಸಗೆಟ್ಟ ಸಂಸಾರ ನಾ ಮಾಡಲಾರೆ ಸೊಂಟಿಬೇರಿಗೆ ಕಾಸಿಲ್ಲ, ಎನಗೆ ಸೊಟ್ಟಾದ ನೋವು ಘನವಾಯಿತಲ್ಲ ಕಂಠಕ್ಕೆ ಬಂದಿದೆಯಲ್ಲ, ಕೈ ಇಟ್ಟು ರೊಕ್ಕಗಳಾರು ಕೊಡುವವರಿಲ್ಲ || ಇದ್ದ ಕಡೆ ಇರಲೀಸರು , ಅಲ್ಲಿಂ ದೆದ್ದು ಬಂದರೆ ಸಿಟ್ಟುಗಾರರು ಬಿಡರು ಮಧ್ಯಾಹ್ನಕ್ಕನ್ನದ ತೊಡರು ಒಂ- ದು ದುಡ್ಡು ಕೇಳಿದರ್ಯಾರು ಸಾಲವ ಕೊಡರು || ಸೋಮವಾರದ ವ್ರತವೆನಗೆ ,ಒಂದು ದೀವಿಗೆ ಹಚ್ಚಲು ತೆರವಿಲ್ಲವಲ್ಲ ಭಾವಿಸಿ ನೋಡುವರಿಲ್ಲ, ನಮ್ಮ ಪುರಂದರವಿಠಲನೆ ಬಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು