ಪಂಥ ಬೇಡಿ ಪ್ರಾಣಿಗಳಿರ

ಪಂಥ ಬೇಡಿ ಪ್ರಾಣಿಗಳಿರ

(ಉದಯರಾಗ ಆದಿತಾಳ) ಪಂಥ ಬೇಡಿ ಪ್ರಾಣಿಗಳಿರ ||ಪ|| ಸಂತತ ಹರಿದಾಸರಾಗಿ ಅಂತಕಪುರ ಸುಖವಿಲ್ಲ ಯಮನು ಬಹು ಹೊಲ್ಲ ||ಅ|| ಕಡೆಯ ಝಾಮದಲೆದ್ದು ಹರಿಯ ಸ್ಮರಣೆಯ ಮಾಡಿ ನುಡಿ ಹರಿಯ ಕೀರ್ತನೆ ಒಡನೆ ಮಾಡಿ ಕಡುಸ್ನೇಹದಲ್ಲಿ ಕರವ ಪಾದಕಮಲದಲಿಟ್ಟು ಬಿಡದೆ ಸೇವೆಯ ಮಾಡೋ ಚಿತ್ತವಲ್ಲಿಡೊ || ಮಧ್ವಮತವನೆ ಭಜಿಸೊ ಮದನನಯ್ಯನ ಒಲಿಸೊ ಉದ್ಧರಿಸೊ ನಿನ್ನ ಕುಲವ ಛಲವು ಬೇಡ ಸಿದ್ಧಾಂತನೆಂದೆನಿಸೊ ಸಜ್ಜನ ಸಂಗವ ಬಯಸೊ , ಅ- ಬದ್ಧ ಮಾತನೆ ತ್ಯಜಿಸೊ ಹರಿಯ ಭಜಿಸೊ || ಪ್ರೇಮದಲಿ ಘನಸುಖ ನೇಮದಲಿ ಹರಿಸಖ ದುರ್ಮತಗಳ ಬಿಟ್ಟು ದುಷ್ಟರ ಸಂಗ ಅಟ್ಟು ಅಮರಪತಿ ಗಣಪ್ರಿಯ ಪುರಂದರವಿಠಲನ್ನ ಕ್ರಮದಿಂದ ಮೊರೆಹೊಕ್ಕು ನಂಬಿ ಸುಖದಕ್ಕೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು