ನೆರೆ ನಂಬಿರೊ ಎಲೆ ಅಣ್ಣ

ನೆರೆ ನಂಬಿರೊ ಎಲೆ ಅಣ್ಣ

( ಉದಯರಾಗ ) ನೆರೆ ನಂಬಿರೊ ಎಲೆ ಅಣ್ಣ ||ಪ|| ಸಿರಿಯರಸನ ಕರುಣಾಳುವ ಸರಸಿಜಸಂಭವನ ಪಿತನ ಸುರರೊಡೆಯನ ಸಕಲ ವೇದ ಒರಲೊ ಹರಿಯ ಪರದೇವತೆ ಇದೇ ಇದೇ ಎಂದು ಕರಕಮಲದೊಳಿಟ್ಟು ಮೆರೆವ ಪರಮಹಂಸರಾದ ವ್ಯಾಸರಾಯರ || ಜ್ಞಾನಭಕ್ತಿ ವೈರಾಗ್ಯ ನಿಧಾನವ ನಮಗಿತ್ತು ಮೆರೆವ ದಾನವಾರಿ ಗುಣಗಣದಲಿ ಮನಮೊಳೆತಿಪ್ಪನ ತಾನೆ ದೈವವೆಂಬಾಸುರಕಾನನಗಳ ತರಿದಟ್ಟುವ ಆನಂದತೀರ್ಥರ ಪಟ್ಟದಾನೆ ವ್ಯಾಸರಾಯರ || ಅಂದು ಸಾಸಿರಮುಖದಲಿ ಮೋದದಲಿ ಮು- ಕುಂದನ ಅಹಿರಾಜ ಪೊಗಳಿದಂದದಲಿಂದು ಕೃಪೆ- ಯಿಂದ ಪೊರೆವ ಅಭಿನವ ಪುರಂದರವಿಠಲನ ಜಗಕೆ ತಂದು ತೋರಿದ ವೈಷ್ಣವ ಕುಮುದೇಂದು ವ್ಯಾಸರಾಯರ ||
ದಾಸ ಸಾಹಿತ್ಯ ಪ್ರಕಾರ
ಬರೆದವರು