ನೀನೇ ಅನಾಥಬಂಧು ಕಾರುಣ್ಯಸಿಂಧು

ನೀನೇ ಅನಾಥಬಂಧು ಕಾರುಣ್ಯಸಿಂಧು

(ರಾಗ ನಾದನಾಮಕ್ರಿಯಾ ಛಾಪುತಾಳ ) (ರಾಗ ತೋಡಿ ಅಟತಾಳ) ನೀನೇ ಅನಾಥಬಂಧು ಕಾರುಣ್ಯಸಿಂಧು ||ಪ|| ಮದಗಜವೆಲ್ಲ ಕೂಡಿದರೇನು ಅದರ ಸಮಯಕೊದಗಲಿಲ್ಲ ಮದನಯ್ಯ ಮಧುಸೂದನನೆಂದರೆ ಮುದದಿಂದಲಿ ಬಂದೊದಗಿದೆ ಕೃಷ್ಣ || ಪತಿಗಳೈವರಿದ್ದರೇನು ಸತಿಯ ಭಂಗಕೊದಗಲಿಲ್ಲ ಗತಿ ನೀನೇ ಮುಕುಂದನೆಂದರೆ ಅತಿವೇಗದಿ ಅಕ್ಷಯವಿತ್ತೆ ಕೃಷ್ಣ || ಶಿಲೆಯ ಮೆಟ್ಟಿ ಕುಲಕೆ ತಂದೆ ಬಲಿಯ ಬೇಡಿ ಸತ್ಪದವಿಯನಿತ್ತೆ ಸುಲಬಧಿ ಭಕ್ತರ ಸಲಹುವ ನಮ್ಮ ಚೆಲುವ ಪುರಂದರವಿಠಲರಾಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು