ನಿಲ್ಲಬೇಕಯ್ಯ ಕೃಷ್ಣಯ್ಯ

ನಿಲ್ಲಬೇಕಯ್ಯ ಕೃಷ್ಣಯ್ಯ

(ರಾಗ ಮೋಹನ. ಅಟ ತಾಳ ) ನಿಲ್ಲಬೇಕಯ್ಯ ಕೃಷ್ಣಯ್ಯ ನೀ ||ಪ|| ನಿಲ್ಲಬೇಕಯ್ಯ ಮಲ್ಲಮರ್ದನ ಸಿರಿ- ವಲ್ಲಭ ಎನ್ನ ಹೃದಯದಲ್ಲಿ ಸಂತತ ನೀ ||ಅ.ಪ|| ಸುಪ್ಪಾಣಿ ಮುತ್ತಿಟ್ಟು ನೋಡುವೆ, ಸದಾ ಚಪ್ಪಾಳೆ ತಟ್ಟಿ ನಾ ಪಾಡುವೆ ಅಪ್ಪಾ ಶ್ರೀ ಕೃಷ್ಣನೆ ಎತ್ತಿ ಮುದ್ದಿಸಿಕೊಂಬೆ ಸರ್ಪ ಶಯನ ಕೃಪೆ ಮಾಡೆಂದು ಬೇಡುವೆ || ಚಂದದ ಹಾಸಿಗೆ ಹಾಸುವೆ , ಪುನುಗು ಗಂಧ ಕಸ್ತೂರಿಯ ಪೂಸುವೆ ಅಂದದಿ ಮುತ್ತಿನ ಹಾರ ಹಾಕುವೆ, ಆ- ನಂದದಿಂದಲಿ ನಿನ್ನ ಎತ್ತಿ ಮುದ್ದಿಸಿಕೊಂಬೆ|| ನೀಲದ ಕಿರೀಟ ನಿನಗಿಡುವೆ, ಬಲು ಬಾಲಲೀಲೆಗಳನು ಪಾಡುವೆ ಮಾಲೋಲ ಪುರಂದರ ವಿಠಲನರಾಯನೆ ನಿಲು ಎನ್ನ ಮನದಲ್ಲಿ ಒಂದೇ ಗಳಿಗೆ||
ದಾಸ ಸಾಹಿತ್ಯ ಪ್ರಕಾರ
ಬರೆದವರು