ನಾನೇನು ಮಾಡಿದೆನೋ

ನಾನೇನು ಮಾಡಿದೆನೋ

(ರಾಗ ಸಾರಂಗ. ಅಟ ತಾಳ ) ನಾನೇನು ಮಾಡಿದೆನೋ, ಕೃಷ್ಣಯ್ಯ ನೀನೆನ್ನ ಸಲಹಬೇಕು ಕರಿರಾಜ ಕರೆಸಿದನೆ, ದ್ರೌಪದಿ ದೇವಿ ಬರೆದೋಲೆಯ ಕಳುಹಿದಳೆ ಹರುಷದಿಂದಲಿ ಋಷಿಪತ್ನಿಯ ಶಾಪವ ಪರಿಹರಿಸಿದೆಯಲ್ಲೋ ಹೇ ಸ್ವಾಮಿ ರಕ್ಕಸ ತನುಜನಲ್ಲೆ ಪ್ರಹ್ಲಾದ ಚಿಕ್ಕ ಪ್ರಾಯದ ಧ್ರುವನು ಸಿಕ್ಕಿದ ಪಾಪ ಮಾಡಿದ ಅಜಾಮಿಳ ನಿ- ನ್ನಕ್ಕರೆ ಮಗನೆ ಪೇಳೊ ಹೇ ಸ್ವಾಮಿ ಒಪ್ಪಿಡಿ ಅವಲಕ್ಕಿಯ ಕೃಷ್ಣಯ್ಯ ನಿನ- ಗೊಪ್ಪಿಸಿದವಗೊಲಿದೆ ಒಪ್ಪೆನು ನಿನಗೆ ಶ್ರೀ ಪುರಂದರವಿಠಲವ- ರಪ್ಪಂತೆ ಕಾಯಬೇಕೋ ಹೇ ಸ್ವಾಮಿ
ದಾಸ ಸಾಹಿತ್ಯ ಪ್ರಕಾರ
ಬರೆದವರು