ನರನಾದ ಮೇಲೆ

ನರನಾದ ಮೇಲೆ

(ರಾಗ ನಾದನಾಮಕ್ರಿಯಾ. ಆದಿ ತಾಳ ) ನರನಾದ ಮೇಲೆ ಹರಿ ನಾಮ ಜಿಹ್ವೆಯೊಳಿರಬೇಕು ಭೂತ ದಯಾಪರನಾಗಿರ ಬೇಕು ಪಾತಕವೆಲ್ಲವ ಕಳೆಯಲು ಬೇಕು ಮಾತು ಮಾತಿಗೆ ಹರಿಯೆನ್ನ ಬೇಕು ಆರು ವರ್ಗವನಳಿಯಲು ಬೇಕು ಮೂರು ಗುಣಂಗಳ ಮೀರಲು ಬೇಕು ಸೇರಿ ಬ್ರಹ್ಮನೊಳಿರಬೇಕು ಅಷ್ಟ ಮದಂಗಳ ತುಳಿಯಲು ಬೇಕು ದುಷ್ಟರ ಸಂಗವ ಬಿಡಲು ಬೇಕು ಕೃಷ್ಣ ಕೇಶವ ಎನ್ನಬೇಕು ವೇದ ಶಾಸ್ತ್ರವನೋದಲು ಬೇಕು ಭೇದಹಂಕಾರವ ನೀಗಲು ಬೇಕು ಮಾಧವ ಸ್ಮರಣೆಯೊಳಿರಬೇಕು ಶಾಂತಿ ಕ್ಷಮೆ ದಮೆ ಪಿಡಿಯಲು ಬೇಕು ಭ್ರಾಂತಿ ಕ್ರೋಧವ ಕಳೆಯಲು ಬೇಕು ಸಂತರ ಸಂಗದಿ ರತಿಯಿರಬೇಕು ಗುರುವಿನ ಚರಣಕ್ಕೆರಗಲು ಬೇಕು ತರಣೋಪಾಯವನರಿಯಲು ಬೇಕು ವಿರಕ್ತಿ ಮಾರ್ಗದಲಿರಬೇಕು ಬಂದದ್ದುಂಡು ಸುಖಿಸಲು ಬೇಕು ನಿಂದಾ ಸ್ತುತಿಗಳ ತಾಳಲು ಬೇಕು ತಂದೆ ಪುರಂದರವಿಟ್ಠಲನೆನಬೇಕು
ದಾಸ ಸಾಹಿತ್ಯ ಪ್ರಕಾರ
ಬರೆದವರು