ನಂಬು ಕಂಡ್ಯ ಮನವೆ

ನಂಬು ಕಂಡ್ಯ ಮನವೆ

(ರಾಗ ಕೇದಾರಗೌಳ ಅಟತಾಳ) ನಂಬು ಕಂಡ್ಯ ಮನವೆ ನಂಬು ಶ್ರೀ ಕೃಷ್ಣನ ಚರಣಕಮಲವ ||ಪ|| ಒಂಭತ್ತು ಬಾಗಿಲ ಪಟ್ಟಣದೊಳಗೆ ಸಂಭ್ರಮದಿಂದ ಬೈಲಾಗದ ಮುನ್ನ ನೀ || ಆರು ಮಂದಿ ಕಳ್ಳರು ಊರೊಳಗೆ ಸೂರೆಮಾಡಿ ಘಾಸಿ ಮಾಡದ ಮುನ್ನ ನೀ || ಏಳು ಸುತ್ತಿನ ಕೋಟೆ ಘನದುರ್ಗವನ್ನು ಕಾಲನವರು ಬಂದು ಕರೆಯದ ಮುನ್ನ ನೀ || ದೇಹ ನಾಯಕ ದೇವರು ತಾವು ದೇಹದ ಬಿಡಕೆ ಬಿಡಪಾದ ಮುನ್ನ ನೀ || ಪುರವಿದು ಸ್ಥಿರವಲ್ಲ ಮೆಚ್ಚಿ ಕೆಡಲುಬೇಡ ಪುರಂದರವಿಠಲನ್ನ ಆ ಪಾದಪದುಮವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು