ನಂದತನಯ ಗೋವಿಂದನ ಭಜಿಪುದಾನಂದ

ನಂದತನಯ ಗೋವಿಂದನ ಭಜಿಪುದಾನಂದ

(ರಾಗ ಖಮಾಸ್ ಅಟತಾಳ / ರಾಗ ಬಾಗೇಶ್ರೀ ಖಂಡಛಾಪು ತಾಳ ) ನಂದತನಯ ಗೋವಿಂದನ ಭಜಿಪುದಾನಂದವಾದ ಮಿಠಾಯಿ ||ಪ|| ಬಂಧಗಳನು ಭವ ರೋಗಗಳೆಲ್ಲನೂ ನಿಂದಿಪದೀ ಮಿಠಾಯಿ ||ಅ || ದಧಿ ಘೃತ ಕ್ಷೀರಕ್ಕಿಂತಲು ಇದು ಬಹು ಅಧಿಕವಾದ ಮಿಠಾಯಿ ಕದಳಿ ದ್ರಾಕ್ಷಿ ಖರ್ಜೂರ ರಸಗಳನು ಮೀರುವುದೀ ಮಿಠಾಯಿ || ಪಂಚ ಭಕ್ಷ್ಯಂಗಳ ಷಡ್ರಸಾನ್ನಗಳ ಮಿಂಚಿದಂಥ ಮಿಠಾಯಿ ಕಂಚೀಶನೆ ರಕ್ಷಿಸು ಎಂದುಸಿರುವರಂಜಿಕೆ ಬಿಡಿಪ ಮಿಠಾಯಿ || ಜಪ ತಪ ಸಾಧನಗಳಿಗಿಂತಲು ಬಹು ಅಪರೂಪದ ಮಿಠಾಯಿ ಜಿಪುಣಮತಿಗಳಿಗೆ ಸಾಧ್ಯವಿಲ್ಲದಿಹ ಪುರಂದರವಿಠಲ ಮಿಠಾಯಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು